<p><strong>ಹುಬ್ಬಳ್ಳಿ:</strong> ದಕ್ಷಿಣ ಕನ್ನಡ ಬ್ರಾಹ್ಮಣ ಸಮಾಜವು ಪ್ಯಾಟಿ ಬಂಧುಗಳ ಸಹಯೋಗದಲ್ಲಿ ಇಲ್ಲಿನ ದೇಶಪಾಂಡೆನಗರದ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ಬುಧವಾರ ನಾಲ್ಕನೇ ದಿನದ ಭಾಗವತ ಸಪ್ತಾಹ ನಡೆಯಿತು.</p>.<p>ಉಡುಪಿಯ ಪಾಲಿಮಾರು ಮಠದ ಹಿರಿಯ ಸ್ವಾಮೀಜಿ ವಿದ್ಯಾಧೀಶ ತೀರ್ಥ ಹಾಗೂ ಕಿರಿಯ ಸ್ವಾಮೀಜಿ ವಿದ್ಯಾರಾಜೇಶ್ವರ ತೀರ್ಥರು ಪ್ರವಚನ ನೀಡಿದರು. ಮಹಾಭಾರತ ಹಾಗೂ ಭಾಗವತದ ವಿವಿಧ ದೃಷ್ಟಾಂತಗಳನ್ನು ವಿವರಿಸಿದರು. ಕೃಷ್ಣನ ಜನ್ಮ, ಬದುಕು ಹಾಗೂ ಅವನು ನೀಡಿದ ಗೀತೋಪದೇಶಗಳ ಅರ್ಥವನ್ನು ವಿವರಿಸಿದರು.</p>.<p>‘ಪ್ರತಿಫಲಾಪೇಕ್ಷೆಯಿಲ್ಲದೆ ಕೆಲಸಗಳನ್ನು ಮಾಡಬೇಕು. ಪ್ರತಿಯೊಂದು ಕಾಯಕಕ್ಕೂ ಭಗವಂತ ಆಶೀರ್ವಾದ ಇರುತ್ತದೆ. ಶುದ್ಧ ಮನಸ್ಸಿನಲ್ಲಿ ಮಾಡುವ ಕೆಲಸದಲ್ಲಿ ಸದಾ ಭಗವಂತ ನೆಲೆಸಿರುತ್ತಾನೆ ಎನ್ನುವ ರಹಸ್ಯ ಅರಿಯಬೇಕು’ ಎಂದು ಸ್ವಾಮೀಜಿಗಳು ಆಶೀರ್ವಚನ ನೀಡಿದರು.</p>.<p>ಡಿ.14ರಿಂದ ಭಾಗವತ ಸಪ್ತಾಹ ಆರಂಭವಾಗಿದ್ದು, ಪ್ರತಿದಿನ ಸಂಜೆ 6.30ರಿಂದ ರಾತ್ರಿ 8ರವರೆಗೆ ನಡೆಯುತ್ತದೆ. ಇದೇ ಶುಕ್ರವಾರ ಸಪ್ತಾಹದ ಮಂಗಲೋತ್ಸವ ನಡೆಯಲಿದ್ದು, ಅಂದು ಭಕ್ತರಿಗೆ ಉಭಯ ಶ್ರೀಗಳು ಮಂತ್ರಾಕ್ಷತೆ ನೀಡಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ದಕ್ಷಿಣ ಕನ್ನಡ ಬ್ರಾಹ್ಮಣ ಸಮಾಜವು ಪ್ಯಾಟಿ ಬಂಧುಗಳ ಸಹಯೋಗದಲ್ಲಿ ಇಲ್ಲಿನ ದೇಶಪಾಂಡೆನಗರದ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ಬುಧವಾರ ನಾಲ್ಕನೇ ದಿನದ ಭಾಗವತ ಸಪ್ತಾಹ ನಡೆಯಿತು.</p>.<p>ಉಡುಪಿಯ ಪಾಲಿಮಾರು ಮಠದ ಹಿರಿಯ ಸ್ವಾಮೀಜಿ ವಿದ್ಯಾಧೀಶ ತೀರ್ಥ ಹಾಗೂ ಕಿರಿಯ ಸ್ವಾಮೀಜಿ ವಿದ್ಯಾರಾಜೇಶ್ವರ ತೀರ್ಥರು ಪ್ರವಚನ ನೀಡಿದರು. ಮಹಾಭಾರತ ಹಾಗೂ ಭಾಗವತದ ವಿವಿಧ ದೃಷ್ಟಾಂತಗಳನ್ನು ವಿವರಿಸಿದರು. ಕೃಷ್ಣನ ಜನ್ಮ, ಬದುಕು ಹಾಗೂ ಅವನು ನೀಡಿದ ಗೀತೋಪದೇಶಗಳ ಅರ್ಥವನ್ನು ವಿವರಿಸಿದರು.</p>.<p>‘ಪ್ರತಿಫಲಾಪೇಕ್ಷೆಯಿಲ್ಲದೆ ಕೆಲಸಗಳನ್ನು ಮಾಡಬೇಕು. ಪ್ರತಿಯೊಂದು ಕಾಯಕಕ್ಕೂ ಭಗವಂತ ಆಶೀರ್ವಾದ ಇರುತ್ತದೆ. ಶುದ್ಧ ಮನಸ್ಸಿನಲ್ಲಿ ಮಾಡುವ ಕೆಲಸದಲ್ಲಿ ಸದಾ ಭಗವಂತ ನೆಲೆಸಿರುತ್ತಾನೆ ಎನ್ನುವ ರಹಸ್ಯ ಅರಿಯಬೇಕು’ ಎಂದು ಸ್ವಾಮೀಜಿಗಳು ಆಶೀರ್ವಚನ ನೀಡಿದರು.</p>.<p>ಡಿ.14ರಿಂದ ಭಾಗವತ ಸಪ್ತಾಹ ಆರಂಭವಾಗಿದ್ದು, ಪ್ರತಿದಿನ ಸಂಜೆ 6.30ರಿಂದ ರಾತ್ರಿ 8ರವರೆಗೆ ನಡೆಯುತ್ತದೆ. ಇದೇ ಶುಕ್ರವಾರ ಸಪ್ತಾಹದ ಮಂಗಲೋತ್ಸವ ನಡೆಯಲಿದ್ದು, ಅಂದು ಭಕ್ತರಿಗೆ ಉಭಯ ಶ್ರೀಗಳು ಮಂತ್ರಾಕ್ಷತೆ ನೀಡಲಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>