ಭಾರತದ ಉತ್ಪನ್ನಗಳಿಗೆ ಜಾಗತಿಕ ಬೇಡಿಕೆ
ಭಾರತ ಈ ಹಿಂದೆ ವಿಶ್ವಗುರುವಾಗಿತ್ತು. ಮತ್ತೊಮ್ಮೆ ವಿಶ್ವಗುರು ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಬಲಿಷ್ಠ ದೇಶವನ್ನು ಕಟ್ಟಲು ನಮ್ಮ ಸರ್ಕಾರ ಬದ್ಧವಾಗಿದೆ. ಗುಣಮಟ್ಟ ಸ್ವಚ್ಛತೆ ಸೇರಿದಂತೆ ಎಲ್ಲ ಮಾನದಂಡಗಳನ್ನು ಅನುಸರಿಸಿ ಭಾರತದಲ್ಲಿ ನಿರ್ಮಿಸಿದ ವಸ್ತುಗಳಿಗೆ ಜಾಗತಿಕ ಬೇಡಿಕೆ ಬಂದಿದೆ ಎಂದರು ಹೇಳಿದರು. ’ನಮ್ಮ ಮಕ್ಕಳು ಎಂಬಿಬಿಎಸ್ ಸೀಟು ದೊರೆಯದೇ ಆರ್ಯುವೇದಕ್ಕೆ ಬಂದೆ ಎಂದು ಹೇಳುವ ಬದಲು ಮೆಡಿಕಲ್ ಸೀಟು ಬಿಟ್ಟು ಬಿಎಎಂಎಸ್ಗೆ ಬಂದೆ ಎಂದು ಹೇಳುವ ಕಾಲ ನಿರ್ಮಾಣ ಮಾಡಬೇಕು‘ ಎಂದು ಸಲಹೆ ನೀಡಿದರು. ’ನಮ್ಮ ಉತ್ಪನ್ನಗಳು ವಿದೇಶದ ಗ್ರಾಹಕರನ್ನು ಸೆಳೆಯುತ್ತಿವೆ. ವಿಶ್ವಾಸ ನಂಬಿಕೆ ಮೇಲೆ ವ್ಯವಹಾರ ಮಾಡಲಾಗುತ್ತದೆ. ಶೀಘ್ರದಲ್ಲಿಯೇ ಭಾರತ ಬಲಿಷ್ಠ ದೇಶಗಳ ಗುಂಪಿಗೆ ಸೇರಲಿದೆ‘ ಎಂದು ಹೇಳಿದರು.