ಸರಳ ವ್ಯಕ್ತಿತ್ವ, ಗಾಂಧಿ ಅನುಯಾಯಿ ಮಾದಪ್ಪ ಮಾಜಿ ಮುಖ್ಯಮಂತ್ರಿ ದಿವಂಗತ ಜೆ.ಎಚ್.ಪಟೇಲರ ಒಡನಾಡಿ. ಪಟೇಲ್ ನಿಧನದ ನಂತರ ಜೆಡಿಎಸ್ ಸೇರಿದ್ದರು. ಎರಡು ಅವಧಿ ಜೆಡಿಎಸ್ ಜಿಲ್ಲಾ ಘಟಕದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ಸ್ಪರ್ಧಿಸಿವಿಧಾನ ಪರಿಷತ್ ಪ್ರವೇಶಿಸಿದ್ದರು.ವಿವಿಧ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿದ್ದ ಅವರು ಹಲವು ಜನಪರ ಹೋರಾಟಗಳನ್ನು ರೂಪಿಸಿದ್ದರು. ಪ್ರಸ್ತುತ ದಿನಗಳವರೆಗೂಶಿವಮೊಗ್ಗ ಖಾದಿ ಭಂಡಾರದ ಅಧ್ಯಕ್ಷರಾಗಿಕಾರ್ಯನಿರ್ವಹಿಸುತ್ತಿದ್ದರು.ಅವರಿಗೆ ಇಬ್ಬರು ಪುತ್ರಿಯರು,ಒಬ್ಬ ಪುತ್ರ ಇದ್ದಾರೆ.