ಹುಬ್ಬಳ್ಳಿ: ಓದು, ಬರಹದ ಲೆಕ್ಕಾಚಾರವೇ ಶಿಕ್ಷಣವಲ್ಲ. ಅದರಾಚೆಗೂ ಮಗುವನ್ನು ಉತ್ತಮ ಮನುಷ್ಯನನ್ನಾಗಿ ಮಾಡುವುದೇ ಶಿಕ್ಷಣ. ಓದಿನ ಜೊತೆಗೆ ಕಲೆ, ಸಾಹಿತ್ಯ, ಸಂಸ್ಕೃತಿ, ನಾಟಕ ಸುಂದರ ಭವಿಷ್ಯಕ್ಕೆ ಬುನಾದಿಯಿದ್ದಂತೆ. ಸರ್ಕಾರಿ ಶಾಲೆಯಿಂದ ಮಾತ್ರ ಇವೆಲ್ಲವುಗಳ ಉಳಿವು ಸಾಧ್ಯ ಎಂದು ಮಕ್ಕಳ ಸಾಹಿತಿ ಶಂಕರ ಹಲಗತ್ತಿ ಅಭಿಪ್ರಾಯಪಟ್ಟರು.