ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಗುತ್ತಿಗೆದಾರರೊಂದಿಗೆ ಪಾಲಿಕೆಯ ಘನತ್ಯಾಜ್ಯ ವಿಭಾಗದ ಕೆಲವು ಅಧಿಕಾರಿಗಳು ಶಾಮೀಲಾಗಿ ಕಿರುಕುಳ ನೀಡುತ್ತಿದ್ದಾರೆ. ಅಲ್ಲದೇ, ಆಟೊ ಟಿಪ್ಪರ್ ಚಾಲಕರ ವಾರದ ರಜೆಯ ದಿನ ಕೆಲಸ ಮಾಡಲು 30 ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಗುತ್ತಿಗೆದಾರರು ಲೆಕ್ಕ ತೋರಿಸಿದ್ದಾರೆ. ಆದರೆ, ಹೊರಗುತ್ತಿಗೆ ಸಿಬ್ಬಂದಿ ರಜೆ ತೆಗೆದುಕೊಂಡರೆ, ಆ ದಿನ ಕೆಲಸಕ್ಕೆ ಹೊರಗುತ್ತಿಗೆ ಸಿಬ್ಬಂದಿಯೇ ಯಾರನ್ನಾದರೂ ಕರೆದುಕೊಂಡು ಬರಬೇಕು. ಇಲ್ಲವೇ ಒಂದು ದಿನಕ್ಕೆ ₹ 300 ಕೊಡಬೇಕು’ ಎಂದು ದೂರಿದರು.