ಮಗುವಿನ ಬಗ್ಗೆ ಮಮತೆ ಉಂಟಾಗಿ ಪಾಲಕರು, ತಮ್ಮ ಮಗುವನ್ನು ಮರಳಿ ಕೊಡಿಸುವಂತೆ ವಿದ್ಯಾಗಿರಿ ಪೊಲೀಸ್ ಠಾಣೆಗೆ ಮೊರೆ ಇಟ್ಟರು. ಪೊಲೀಸ್ ಉಪಆಯುಕ್ತ ರಾಮರಾಜನ್,ಆರ್.ಬಿ. ಬಸರಗಿ ಮತ್ತು ಎಸಿಪಿ ಜಿ. ಅನುಷಾ ಮಾರ್ಗದರ್ಶನದಲ್ಲಿ ತನಿಖೆ ಕೈಗೊಂಡ ವಿದ್ಯಾಗಿರಿ ಠಾಣೆ ಪೊಲೀಸರು ಆರೋಪಿಗಳನ್ನು ಪತ್ತೆ ಹಚ್ಚಿ ಮಗುವನ್ನು ರಕ್ಷಣೆ ಮಾಡಿದರು.ಸದ್ಯ ಮಗುವನ್ನು ಮಕ್ಕಳ ಕಲ್ಯಾಣ ಸಮಿತಿಗೆ ಒಪ್ಪಿಸಿದ್ದು, ಸಂಪೂರ್ಣ ತನಿಖೆ ನಂತರ ಪಾಲಕರಿಗೆ ಹಸ್ತಾಂತರಿಸಲಾಗುವುದು ಎಂದರು.