<p><strong>ಹುಬ್ಬಳ್ಳಿ: </strong>ರಾಜನಗರದ ಉದ್ಯಮಿ ವೆಂಕಣ್ಣ ಬಣವಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಬಾಂಗ್ಲಾ ಮೂಲದ ಆರೋಪಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.</p>.<p>ಇಲಿಯಾಸ್ ಸೈಕತ್ ಬಂಧಿತನಾಗಿದ್ದು, ಬಾಂಗ್ಲಾದೇಶದ ಪಿರಿಶಪುರ ಜಿಲ್ಲೆಯ ಚಾಂದಿಪುರದವನು.</p>.<p>ಈ ಹಿಂದೆ ಕೇರಳದಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಇವನನ್ನು ಕಣ್ಣೂರು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದ್ದರು. ಆ ವೇಳೆ ಹುಬ್ಬಳ್ಳಿಯ ಔಷಧ ವ್ಯಾಪಾರಿ ವೆಂಕಣ್ಣ ಬಣವಿ ಅವರ ಕೊಲೆ ಪ್ರಕರಣದಲ್ಲಿಯೂ ಭಾಗಿಯಾಗಿರುವ ವಿಷಯ ತಿಳಿದು ಬಂದಿದೆ.</p>.<p>‘ಕೇರಳದಲ್ಲಿ ಬಂಧನವಾಗಿರುವ ಆರೋಪಿಯನ್ನು ಇಲ್ಲಿಗೆ ಕರೆತಂದು ವಿಚಾರಣೆ ನಡೆಸಲು ನ್ಯಾಯಾಲಯದ ಕೇಳಿದ್ದೇವೆ’ ಎಂದು ಅಶೋಕನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರವಿಚಂದ್ರ ಬಡಾಫಕ್ಕೀರಪ್ಪನವರ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>ಹಿನ್ನೆಲೆ:</strong> 2019ರ ಜನವರಿ 22ರಂದು ವ್ಯಾಪಾರಿ ಬಣವಿ ಅವರನ್ನು ಕೊಲೆ ಮಾಡಿ ₹11.15 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಆರು ಮಂದಿ ತಂಡ ದೋಚಿ ಪರಾರಿಯಾಗಿತ್ತು. ಬಾಂಗ್ಲಾದೇಶದ ಮೂಲದ ಮಾಣಿಕ್ ಇಮ್ರಾನ್ ಎಂಬುವವನನ್ನು ಬಂಧಿಸಲಾಗಿತ್ತು. ಇಬ್ಬರು ಆರೋಪಿಗಳ ಬಂಧನವಾಗಿದ್ದು, ಇನ್ನು ನಾಲ್ವರ ಬಂಧನವಾಗಬೇಕಿದೆ.</p>.<p><strong>ಲಂಚ ಕೇಳಿದ ಅಧಿಕಾರಿ, ದೂರು ದಾಖಲು:</strong> ಇಲ್ಲಿನ ಕಾರವಾರ ರಸ್ತೆಯಲ್ಲಿರುವ ಪ್ರಿನ್ಸ್ ಪಾಯಿಂಟ್(ಗೋಲ್ಡನ್ ವೈನ್ಸ್) ಬಾರ್ ಮೇಲೆ ದಾಳಿ ನಡೆಸಿದ ಅಬಕಾರಿ ಅಧಿಕಾರಿ ಮಂಜುನಾಥ ಮಲ್ಲಿಗೇರಿ ಹಾಗೂ ಉಳಿದ ಸಿಬ್ಬಂದಿ ವಿರುದ್ಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.</p>.<p>ಬಾರ್ ಮಾಲೀಕ ಶ್ರೀನಿವಾಸ ಜಿತೂರಿ ಅವರ ಪತ್ನಿ ಲಲಿತಾ ಜಿತೂರಿ ದೂರು ನೀಡಿದ್ದಾರೆ.</p>.<p>ಫೆ. 6ರಂದು ಪ್ರಿನ್ಸ್ ಬಾರ್ ಮೇಲೆ ಬೆಳಗಾವಿ ವಿಭಾಗದ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭ, ಪತಿ ಎಲ್ಲ ದಾಖಲೆಗಳನ್ನು ತೋರಿಸಿದ್ದರು. ನಂತರ ಪತಿಗೆ ಮತ್ತೊಂದು ಅಂಗಡಿಗೆ ಕರೆಸಿ ₹2 ಲಕ್ಷ ಲಂಚ ನೀಡುವಂತೆ ಹೇಳಿದ್ದರು. ಅದಕ್ಕೆ ಒಪ್ಪದಿದ್ದಾಗ ದೂರು ದಾಖಲಿಸಿ, ಬಾರ್ ಬಂದ್ ಮಾಡಿಸುತ್ತೇವೆ ಎಂದು ಬೆದರಿಸಿದ್ದರು. ಅಲ್ಲದೆ, ಅವರ ಮೇಲೆ ಹಲ್ಲೆ ನಡೆಸಿ ಬೂಟು ಕಾಲಿನಿಂದ ಒದ್ದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಲಲಿತಾ ತಿಳಿಸಿದ್ದಾರೆ.</p>.<p><strong>ಹಲ್ಲೆ, ದೂರು ದಾಖಲು:</strong> ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಗದಗ ರಸ್ತೆಯ ಕಾರುಣ್ಯ ಕಾಲೊನಿ ನಿವಾಸಿ ಪ್ರೇಮರಾವ್ ಕೊರಪಟ್ಟಿ ಅವರ ಮೇಲೆ ನಾಲ್ವರು ಕಲ್ಲಿನಿಂದ ಹೊಡೆದು ಹಲ್ಲೆ ನಡೆಸಿದ್ದಾರೆ. ಆಕಾಶ, ಶುಭಂ ಸೇರಿದಂತೆ ನಾಲ್ವರ ವಿರುದ್ಧ ಕೇಶ್ವಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>ರಾಜನಗರದ ಉದ್ಯಮಿ ವೆಂಕಣ್ಣ ಬಣವಿ ಅವರ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮತ್ತೊಬ್ಬ ಬಾಂಗ್ಲಾ ಮೂಲದ ಆರೋಪಿಯನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.</p>.<p>ಇಲಿಯಾಸ್ ಸೈಕತ್ ಬಂಧಿತನಾಗಿದ್ದು, ಬಾಂಗ್ಲಾದೇಶದ ಪಿರಿಶಪುರ ಜಿಲ್ಲೆಯ ಚಾಂದಿಪುರದವನು.</p>.<p>ಈ ಹಿಂದೆ ಕೇರಳದಲ್ಲಿ ನಡೆದ ದರೋಡೆ ಪ್ರಕರಣದಲ್ಲಿ ಇವನನ್ನು ಕಣ್ಣೂರು ಪೊಲೀಸರು ಬಂಧಿಸಿ, ವಿಚಾರಣೆ ನಡೆಸಿದ್ದರು. ಆ ವೇಳೆ ಹುಬ್ಬಳ್ಳಿಯ ಔಷಧ ವ್ಯಾಪಾರಿ ವೆಂಕಣ್ಣ ಬಣವಿ ಅವರ ಕೊಲೆ ಪ್ರಕರಣದಲ್ಲಿಯೂ ಭಾಗಿಯಾಗಿರುವ ವಿಷಯ ತಿಳಿದು ಬಂದಿದೆ.</p>.<p>‘ಕೇರಳದಲ್ಲಿ ಬಂಧನವಾಗಿರುವ ಆರೋಪಿಯನ್ನು ಇಲ್ಲಿಗೆ ಕರೆತಂದು ವಿಚಾರಣೆ ನಡೆಸಲು ನ್ಯಾಯಾಲಯದ ಕೇಳಿದ್ದೇವೆ’ ಎಂದು ಅಶೋಕನಗರ ಪೊಲೀಸ್ ಠಾಣೆ ಇನ್ಸ್ಪೆಕ್ಟರ್ ರವಿಚಂದ್ರ ಬಡಾಫಕ್ಕೀರಪ್ಪನವರ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p><strong>ಹಿನ್ನೆಲೆ:</strong> 2019ರ ಜನವರಿ 22ರಂದು ವ್ಯಾಪಾರಿ ಬಣವಿ ಅವರನ್ನು ಕೊಲೆ ಮಾಡಿ ₹11.15 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ಆರು ಮಂದಿ ತಂಡ ದೋಚಿ ಪರಾರಿಯಾಗಿತ್ತು. ಬಾಂಗ್ಲಾದೇಶದ ಮೂಲದ ಮಾಣಿಕ್ ಇಮ್ರಾನ್ ಎಂಬುವವನನ್ನು ಬಂಧಿಸಲಾಗಿತ್ತು. ಇಬ್ಬರು ಆರೋಪಿಗಳ ಬಂಧನವಾಗಿದ್ದು, ಇನ್ನು ನಾಲ್ವರ ಬಂಧನವಾಗಬೇಕಿದೆ.</p>.<p><strong>ಲಂಚ ಕೇಳಿದ ಅಧಿಕಾರಿ, ದೂರು ದಾಖಲು:</strong> ಇಲ್ಲಿನ ಕಾರವಾರ ರಸ್ತೆಯಲ್ಲಿರುವ ಪ್ರಿನ್ಸ್ ಪಾಯಿಂಟ್(ಗೋಲ್ಡನ್ ವೈನ್ಸ್) ಬಾರ್ ಮೇಲೆ ದಾಳಿ ನಡೆಸಿದ ಅಬಕಾರಿ ಅಧಿಕಾರಿ ಮಂಜುನಾಥ ಮಲ್ಲಿಗೇರಿ ಹಾಗೂ ಉಳಿದ ಸಿಬ್ಬಂದಿ ವಿರುದ್ಧ ಹಳೇ ಹುಬ್ಬಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.</p>.<p>ಬಾರ್ ಮಾಲೀಕ ಶ್ರೀನಿವಾಸ ಜಿತೂರಿ ಅವರ ಪತ್ನಿ ಲಲಿತಾ ಜಿತೂರಿ ದೂರು ನೀಡಿದ್ದಾರೆ.</p>.<p>ಫೆ. 6ರಂದು ಪ್ರಿನ್ಸ್ ಬಾರ್ ಮೇಲೆ ಬೆಳಗಾವಿ ವಿಭಾಗದ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ ಸಂದರ್ಭ, ಪತಿ ಎಲ್ಲ ದಾಖಲೆಗಳನ್ನು ತೋರಿಸಿದ್ದರು. ನಂತರ ಪತಿಗೆ ಮತ್ತೊಂದು ಅಂಗಡಿಗೆ ಕರೆಸಿ ₹2 ಲಕ್ಷ ಲಂಚ ನೀಡುವಂತೆ ಹೇಳಿದ್ದರು. ಅದಕ್ಕೆ ಒಪ್ಪದಿದ್ದಾಗ ದೂರು ದಾಖಲಿಸಿ, ಬಾರ್ ಬಂದ್ ಮಾಡಿಸುತ್ತೇವೆ ಎಂದು ಬೆದರಿಸಿದ್ದರು. ಅಲ್ಲದೆ, ಅವರ ಮೇಲೆ ಹಲ್ಲೆ ನಡೆಸಿ ಬೂಟು ಕಾಲಿನಿಂದ ಒದ್ದು ಜೀವ ಬೆದರಿಕೆ ಹಾಕಿದ್ದಾರೆ ಎಂದು ದೂರಿನಲ್ಲಿ ಲಲಿತಾ ತಿಳಿಸಿದ್ದಾರೆ.</p>.<p><strong>ಹಲ್ಲೆ, ದೂರು ದಾಖಲು:</strong> ಹಳೇ ವೈಷಮ್ಯದ ಹಿನ್ನೆಲೆಯಲ್ಲಿ ಗದಗ ರಸ್ತೆಯ ಕಾರುಣ್ಯ ಕಾಲೊನಿ ನಿವಾಸಿ ಪ್ರೇಮರಾವ್ ಕೊರಪಟ್ಟಿ ಅವರ ಮೇಲೆ ನಾಲ್ವರು ಕಲ್ಲಿನಿಂದ ಹೊಡೆದು ಹಲ್ಲೆ ನಡೆಸಿದ್ದಾರೆ. ಆಕಾಶ, ಶುಭಂ ಸೇರಿದಂತೆ ನಾಲ್ವರ ವಿರುದ್ಧ ಕೇಶ್ವಾಪುರ ಠಾಣೆಯಲ್ಲಿ ದೂರು ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>