ಹುಬ್ಬಳ್ಳಿ: ನಗರದ ದಿ ಹುಬ್ಬಳ್ಳಿ ಅರ್ಬನ್ ಕೋ ಆಪರೇಟಿವ್ ಬ್ಯಾಂಕ್ ವತಿಯಿಂದ ಮುಖ್ಯಮಂತ್ರಿ ಕೋವಿಡ್ 19 ಪರಿಹಾರ ನಿಧಿಗೆ ₹25 ಸಾವಿರ ದೇಣಿಗೆ ನೀಡಲಾಯಿತು.
ಬೃಹತ್ ಮತ್ತು ಮಧ್ಯಮ ಕೈಗಾರಿಕೆ, ಸಾರ್ವಜನಿಕ ಉದ್ದಿಮೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಜಗದೀಶ್ ಶೆಟ್ಟರ್ ಅವರಿಗೆ ಬ್ಯಾಂಕ್ ಅಧ್ಯಕ್ಷ ವಿಕ್ರಂ ಶಿರೂರು ಅವರು ಚೆಕ್ ಹಸ್ತಾಂತರಸಿದರು.
ಬ್ಯಾಂಕ್ ಉಪಾಧ್ಯಕ್ಷ ಡಾ.ಅಜಿತ್ ಶೋಲಕೆ, ನಿರ್ದೇಶಕರಾದ ಎಸ್.ಎನ್.ಉಮರಾಣಿ, ಕಾಡದೇವರ ಮಠ, ಎಂ.ಎಸ್.ರೂಗಿ, ಸಹಕಾರ ಇಲಾಖೆ ಸಹಾಯ ನಿಬಂಧಕ ಎಂ.ಬಿ.ಪೂಜಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.