<p><strong>ಧಾರವಾಡ</strong>: ಉದ್ಯಾನ ಅಭಿವೃದ್ಧಿ, ಮಳೆ ನೀರು ಸಂಗ್ರಹ, ರಸ್ತೆ ಡಾಂಬರೀಕರಣ, ಗಟಾರ ನಿರ್ಮಾಣ ಸಹಿತ ವಿವಿಧ ಕಾಮಗಾರಿಗಳು ಒಂದನೇ ವಾರ್ಡ್ ವ್ಯಾಪ್ತಿಯಲ್ಲಿ ವಿವಿಧೆಡೆ ನಡೆದಿವೆ. ಮೂಲಸೌಲಭ್ಯ, ವಾರ್ಡ್ ಅಭಿವೃದ್ಧಿ ಕಡೆಗೆ ಪ್ರಯತ್ನ ಸಾಗಿದೆ.</p><p>ಈ ವಾರ್ಡ್ ವಿಸ್ತೀರ್ಣದಲ್ಲಿ ದೊಡ್ಡದು. ಉದ್ಯಾನಗಳು, ಗಿಡಮರಗಳ ಸೊಬಗು, ವಿಸ್ತಾರವಾದ ರಸ್ತೆಗಳು ಇಲ್ಲಿನ ವೈಶಿಷ್ಟ್ಯಗಳು. ಸಂಪಿಗೆ ನಗರ/ ಬೇಂದ್ರೆ ನಗರದಲ್ಲಿ ವ್ಯವಸ್ಥಿತ ಬಸ್ ನಿಲ್ದಾಣ ಇದೆ.</p><p>‘15ನೇ ಹಣಕಾಸು ಆಯೋಗದ ಅನುದಾನದಡಿ ₹1 ಕೋಟಿ ವೆಚ್ಚದಲ್ಲಿ ಕೆಎಚ್ಬಿ ಕಾಲೊನಿಯ (ಸಹ್ಯಾದ್ರಿ ನಗರ) ಉದ್ಯಾನ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ₹1 ಕೋಟಿ ವೆಚ್ಚದಲ್ಲಿ ಸುಂದರ ನಗರ, ಆತ್ಮಾನಂದ ನಗರದಲ್ಲಿ ಗಟಾರ ನಿರ್ಮಾಣ ನಡೆಯುತ್ತಿದೆ’ ಎಂದು ಪಾಲಿಕೆ ಸದಸ್ಯೆ (ವಾರ್ಡ್1) ಅನಿತಾ ಚಳಗೇರಿ ತಿಳಿಸಿದರು.</p><p>‘ಗುಲಗಂಜಿ ಕೊಪ್ಪದ ಸ್ಮಶಾನ ದಲ್ಲಿ ₹1 ಕೋಟಿ ವೆಚ್ಚದಲ್ಲಿ ಮಳೆ ನೀರು ಸಂಗ್ರಹದ ಕಾಮಗಾರಿ ನಡೆಯುತ್ತಿದೆ. ₹16 ಲಕ್ಷ ವೆಚ್ಚದಲ್ಲಿ ವಿಕಾಸನಗರದಲ್ಲಿ ರಸ್ತೆ ಡಾಂಬರೀಕರಣ ಮಾಡಲಾಗಿದೆ. ಜನರು ಸಮಸ್ಯೆಗಳನ್ನು ನೇರವಾಗಿ , ಫೋನ್ ಮೂಲಕ ಗಮನಕ್ಕೆ ತರುತ್ತಾರೆ. ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತೇನೆ’ ಎಂದು ಅವರು ತಿಳಿಸಿದರು.</p><p>ನಿವೇಶನಗಳು, ರಸ್ತೆ ಬದಿಗಳಲ್ಲಿ ಕಸ ಎಸೆಯುವ ಪರಿಪಾಟ ಇದೆ. ಸಾಧನಾ ಕೇರಿ ಕೆರೆಗೆ ಚರಂಡಿ ನೀರು ಸೇರುತ್ತದೆ. ಇದಕ್ಕೆ ಕಡಿವಾಣ ಹಾಕಬೇಕಿದೆ.</p><p>‘ಪ್ರತಿದಿನ ಕಸ ಸಂಗ್ರಹ ವಾಹನ ಬರುವಂತೆ ಮಾಡಬೇಕು. ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು. ವ್ಯವಸ್ಥಿತವಾಗಿ ಗಟಾರಗಳನ್ನು ನಿರ್ಮಿಸಬೇಕು. ವಾರ್ಡ್ನಲ್ಲಿನ ಎಲ್ಲ ರಸ್ತೆಗಳನ್ನು ಕಾಂಕ್ರಿಟ್ ರಸ್ತೆಗಳಾಗಿಸಲು ಕ್ರಮ ವಹಿಸಬೇಕು’ ಎಂದು ಸರೋವರ ನಗರ ನಿವಾಸಿ ಶಾಂತಮ್ಮ ಹಿರೇಮಠ ಒತ್ತಾಯಿಸಿದರು.</p><p>l ಪ್ರತಿನಿತ್ಯ ನೀರು ಪೂರೈಕೆ</p><p>l ನಿಯಮಿತವಾಗಿ ಕಸ ವಿಲೇವಾರಿ, ಹೆಚ್ಚುವರಿ ವಾಹನ ವ್ಯವಸ್ಥೆ</p><p>l ಗಟಾರಗಳ ನಿರ್ವಹಣೆ, ಸ್ವಚ್ಛತೆ l ಬೀದಿ ದೀಪ; ಎಲ್ಇಡಿ ಬಲ್ಬ್ ಅಳವಡಿಕೆ</p><p>ಪ್ರಮುಖ ಬಡಾವಣೆಗಳು</p><p>ದೊಡ್ಡನಾಯಕನ ಕೊಪ್ಪ, ಸಂಪಿಗೆ ನಗರ, ಬೇಂದ್ರೆ ನಗರ, ಪೊಲೀಸ್ ಹೆಡ್ ಕ್ವಾರ್ಟ್ರಸ್, ಬನಶ್ರೀನಗರ, ಸರೋವರ ನಗರ, ಮಲಪ್ರಭಾ ನಗರ, ಮಹಾಂತೇಶ ನಗರ, ಆದರ್ಶನಗರ, ಸುಂದರನಗರ, ಆತ್ಮಾನಂದ ನಗರ, ವಿಕಾಸ ನಗರ, ಓಂ ನಗರ, ಸಿದ್ಧಾರ್ಥ ಕಾಲೊನಿ, ಗುಲಗಂಜಿಕೊಪ್ಪ, ಸಿ.ಬಿ.ನಗರ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ</strong>: ಉದ್ಯಾನ ಅಭಿವೃದ್ಧಿ, ಮಳೆ ನೀರು ಸಂಗ್ರಹ, ರಸ್ತೆ ಡಾಂಬರೀಕರಣ, ಗಟಾರ ನಿರ್ಮಾಣ ಸಹಿತ ವಿವಿಧ ಕಾಮಗಾರಿಗಳು ಒಂದನೇ ವಾರ್ಡ್ ವ್ಯಾಪ್ತಿಯಲ್ಲಿ ವಿವಿಧೆಡೆ ನಡೆದಿವೆ. ಮೂಲಸೌಲಭ್ಯ, ವಾರ್ಡ್ ಅಭಿವೃದ್ಧಿ ಕಡೆಗೆ ಪ್ರಯತ್ನ ಸಾಗಿದೆ.</p><p>ಈ ವಾರ್ಡ್ ವಿಸ್ತೀರ್ಣದಲ್ಲಿ ದೊಡ್ಡದು. ಉದ್ಯಾನಗಳು, ಗಿಡಮರಗಳ ಸೊಬಗು, ವಿಸ್ತಾರವಾದ ರಸ್ತೆಗಳು ಇಲ್ಲಿನ ವೈಶಿಷ್ಟ್ಯಗಳು. ಸಂಪಿಗೆ ನಗರ/ ಬೇಂದ್ರೆ ನಗರದಲ್ಲಿ ವ್ಯವಸ್ಥಿತ ಬಸ್ ನಿಲ್ದಾಣ ಇದೆ.</p><p>‘15ನೇ ಹಣಕಾಸು ಆಯೋಗದ ಅನುದಾನದಡಿ ₹1 ಕೋಟಿ ವೆಚ್ಚದಲ್ಲಿ ಕೆಎಚ್ಬಿ ಕಾಲೊನಿಯ (ಸಹ್ಯಾದ್ರಿ ನಗರ) ಉದ್ಯಾನ ಅಭಿವೃದ್ಧಿ ಕಾಮಗಾರಿ ಪ್ರಗತಿಯಲ್ಲಿದೆ. ₹1 ಕೋಟಿ ವೆಚ್ಚದಲ್ಲಿ ಸುಂದರ ನಗರ, ಆತ್ಮಾನಂದ ನಗರದಲ್ಲಿ ಗಟಾರ ನಿರ್ಮಾಣ ನಡೆಯುತ್ತಿದೆ’ ಎಂದು ಪಾಲಿಕೆ ಸದಸ್ಯೆ (ವಾರ್ಡ್1) ಅನಿತಾ ಚಳಗೇರಿ ತಿಳಿಸಿದರು.</p><p>‘ಗುಲಗಂಜಿ ಕೊಪ್ಪದ ಸ್ಮಶಾನ ದಲ್ಲಿ ₹1 ಕೋಟಿ ವೆಚ್ಚದಲ್ಲಿ ಮಳೆ ನೀರು ಸಂಗ್ರಹದ ಕಾಮಗಾರಿ ನಡೆಯುತ್ತಿದೆ. ₹16 ಲಕ್ಷ ವೆಚ್ಚದಲ್ಲಿ ವಿಕಾಸನಗರದಲ್ಲಿ ರಸ್ತೆ ಡಾಂಬರೀಕರಣ ಮಾಡಲಾಗಿದೆ. ಜನರು ಸಮಸ್ಯೆಗಳನ್ನು ನೇರವಾಗಿ , ಫೋನ್ ಮೂಲಕ ಗಮನಕ್ಕೆ ತರುತ್ತಾರೆ. ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸುತ್ತೇನೆ’ ಎಂದು ಅವರು ತಿಳಿಸಿದರು.</p><p>ನಿವೇಶನಗಳು, ರಸ್ತೆ ಬದಿಗಳಲ್ಲಿ ಕಸ ಎಸೆಯುವ ಪರಿಪಾಟ ಇದೆ. ಸಾಧನಾ ಕೇರಿ ಕೆರೆಗೆ ಚರಂಡಿ ನೀರು ಸೇರುತ್ತದೆ. ಇದಕ್ಕೆ ಕಡಿವಾಣ ಹಾಕಬೇಕಿದೆ.</p><p>‘ಪ್ರತಿದಿನ ಕಸ ಸಂಗ್ರಹ ವಾಹನ ಬರುವಂತೆ ಮಾಡಬೇಕು. ಸ್ವಚ್ಛತೆಗೆ ಹೆಚ್ಚು ಆದ್ಯತೆ ನೀಡಬೇಕು. ವ್ಯವಸ್ಥಿತವಾಗಿ ಗಟಾರಗಳನ್ನು ನಿರ್ಮಿಸಬೇಕು. ವಾರ್ಡ್ನಲ್ಲಿನ ಎಲ್ಲ ರಸ್ತೆಗಳನ್ನು ಕಾಂಕ್ರಿಟ್ ರಸ್ತೆಗಳಾಗಿಸಲು ಕ್ರಮ ವಹಿಸಬೇಕು’ ಎಂದು ಸರೋವರ ನಗರ ನಿವಾಸಿ ಶಾಂತಮ್ಮ ಹಿರೇಮಠ ಒತ್ತಾಯಿಸಿದರು.</p><p>l ಪ್ರತಿನಿತ್ಯ ನೀರು ಪೂರೈಕೆ</p><p>l ನಿಯಮಿತವಾಗಿ ಕಸ ವಿಲೇವಾರಿ, ಹೆಚ್ಚುವರಿ ವಾಹನ ವ್ಯವಸ್ಥೆ</p><p>l ಗಟಾರಗಳ ನಿರ್ವಹಣೆ, ಸ್ವಚ್ಛತೆ l ಬೀದಿ ದೀಪ; ಎಲ್ಇಡಿ ಬಲ್ಬ್ ಅಳವಡಿಕೆ</p><p>ಪ್ರಮುಖ ಬಡಾವಣೆಗಳು</p><p>ದೊಡ್ಡನಾಯಕನ ಕೊಪ್ಪ, ಸಂಪಿಗೆ ನಗರ, ಬೇಂದ್ರೆ ನಗರ, ಪೊಲೀಸ್ ಹೆಡ್ ಕ್ವಾರ್ಟ್ರಸ್, ಬನಶ್ರೀನಗರ, ಸರೋವರ ನಗರ, ಮಲಪ್ರಭಾ ನಗರ, ಮಹಾಂತೇಶ ನಗರ, ಆದರ್ಶನಗರ, ಸುಂದರನಗರ, ಆತ್ಮಾನಂದ ನಗರ, ವಿಕಾಸ ನಗರ, ಓಂ ನಗರ, ಸಿದ್ಧಾರ್ಥ ಕಾಲೊನಿ, ಗುಲಗಂಜಿಕೊಪ್ಪ, ಸಿ.ಬಿ.ನಗರ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>