<p>ಪ್ರಜಾವಾಣಿ ವಾರ್ತೆ</p>.<p>ಹುಬ್ಬಳ್ಳಿ: ವಿಶ್ವ ಬ್ಯಾಡ್ಮಿಂಟನ್ ದಿನದ ಅಂಗವಾಗಿ ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿನ ಕರ್ನಾಟಕ ಜಿಮ್ಖಾನಾ ಅಸೋಸಿಯೇಷನ್ ಮೈದಾನದಲ್ಲಿ ಆಯೋಜಿಸಿರುವ ಕರ್ನಾಟಕ ಜಿಮ್ಖಾನಾ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ (ಕೆಜಿಪಿಎಲ್) ಎರಡನೇ ಆವೃತ್ತಿಗೆ ಬುಧವಾರ ಚಾಲನೆ ನೀಡಲಾಯಿತು. </p>.<p>ಟೂರ್ನಿಗೆ ಚಾಲನೆ ನೀಡಿ ಮಾತನಾಡಿದ ಕರ್ನಾಟಕ ಜಿಮ್ಖಾನಾ ಅಸೋಸಿಯೇಷನ್ ಅಧ್ಯಕ್ಷ ಎಚ್.ಎನ್.ನಂದಕುಮಾರ, ‘ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಟೂರ್ನಿ ಆಯೋಜಿಸಿರುವುದು ಶ್ಲಾಘನೀಯ. ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಲು ಬ್ಯಾಡ್ಮಿಂಟನ್ ಸಹಕಾರಿಯಾಗಿದೆ’ ಎಂದರು.</p>.<p>ಅಸೋಸಿಯೇಷನ್ ಕ್ರೀಡಾ ವಿಭಾಗದ ಸಂಚಾಲಕ ಉದಯ ಬಾಡ್ಕರ ಮಾತನಾಡಿ, ‘ಮೂರು ಬ್ಯಾಡ್ಮಿಂಟನ್ ಅಂಕಣಗಳು ಅಸೋಸಿಯೇಷನ್ನಲ್ಲಿದ್ದು, ಪ್ರತಿ ಶನಿವಾರ, ಭಾನುವಾರ ದಿನಕ್ಕೆ ಏಳು ಪಂದ್ಯಗಳು ನಡೆಯಲಿವೆ. ಆಗಸ್ಟ್ 19ರಂದು ಫೈನಲ್ ಪಂದ್ಯ ನಡೆಯಲಿದೆ. ಇಬ್ಬರು ರ್ಯಾಂಕಿಂಗ್ ಕ್ರೀಡಾಪಟುಗಳು ಟೂರ್ನಿಯಲ್ಲಿ ಭಾಗವಹಿಸಿದ್ದಾರೆ’ ಎಂದು ಹೇಳಿದರು.</p>.<p>‘ನಾಲ್ಕು ತಂಡಗಳು ಭಾಗವಹಿಸಿದ್ದು, ಪ್ರತಿ ತಂಡ ಮೂರು ಪಂದ್ಯಗಳನ್ನು ಆಡಲಿದೆ. ಅಂತರರಾಷ್ಟ್ರೀಯ ನಿಯಮಾವಳಿಗಳ ಅನ್ವಯ ಪಂದ್ಯಗಳು ನಡೆಯಲಿವೆ. ಮಾನ್ಯತೆ ಪಡೆದ ರೆಫರಿಗಳು ನಿರ್ಣಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ’ ಎಂದರು. </p>.<p>ಅಸೋಸಿಯೇಷನ್ ಉಪಾಧ್ಯಕ್ಷ ಗೋವಿಂದ ಜೋಶಿ, ಅಸೋಸಿಯೇಷನ್ ಕಾರ್ಯದರ್ಶಿ ವೀರಣ್ಣ ಸವಡಿ ಮಾತನಾಡಿದರು.</p>.<p>‘ಅಮಲು ಮುಕ್ತ ಸಮಾಜ’ ಎಂಬ ಘೋಷವಾಕ್ಯದಡಿ ಟೂರ್ನಿ ಆಯೋಜಿಸಲಾಗಿದೆ. ಡಾ.ಅಪೂರ್ವ ಮತ್ತು ಡಾ.ಶ್ರುತಿ ಮಾಲೀಕತ್ವದ ವೀವ್ವಿಕ್ಟರ್ಸ್, ಸೋಮಶೇಖರ ಉಮರಾಣಿ ಮಾಲೀಕತ್ವದ ಉಮರಾಣಿ ಟೈಗರ್ಸ್, ಶ್ರೀನಿವಾಸ ಕಾಟವೆ ಮಾಲೀಕತ್ವದ ಶೀನು ಸ್ಲಾಮಸಲ್ ಮತ್ತು ಬಸವರಾಜ ಉಳ್ಳಾಗಡ್ಡಿಮಠ ಮಾಲೀಕತ್ವದ 8 ಪಿಎಂ ಕಿಂಗ್ಸ್ ತಂಡಗಳು ಭಾಗವಹಿಸಲಿದೆ. 4 ತಂಡಗಳಲ್ಲಿ 60 ಆಟಗಾರರು ಭಾಗವಹಿಸಲಿದ್ದಾರೆ. ಕೃಷ್ಣ ಉಚ್ಛಿಲ ಮತ್ತು ಡಿ.ಕೆ. ಶ್ರೀನಾಥ ನಿರ್ಣಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ.</p>.<p>ಡಾ.ಶ್ರುತಿ, ಡಾ.ಅಪೂರ್ವಾ, ಜಾನ್ ರಾಬರ್ಟ್, ಬಸವರಾಜ ಉಳ್ಳಾಗಡ್ಡಿಮಠ, ಕೃಷ್ಣ ಉಚ್ಛಿಲ, ವಿನೋದ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಪ್ರಜಾವಾಣಿ ವಾರ್ತೆ</p>.<p>ಹುಬ್ಬಳ್ಳಿ: ವಿಶ್ವ ಬ್ಯಾಡ್ಮಿಂಟನ್ ದಿನದ ಅಂಗವಾಗಿ ಹುಬ್ಬಳ್ಳಿಯ ದೇಶಪಾಂಡೆ ನಗರದಲ್ಲಿನ ಕರ್ನಾಟಕ ಜಿಮ್ಖಾನಾ ಅಸೋಸಿಯೇಷನ್ ಮೈದಾನದಲ್ಲಿ ಆಯೋಜಿಸಿರುವ ಕರ್ನಾಟಕ ಜಿಮ್ಖಾನಾ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್ (ಕೆಜಿಪಿಎಲ್) ಎರಡನೇ ಆವೃತ್ತಿಗೆ ಬುಧವಾರ ಚಾಲನೆ ನೀಡಲಾಯಿತು. </p>.<p>ಟೂರ್ನಿಗೆ ಚಾಲನೆ ನೀಡಿ ಮಾತನಾಡಿದ ಕರ್ನಾಟಕ ಜಿಮ್ಖಾನಾ ಅಸೋಸಿಯೇಷನ್ ಅಧ್ಯಕ್ಷ ಎಚ್.ಎನ್.ನಂದಕುಮಾರ, ‘ಯುವ ಪ್ರತಿಭೆಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಟೂರ್ನಿ ಆಯೋಜಿಸಿರುವುದು ಶ್ಲಾಘನೀಯ. ದೈಹಿಕವಾಗಿ ಮತ್ತು ಮಾನಸಿಕವಾಗಿ ಸದೃಢವಾಗಲು ಬ್ಯಾಡ್ಮಿಂಟನ್ ಸಹಕಾರಿಯಾಗಿದೆ’ ಎಂದರು.</p>.<p>ಅಸೋಸಿಯೇಷನ್ ಕ್ರೀಡಾ ವಿಭಾಗದ ಸಂಚಾಲಕ ಉದಯ ಬಾಡ್ಕರ ಮಾತನಾಡಿ, ‘ಮೂರು ಬ್ಯಾಡ್ಮಿಂಟನ್ ಅಂಕಣಗಳು ಅಸೋಸಿಯೇಷನ್ನಲ್ಲಿದ್ದು, ಪ್ರತಿ ಶನಿವಾರ, ಭಾನುವಾರ ದಿನಕ್ಕೆ ಏಳು ಪಂದ್ಯಗಳು ನಡೆಯಲಿವೆ. ಆಗಸ್ಟ್ 19ರಂದು ಫೈನಲ್ ಪಂದ್ಯ ನಡೆಯಲಿದೆ. ಇಬ್ಬರು ರ್ಯಾಂಕಿಂಗ್ ಕ್ರೀಡಾಪಟುಗಳು ಟೂರ್ನಿಯಲ್ಲಿ ಭಾಗವಹಿಸಿದ್ದಾರೆ’ ಎಂದು ಹೇಳಿದರು.</p>.<p>‘ನಾಲ್ಕು ತಂಡಗಳು ಭಾಗವಹಿಸಿದ್ದು, ಪ್ರತಿ ತಂಡ ಮೂರು ಪಂದ್ಯಗಳನ್ನು ಆಡಲಿದೆ. ಅಂತರರಾಷ್ಟ್ರೀಯ ನಿಯಮಾವಳಿಗಳ ಅನ್ವಯ ಪಂದ್ಯಗಳು ನಡೆಯಲಿವೆ. ಮಾನ್ಯತೆ ಪಡೆದ ರೆಫರಿಗಳು ನಿರ್ಣಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ’ ಎಂದರು. </p>.<p>ಅಸೋಸಿಯೇಷನ್ ಉಪಾಧ್ಯಕ್ಷ ಗೋವಿಂದ ಜೋಶಿ, ಅಸೋಸಿಯೇಷನ್ ಕಾರ್ಯದರ್ಶಿ ವೀರಣ್ಣ ಸವಡಿ ಮಾತನಾಡಿದರು.</p>.<p>‘ಅಮಲು ಮುಕ್ತ ಸಮಾಜ’ ಎಂಬ ಘೋಷವಾಕ್ಯದಡಿ ಟೂರ್ನಿ ಆಯೋಜಿಸಲಾಗಿದೆ. ಡಾ.ಅಪೂರ್ವ ಮತ್ತು ಡಾ.ಶ್ರುತಿ ಮಾಲೀಕತ್ವದ ವೀವ್ವಿಕ್ಟರ್ಸ್, ಸೋಮಶೇಖರ ಉಮರಾಣಿ ಮಾಲೀಕತ್ವದ ಉಮರಾಣಿ ಟೈಗರ್ಸ್, ಶ್ರೀನಿವಾಸ ಕಾಟವೆ ಮಾಲೀಕತ್ವದ ಶೀನು ಸ್ಲಾಮಸಲ್ ಮತ್ತು ಬಸವರಾಜ ಉಳ್ಳಾಗಡ್ಡಿಮಠ ಮಾಲೀಕತ್ವದ 8 ಪಿಎಂ ಕಿಂಗ್ಸ್ ತಂಡಗಳು ಭಾಗವಹಿಸಲಿದೆ. 4 ತಂಡಗಳಲ್ಲಿ 60 ಆಟಗಾರರು ಭಾಗವಹಿಸಲಿದ್ದಾರೆ. ಕೃಷ್ಣ ಉಚ್ಛಿಲ ಮತ್ತು ಡಿ.ಕೆ. ಶ್ರೀನಾಥ ನಿರ್ಣಾಯಕರಾಗಿ ಕಾರ್ಯನಿರ್ವಹಿಸಲಿದ್ದಾರೆ.</p>.<p>ಡಾ.ಶ್ರುತಿ, ಡಾ.ಅಪೂರ್ವಾ, ಜಾನ್ ರಾಬರ್ಟ್, ಬಸವರಾಜ ಉಳ್ಳಾಗಡ್ಡಿಮಠ, ಕೃಷ್ಣ ಉಚ್ಛಿಲ, ವಿನೋದ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>