<p>ಹುಬ್ಬಳ್ಳಿ: ಲೀಗ್ ಹಂತದಿಂದ ಉತ್ತಮ ಪ್ರದರ್ಶನ ತೋರಿ ನೌಕೌಟ್ನಲ್ಲಿಯೂ ಮಿಂಚಿದ ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿ (ಟಿಎಸ್ಸಿಎ) ತಂಡ, ಕೆಎಸ್ಸಿಎ ಧಾರವಾಡ ವಲಯ ಆಯೋಜಿಸಿದ್ದ ಮೂರನೇ ಡಿವಿಷನ್ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದೆ.</p>.<p>ಇಲ್ಲಿನ ರಾಜನಗರದ ಕೆಎಸ್ಸಿಎ ಮೈದಾನದಲ್ಲಿ ನಡೆದ ಫೈನಲ್ ಪಂದ್ಯ<br />ದಲ್ಲಿ ಮೊದಲು ಬ್ಯಾಟ್ ಮಾಡಿದ ಟಿಎಸ್ಸಿಎ 28.5 ಓವರ್ಗಳಲ್ಲಿ 177 ರನ್ ಕಲೆಹಾಕಿ ಆಲೌಟ್ ಆಯಿತು. ಆರಂಭಿಕ ಬ್ಯಾಟ್ಸ್ಮನ್ ಪ್ರಲ್ಹಾದ ನಾಯ್ಕ 87 ರನ್ ಗಳಿಸಿ ತಂಡ ಉತ್ತಮ ಮೊತ್ತ ಗಳಿಸಲು ಕಾಣಿಕೆ ನೀಡಿದರು.</p>.<p>ಎದುರಾಳಿ ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್ ‘ಸಿ’ ತಂಡ ಗುರಿಯ ಎದುರು ಉತ್ತಮ ಹೋರಾಟ ತೋರಿತಾದರೂ ಗುರಿ ಮುಟ್ಟುವಲ್ಲಿ ವಿಫಲವಾಯಿತು. ಈ ತಂಡ ಅಂತಿಮವಾಗಿ 30 ಓವರ್ಗಳಲ್ಲಿ 102 ರನ್ ಗಳಿಸಿ ಆಲೌಟ್ ಆಯಿತು.</p>.<p>ಇದರಿಂದ 75 ರನ್ಗಳ ಗೆಲುವು ಪಡೆದ ತೇಜಲ್ ತಂಡ ‘ಬಿ’ ಡಿವಿಷನ್ ಟೂರ್ನಿಗೆ ಬಡ್ತಿ ಪಡೆದುಕೊಂಡಿತು. ತೇಜಲ್ ತಂಡದ ರಾಜಾರಾಮ್ ವೈದ್ಯ ಮತ್ತು ನವೀನ ಗಡದಿನ್ನಿ ತಲಾ ಮೂರು ವಿಕೆಟ್ಗಳನ್ನು ಕಬಳಿಸಿ ತಂಡ ಪ್ರಶಸ್ತಿ ಗೆಲ್ಲಲು ನೆರವಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಹುಬ್ಬಳ್ಳಿ: ಲೀಗ್ ಹಂತದಿಂದ ಉತ್ತಮ ಪ್ರದರ್ಶನ ತೋರಿ ನೌಕೌಟ್ನಲ್ಲಿಯೂ ಮಿಂಚಿದ ತೇಜಲ್ ಶಿರಗುಪ್ಪಿ ಕ್ರಿಕೆಟ್ ಅಕಾಡೆಮಿ (ಟಿಎಸ್ಸಿಎ) ತಂಡ, ಕೆಎಸ್ಸಿಎ ಧಾರವಾಡ ವಲಯ ಆಯೋಜಿಸಿದ್ದ ಮೂರನೇ ಡಿವಿಷನ್ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದೆ.</p>.<p>ಇಲ್ಲಿನ ರಾಜನಗರದ ಕೆಎಸ್ಸಿಎ ಮೈದಾನದಲ್ಲಿ ನಡೆದ ಫೈನಲ್ ಪಂದ್ಯ<br />ದಲ್ಲಿ ಮೊದಲು ಬ್ಯಾಟ್ ಮಾಡಿದ ಟಿಎಸ್ಸಿಎ 28.5 ಓವರ್ಗಳಲ್ಲಿ 177 ರನ್ ಕಲೆಹಾಕಿ ಆಲೌಟ್ ಆಯಿತು. ಆರಂಭಿಕ ಬ್ಯಾಟ್ಸ್ಮನ್ ಪ್ರಲ್ಹಾದ ನಾಯ್ಕ 87 ರನ್ ಗಳಿಸಿ ತಂಡ ಉತ್ತಮ ಮೊತ್ತ ಗಳಿಸಲು ಕಾಣಿಕೆ ನೀಡಿದರು.</p>.<p>ಎದುರಾಳಿ ಹುಬ್ಬಳ್ಳಿ ಸ್ಪೋರ್ಟ್ಸ್ ಕ್ಲಬ್ ‘ಸಿ’ ತಂಡ ಗುರಿಯ ಎದುರು ಉತ್ತಮ ಹೋರಾಟ ತೋರಿತಾದರೂ ಗುರಿ ಮುಟ್ಟುವಲ್ಲಿ ವಿಫಲವಾಯಿತು. ಈ ತಂಡ ಅಂತಿಮವಾಗಿ 30 ಓವರ್ಗಳಲ್ಲಿ 102 ರನ್ ಗಳಿಸಿ ಆಲೌಟ್ ಆಯಿತು.</p>.<p>ಇದರಿಂದ 75 ರನ್ಗಳ ಗೆಲುವು ಪಡೆದ ತೇಜಲ್ ತಂಡ ‘ಬಿ’ ಡಿವಿಷನ್ ಟೂರ್ನಿಗೆ ಬಡ್ತಿ ಪಡೆದುಕೊಂಡಿತು. ತೇಜಲ್ ತಂಡದ ರಾಜಾರಾಮ್ ವೈದ್ಯ ಮತ್ತು ನವೀನ ಗಡದಿನ್ನಿ ತಲಾ ಮೂರು ವಿಕೆಟ್ಗಳನ್ನು ಕಬಳಿಸಿ ತಂಡ ಪ್ರಶಸ್ತಿ ಗೆಲ್ಲಲು ನೆರವಾದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>