ಈ ಕುರಿತು ಪ್ರಕಟಣೆ ನೀಡಿರುವ ಅವರು, ‘ರಾಜಿ ಸಂಧಾನದ ಮೂಲಕ ಬಗೆಹರಿಸುವ ಎಲ್ಲ ಸಾಧ್ಯತೆಗಳಿದ್ದಾಗಲೂ ಪ್ರಧಾನಿ ನರೇಂದ್ರ ಮೋದಿ ಅವರು ಇಚ್ಚಾಶಕ್ತಿ ತೋರಲಿಲ್ಲ. ನ್ಯಾಯಮಂಡಳಿ ನೀರು ಹಂಚಿಕೆ ಮಾಡಿದ ನಂತರವೂ ಗೋವಾ ಪರ ಒಲವು ತೋರಿಸುತ್ತಿರುವು ಯಾವ ನ್ಯಾಯ? ಅವರು ದೇಶಕ್ಕೆ ಪ್ರಧಾನಿಯೇ? ಗೋವಾಕ್ಕೆ ಪ್ರಧಾನಿಯೇ’ ಎಂದು ಪ್ರಶ್ನಿಸಿದ್ದಾರೆ.