<p><strong>ಹುಬ್ಬಳ್ಳಿ:</strong> ಹಳೆ ಮಂಟೂರ ರಸ್ತೆಯ ಸನಾದಿ ಅಪ್ಪಣ್ಣ ವೃತ್ತದಿಂದ ರೈಲ್ವೆ ಕ್ರಾಸಿಂಗ್ ವರೆಗೆ ₹10 ಕೋಟಿ ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಾಣ. ₹44ಲಕ್ಷ ಅನುದಾನದಲ್ಲಿ ವಿದ್ಯುತ್ ಬೀದಿ ದೀಪ ಅಳವಡಿಸುವ ಕಾಮಗಾರಿ ಪೂರ್ಣಗೊಂಡಿದ್ದು, ಶಾಸಕ ಪ್ರಸಾದ ಅಬ್ಬಯ್ಯ ಬುಧವಾರ ಲೋಕಾರ್ಪಣೆ ಮಾಡಿದರು. </p>.<p>ಈ ವೇಳೆ ಮಾತನಾಡಿ ಶಾಸಕರು, ‘ಪೂರ್ವ ಕ್ಷೇತ್ರದ ಮಂಟೂರ ರಸ್ತೆ ಭಾಗವು ವೇಗವಾಗಿ ಬೆಳೆಯುತ್ತಿದ್ದು, ಹೊಸ ಬಡಾವಣೆಗಳು ನಿರ್ಮಾಣವಾಗಿವೆ. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ 2600 ಮನೆಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಮೊದಲ ಹಂತದಲ್ಲಿ 1 ಸಾವಿರಕ್ಕೂ ಅಧಿಕ ಮನೆಗಳು ಹಂಚಿಕೆಗೆ ಸಿದ್ಧಗೊಂಡಿವೆ. ಶೀಘ್ರದಲ್ಲೇ ಲೋಕಾರ್ಪಣೆ ಮಾಡಲಾಗುವುದು’ ಎಂದು ಹೇಳಿದರು.</p>.<p>‘ಮಂಟೂರ ರಸ್ತೆ ಭಾಗದಲ್ಲಿ ಇದುವರೆಗೆ ಅಂದಾಜು ₹150 ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. ಹೊಸ ಮಂಟೂರು ರಸ್ತೆ ಮಾರ್ಗದಲ್ಲಿ ವಿದ್ಯುತ್ ಸಮಸ್ಯೆಯಿತ್ತು. ಹೈಟೆಕ್ ರಸ್ತೆ ನಿರ್ಮಿಸಿ, ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಲಾಗಿದೆ’ ಎಂದರು. </p>.<p>ಕಳೆದ ವರ್ಷ ಹಳೆ ಮಂಟೂರ ರಸ್ತೆ ತಬೀಬ್ ಲ್ಯಾಂಡ್ನಿಂದ ಸುಣ್ಣದ ಭಟ್ಟಿವರೆಗೆ ₹90 ಲಕ್ಷ ವೆಚ್ಚದಲ್ಲಿ ಕ್ರಾನಿಕಲ್ ವಿದ್ಯುತ್ ಬೀದಿದೀಪ ಅಳವಡಿಸಲಾಗಿತ್ತು ಎಂದರು. </p>.<p>ಪ್ರಮುಖರಾದ ಶಾಮ ಜಾಧವ, ಮೋಹನ್ ಅಸುಂಡಿ, ಶರೀಫ್ ಅದ್ವಾನಿ, ಸೈಯದ್ ಸಲೀಂ ಮುಲ್ಲಾ, ಅಲ್ತಾಫ್ ಮುಲ್ಲಾ, ಮೆಹಬೂಬ್ ನಾಲಬಂದ್, ಅಪ್ರೊಜ್ ಮಂಚಿನಕೊಪ್ಪ, ಜಾಫರ್ ಶಾಬ್ದಿ, ಅಕ್ಬರ್ ಅಂಗಡಿ, ಶಕೀಲ್ ಅಹ್ಮದ್ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ಹಳೆ ಮಂಟೂರ ರಸ್ತೆಯ ಸನಾದಿ ಅಪ್ಪಣ್ಣ ವೃತ್ತದಿಂದ ರೈಲ್ವೆ ಕ್ರಾಸಿಂಗ್ ವರೆಗೆ ₹10 ಕೋಟಿ ಅನುದಾನದಲ್ಲಿ ಸಿಸಿ ರಸ್ತೆ ನಿರ್ಮಾಣ. ₹44ಲಕ್ಷ ಅನುದಾನದಲ್ಲಿ ವಿದ್ಯುತ್ ಬೀದಿ ದೀಪ ಅಳವಡಿಸುವ ಕಾಮಗಾರಿ ಪೂರ್ಣಗೊಂಡಿದ್ದು, ಶಾಸಕ ಪ್ರಸಾದ ಅಬ್ಬಯ್ಯ ಬುಧವಾರ ಲೋಕಾರ್ಪಣೆ ಮಾಡಿದರು. </p>.<p>ಈ ವೇಳೆ ಮಾತನಾಡಿ ಶಾಸಕರು, ‘ಪೂರ್ವ ಕ್ಷೇತ್ರದ ಮಂಟೂರ ರಸ್ತೆ ಭಾಗವು ವೇಗವಾಗಿ ಬೆಳೆಯುತ್ತಿದ್ದು, ಹೊಸ ಬಡಾವಣೆಗಳು ನಿರ್ಮಾಣವಾಗಿವೆ. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ 2600 ಮನೆಗಳ ನಿರ್ಮಾಣ ಕಾರ್ಯ ಭರದಿಂದ ಸಾಗಿದ್ದು, ಮೊದಲ ಹಂತದಲ್ಲಿ 1 ಸಾವಿರಕ್ಕೂ ಅಧಿಕ ಮನೆಗಳು ಹಂಚಿಕೆಗೆ ಸಿದ್ಧಗೊಂಡಿವೆ. ಶೀಘ್ರದಲ್ಲೇ ಲೋಕಾರ್ಪಣೆ ಮಾಡಲಾಗುವುದು’ ಎಂದು ಹೇಳಿದರು.</p>.<p>‘ಮಂಟೂರ ರಸ್ತೆ ಭಾಗದಲ್ಲಿ ಇದುವರೆಗೆ ಅಂದಾಜು ₹150 ಕೋಟಿ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗಿದೆ. ಹೊಸ ಮಂಟೂರು ರಸ್ತೆ ಮಾರ್ಗದಲ್ಲಿ ವಿದ್ಯುತ್ ಸಮಸ್ಯೆಯಿತ್ತು. ಹೈಟೆಕ್ ರಸ್ತೆ ನಿರ್ಮಿಸಿ, ವಿದ್ಯುತ್ ದೀಪಗಳ ವ್ಯವಸ್ಥೆ ಮಾಡಲಾಗಿದೆ’ ಎಂದರು. </p>.<p>ಕಳೆದ ವರ್ಷ ಹಳೆ ಮಂಟೂರ ರಸ್ತೆ ತಬೀಬ್ ಲ್ಯಾಂಡ್ನಿಂದ ಸುಣ್ಣದ ಭಟ್ಟಿವರೆಗೆ ₹90 ಲಕ್ಷ ವೆಚ್ಚದಲ್ಲಿ ಕ್ರಾನಿಕಲ್ ವಿದ್ಯುತ್ ಬೀದಿದೀಪ ಅಳವಡಿಸಲಾಗಿತ್ತು ಎಂದರು. </p>.<p>ಪ್ರಮುಖರಾದ ಶಾಮ ಜಾಧವ, ಮೋಹನ್ ಅಸುಂಡಿ, ಶರೀಫ್ ಅದ್ವಾನಿ, ಸೈಯದ್ ಸಲೀಂ ಮುಲ್ಲಾ, ಅಲ್ತಾಫ್ ಮುಲ್ಲಾ, ಮೆಹಬೂಬ್ ನಾಲಬಂದ್, ಅಪ್ರೊಜ್ ಮಂಚಿನಕೊಪ್ಪ, ಜಾಫರ್ ಶಾಬ್ದಿ, ಅಕ್ಬರ್ ಅಂಗಡಿ, ಶಕೀಲ್ ಅಹ್ಮದ್ ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>