’ವೃತ್ತಿ ಮತ್ತು ಅಧುನಿಕ ಕಾಲದ ನಾಟಕಗಳ ನಡುವೆ ಸೇತುವೆಯಾಗಿ ರಂಗಭೂಮಿಗೆ ಹೊಸ ಹೊಳಪು ನೀಡುವ ಉದ್ದೇಶದಿಂದ ಗುರು ಇನ್ಸ್ಟಿಟ್ಯೂಟ್ ಆಶ್ರಯದಲ್ಲಿ ಆದಿರಂಗ ಥೇಟರ್ ಕಟ್ಟಿದ್ದೇನೆ. ಅಲ್ಲಿ 450 ಜನ ಕುಳಿತು ನೋಡುವಷ್ಟು ಆಸನಗಳ ವ್ಯವಸ್ಥೆಯಿದೆ. ಒಂದೇ ಬಾರಿಗೆ ಎರಡ್ಮೂರು ನಾಟಕಗಳ ಅಭ್ಯಾಸಕ್ಕೆ ಸೌಲಭ್ಯಗಳಿವೆ. ನೃತ್ಯ, ಸಂಗೀತ, ಸಾಹಿತ್ಯ, ನಾಟಕ ಕಲಿಯುವವರಿಗೆ ವೇದಿಕೆಯಾಗಲಿದೆ. ಕಲಾವಿದರು, ತಂತ್ರಜ್ಞರನ್ನು ಬೆಳೆಸುವ ಜೊತೆಗೆ ಪ್ರೇಕ್ಷಕರನ್ನೂ ಹೆಚ್ಚಿಸುವ ಗುರಿ ಈ ಥೇಟರ್ನ ಉದ್ದೇಶ. ಎಲ್ಲ ಕಲೆಗಳ ತಾಯಿಬೇರು ಎನಿಸಿರುವ ರಂಗಭೂಮಿ ಬೆಳೆಯಲು ಹೊಸ ಭರವಸೆಯಾಗಿ ಕಾಣುತ್ತಿದೆ’ ಎಂದು ಸರದೇಶಪಾಂಡೆ ಹೇಳಿದರು.