ಹುಬ್ಬಳ್ಳಿ: ‘ಇ–ತ್ಯಾಜ್ಯ ವಿಲೇವಾರಿಯನ್ನು ಕೆಲವರು ಅವೈಜ್ಞಾನಿಕವಾಗಿ ಮಾಡುತ್ತಿದ್ದು, ಸಮರ್ಪಕ ವಿಲೇವಾರಿ ಕುರಿತು ಜಾಗೃತಿ ಮೂಡಿಸುವ ಅವಶ್ಯಕತೆ ಇದೆ’ ಎಂದು ಹುಬ್ಬಳ್ಳಿಯ ಬಸವ ಕಲೆ ಮತ್ತು ತಾಂತ್ರಿಕ ಮರುಬಳಕೆ ವಸ್ತು ಸಂಗ್ರಹಾಲಯ ನಿರ್ದೇಶಕ ವೀರಪ್ಪ ಅರಕೇರಿ ಹೇಳಿದರು.
ಕೆ.ಎಲ್.ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಎನ್.ಎಸ್.ಎಸ್. ಮತ್ತು ಯೂತ್ ರೆಡ್ ಕ್ರಾಸ್ ಘಟಕ ಸಹಯೋಗದಲ್ಲಿ ಈಚೆಗೆ ಹಮ್ಮಿಕೊಂಡಿದ್ದ ಇ-ತ್ಯಾಜ್ಯ ನಿರ್ವಹಣೆ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಇತ್ತೀಚಿನ ದಿನಗಳಲ್ಲಿ ಇ-ತ್ಯಾಜ್ಯದ ನಿರ್ವಹಣೆ ಸವಾಲಾಗಿದೆ. ವಿಲೇವಾರಿ ಮಾಹಿತಿಯ ಕೊರತೆಯಿಂದಾಗಿ ಸಮಸ್ಯೆ ಆಗುತ್ತಿದೆ’ ಎಂದು ಹೇಳಿದರು.
ಪ್ರೊ.ಎಂ.ಬಿ.ಕೊಳವಿ ಮಾತನಾಡಿ, ‘ಕೆಲವರು ಇ-ತ್ಯಾಜ್ಯ ವಿಲೇವಾರಿ ಮಾಡುವಲ್ಲಿ ನಿರ್ಲಕ್ಷ ಧೋರಣೆ ಅನುಸರಿಸುತ್ತಿದ್ದಾರೆ. ಇ-ತ್ಯಾಜ್ಯವನ್ನು ಪ್ರಾರಂಭದ ಹಂತದಲ್ಲಿಯೇ ಬೇರ್ಪಡಿಸಿ, ಸಮರ್ಪಕವಾಗಿ ವಿಲೇವಾರಿ ಮಾಡಬೇಕು’ ಎಂದರು.
ಪ್ರೊ.ವಿ.ಸಿ. ಚಿನ್ನೂರ, ವಿಶಾಲಾ ತಳಗಡೆ, ವಿ.ಆರ್. ತಿರ್ಲಾಪೂರ, ಎನ್.ಎಸ್.ಎಸ್ ಕಾರ್ಯಕ್ರಮ ಅಧಿಕಾರಿ ಡಾ.ವಿಠ್ಠಲ್ ಕೋಳಿ, ಡಾ.ಎ.ಕೆ.ಮಠ ಇದ್ದರು.