ಕಚೇರಿ ಉದ್ಘಾಟನೆ ಅಂಗವಾಗಿ ಮಣಿಕುಂಟ್ಲ ಅವರು, ಪಾಲಿಕೆ ಆವರಣದಲ್ಲೇ ಶಾಮಿಯಾನ ಹಾಕಿಸಿ ಬಿರಿಯಾನಿ ಮತ್ತು ಕಬಾಬ್ ಅಡುಗೆ ಮಾಡಿಸಿದ್ದರು. ಉದ್ಘಾಟನೆ ಮುಗಿಯುತ್ತಿದ್ದಂತೆ ಬಿರಿಯಾನಿ ಸವಿಯಲು ಜನರು ಸಾಲುಗಟ್ಟಿ ನಿಂತಿದ್ದರು.ಕಾರ್ಯಕ್ರಮದಲ್ಲಿ ಮಣಿಕುಂಟ್ಲ ಅವರ ಸಂಬಂಧಿಕರು, ವಾರ್ಡ್ ಜನರು, ಪಕ್ಷದ ಕಾರ್ಯಕರ್ತರು ಹಾಗೂ ಸ್ಥಳೀಯ ಮುಖಂಡರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.