<p><strong>ಹುಬ್ಬಳ್ಳಿ: </strong>ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ವಾರ್ಷಿಕ ಕ್ರಿಕೆಟ್ ಟೂರ್ನಿಯಲ್ಲಿ ಲೀಡ್ ಸ್ಟೋರಿ ತಂಡ ಚಾಂಪಿಯನ್ ಆಯಿತು.</p>.<p>ಇಲ್ಲಿನ ದೇಶಪಾಂಡೆ ನಗರದ ಜಿಮ್ಖಾನಾ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹೆಡ್ಲೈನ್ ತಂಡ ನಿಗದಿತ 8 ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 35 ರನ್ ಕಲೆಹಾಕಿತು. ಸುಲಭವಾದ ಗುರಿಯನ್ನು ಎದುರಾಳಿ ಲೀಡ್ ಸ್ಟೋರಿ 6.4 ಓವರ್ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ತಲುಪಿತು.</p>.<p>ಪ್ರಶಾಂತ ದಿನ್ನಿ (ಪಂದ್ಯ ಶ್ರೇಷ್ಠ), ಸುರೇಶ ನಾಯಕ್ (ಟೂರ್ನಿ ಶ್ರೇಷ್ಠ), ಚನ್ನು ಮೂಲಿಮನಿ (ಉತ್ತಮ ಬ್ಯಾಟ್ಸ್ಮನ್), ರವೀಂದ್ರ ಹಳಿಜೋಳ (ಉತ್ತಮ ಬೌಲರ್) ಸಿದ್ಧನಗೌಡ (ಉತ್ತಮ ಕ್ಷೇತ್ರರಕ್ಷಕ) ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದರು.</p>.<p>ಪತ್ರಕರ್ತರಾದ ಮೋಹನ ಹೆಗಡೆ, ವೆಂಕಟೇಶ ಪ್ರಭು, ಮಲ್ಲಿಕಾರ್ಜುನ ಸಿದ್ದಣ್ಣವರ, ರಶ್ಮಿ ಎಸ್., ಷಣ್ಮುಖ ಕೋಳಿವಾಡ, ಜಗದೀಶ ಬುರ್ಲಬಡ್ಡಿ, ಪತ್ರಕರ್ತರ ಸಂಘದ ಅಧ್ಯಕ್ಷ ಗಣಪತಿ ಗಂಗೊಳ್ಳಿ, ದುರ್ಗಾ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷ ವೀರೇಶ ಉಂಡಿ ಸೇರಿದಂತೆ ಅನೇಕರು ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ವಾರ್ಷಿಕ ಕ್ರಿಕೆಟ್ ಟೂರ್ನಿಯಲ್ಲಿ ಲೀಡ್ ಸ್ಟೋರಿ ತಂಡ ಚಾಂಪಿಯನ್ ಆಯಿತು.</p>.<p>ಇಲ್ಲಿನ ದೇಶಪಾಂಡೆ ನಗರದ ಜಿಮ್ಖಾನಾ ಮೈದಾನದಲ್ಲಿ ಬುಧವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಹೆಡ್ಲೈನ್ ತಂಡ ನಿಗದಿತ 8 ಓವರ್ಗಳಲ್ಲಿ ನಾಲ್ಕು ವಿಕೆಟ್ ನಷ್ಟಕ್ಕೆ 35 ರನ್ ಕಲೆಹಾಕಿತು. ಸುಲಭವಾದ ಗುರಿಯನ್ನು ಎದುರಾಳಿ ಲೀಡ್ ಸ್ಟೋರಿ 6.4 ಓವರ್ಗಳಲ್ಲಿ ಆರು ವಿಕೆಟ್ ಕಳೆದುಕೊಂಡು ತಲುಪಿತು.</p>.<p>ಪ್ರಶಾಂತ ದಿನ್ನಿ (ಪಂದ್ಯ ಶ್ರೇಷ್ಠ), ಸುರೇಶ ನಾಯಕ್ (ಟೂರ್ನಿ ಶ್ರೇಷ್ಠ), ಚನ್ನು ಮೂಲಿಮನಿ (ಉತ್ತಮ ಬ್ಯಾಟ್ಸ್ಮನ್), ರವೀಂದ್ರ ಹಳಿಜೋಳ (ಉತ್ತಮ ಬೌಲರ್) ಸಿದ್ಧನಗೌಡ (ಉತ್ತಮ ಕ್ಷೇತ್ರರಕ್ಷಕ) ವೈಯಕ್ತಿಕ ಪ್ರಶಸ್ತಿಗಳನ್ನು ಪಡೆದರು.</p>.<p>ಪತ್ರಕರ್ತರಾದ ಮೋಹನ ಹೆಗಡೆ, ವೆಂಕಟೇಶ ಪ್ರಭು, ಮಲ್ಲಿಕಾರ್ಜುನ ಸಿದ್ದಣ್ಣವರ, ರಶ್ಮಿ ಎಸ್., ಷಣ್ಮುಖ ಕೋಳಿವಾಡ, ಜಗದೀಶ ಬುರ್ಲಬಡ್ಡಿ, ಪತ್ರಕರ್ತರ ಸಂಘದ ಅಧ್ಯಕ್ಷ ಗಣಪತಿ ಗಂಗೊಳ್ಳಿ, ದುರ್ಗಾ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷ ವೀರೇಶ ಉಂಡಿ ಸೇರಿದಂತೆ ಅನೇಕರು ವಿಜೇತರಿಗೆ ಪ್ರಶಸ್ತಿ ಪ್ರದಾನ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>