ಕಾರ್ಯಾಗಾರಕ್ಕೆ ಚಾಲನೆ ನೀಡಿ ಮಾತನಾಡಿದ ಸಣ್ಣ ಮತ್ತು ಮಧ್ಯಮ ಕೈಗಾರಿಕಾ ವಲಯದ ನಿರ್ದೇಶಕ ಜಿ.ಆರ್. ಅಕಡಾಸ್, ‘ಅನೇಕ ಮಂದಿ ಉದ್ಯಮದ ಬಗ್ಗೆ ಜ್ಞಾನವಿಲ್ಲದೆ ಹಣ ಹೂಡಿಕೆ ಮಾಡಿ ನಷ್ಟ ಹೊಂದುತ್ತಾರೆ. ದೆಹಲಿ, ಬೆಂಗಳೂರು, ಹುಬ್ಬಳ್ಳಿಯಲ್ಲೂ ಸಾಕಷ್ಟು ಉದ್ಯಮ ಆರಂಭವಾಗಿವೆ. ಆದರೆ, ಚಾಲ್ತಿಯಲ್ಲಿರುವುದು ಮಾತ್ರ ಬಹಳ ಕಡಿಮೆ’ ಎಂದರು.