‘ಮತ್ತೆ ಅಹಿಂದ ಸಂಘಟನೆ ಮಾಡುವುದಾಗಿ ಹೇಳುತ್ತಿರುವ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಅಹಿಂದ ಕಟ್ಟುವಾಗ ಜತೆಗಿದ್ದವರನ್ನೆಲ್ಲಾ ಮುಗಿಸಿದ್ದಾರೆ. ಕಾಂಗ್ರೆಸ್ಗೆ ಅವರನ್ನು ಕರೆತಂದ ಎಚ್. ವಿಶ್ವನಾಥ್, ಶ್ರೀನಿವಾಸ ಪ್ರಸಾದ್, ಮುಕುಡಪ್ಪ ಸೇರಿದಂತೆ ಅಂದು ಮುಂಚೂಣಿಯಲ್ಲಿದ್ದ ಯಾವ ನಾಯಕರೂ ಈಗ ಜತೆಗಿಲ್ಲ. ಅಲ್ಲದೆ, ರಾಜ್ಯದಲ್ಲಿ ಕಾಂಗ್ರೆಸ್ನ ಈ ಹೀನಾಯ ಸ್ಥಿತಿಗೆ ಸಿದ್ದರಾಮಯ್ಯ ಅವರೇ ಕಾರಣ’ ಎಂದು ವ್ಯಂಗ್ಯವಾಡಿದರು.