<p><strong>ಹುಬ್ಬಳ್ಳಿ</strong>: ‘ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆಗೆ ಚುರುಕು ನೀಡಬೇಕು. ಅತಿಕ್ರಮಣ ಮಾಡಿಕೊಂಡ ಭೂಮಿಯೇ ಜೀವನಕ್ಕೆ ಆಧಾರ ಎಂಬ ಪ್ರಕರಣ ಹೊರತುಪಡಿಸಿ, ಉಳಿದ ಪ್ರಕರಣಗಳಲ್ಲಿ ಕಡ್ಡಾಯವಾಗಿ ತೆರವು ಮಾಡಬೇಕು’ ಎಂದು ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚಿಸಿದರು.</p>.<p>ನಗರದಲ್ಲಿ ಭಾನುವಾರ ಧಾರವಾಡ ಅರಣ್ಯ ವೃತ್ತದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ‘ಅರಣ್ಯ ಒತ್ತುವರಿಯನ್ನು ಗಂಭೀರವಾಗಿ ಪರಿಗಣಿಸಬೇಕು. ಕಂದಾಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ, ತೆರವು ಮಾಡಿದ ವರದಿಯನ್ನು ಸಲ್ಲಿಸಬೇಕು’ ಎಂದರು.</p>.<p>‘ನಗರದ ವಿಮಾಣ ನಿಲ್ದಾಣದ ಬಳಿಯ 26 ಎಕರೆ ಪ್ರದೇಶದಲ್ಲಿ ಸಸ್ಯ ಉದ್ಯಾನ ನಿರ್ಮಾಣ ತ್ವರಿತಗತಿಯಲ್ಲಿ ಆಗಬೇಕು. ಗಡಿಯನ್ನು ಸರಿಯಾಗಿ ಗುರುತಿಸಿ ಬೇಲಿ ನಿರ್ಮಿಸಿ, ಡಿಸೆಂಬರ್ ಒಳಗಾಗಿ ಉದ್ಘಾಟನೆ ಮಾಡಬೇಕು’ ಎಂದರು.</p>.<p>‘ಹಾವೇರಿ ವ್ಯಾಪ್ತಿಯ ಅರಣ್ಯ ಭಾಗದಲ್ಲಿ ಕೃಷ್ಣಮೃಗಗಳು ಬೆಳೆ ಹಾನಿ ಮಾಡುತ್ತಿರುವ ಕುರಿತು ದೂರುಗಳು ಬರುತ್ತಿವೆ. ಕೃಷ್ಣ ಮೃಗಗಳ ಸಮೀಕ್ಷೆ ಮಾಡಿ, ಬೆಳೆ ಹಾನಿಗೆ ಪರಿಹಾರ ಒದಗಿಸಬೇಕು’ ಎಂದರು.</p>.<p>ಪ್ಲಾಸ್ಟಿಕ್ ತಡೆ– ಕಾರ್ಯಾಚರಣೆಗೆ ಅತೃಪ್ತಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವವರ ಮೇಲೆ 252 ದಾಳಿಗಳನ್ನು ನಡೆಸಿದ್ದು, ₹3.80 ಲಕ್ಷ ದಂಡ ಸಂಗ್ರಹಿಸಲಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.</p>.<p>ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವ, ‘ಕನಿಷ್ಠ ಸಾವಿರ ದಾಳಿಗಳನ್ನು ನಡೆಸಬೇಕಿತ್ತು. ಕಾರ್ಯಾಚರಣೆ ತೃಪ್ತಿದಾಯಕವಾಗಿಲ್ಲ. ಮಾರುಕಟ್ಟೆಗೆ ಬರುವ ಪ್ಲಾಸ್ಟಿಕ್ ಮೂಲವನ್ನು ಪತ್ತೆಹಚ್ಚಿ, ನಿಯಂತ್ರಿಸಬೇಕು’ ಎಂದು ಎಚ್ಚರಿಸಿದರು.</p>.<p>‘ಪ್ಲಾಸ್ಟಿಕ್ ಕುರಿತು ಶಾಲೆಗಳು, ಬಡಾವಣೆಗಳಲ್ಲಿ ಜಾಗೃತಿ ಮೂಡಿಸಬೇಕು. ಪಾಲಿಕೆ ಸದಸ್ಯರೊಂದಿಗೆ ಸಂವಹನ ನಡೆಸಬೇಕು. ಮಹಿಳಾ ಸಂಘಗಳ ನೆರವು ಪಡೆಯಬಹುದು’ ಎಂದರು.</p>.<p>‘ಕಲಘಟಗಿ ತಾಲ್ಲೂಕಿನಲ್ಲಿ 19 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಈ ಭಾಗದಲ್ಲಿ ಆನೆಗಳ ಓಡಾಟವಿರುವ ಕಾರಣ ಈಗಾಗಲೇ 47 ಕಿ.ಮೀ. ಆನೆ ತಡೆ ಕಂದಕ ನಿರ್ಮಿಸಲಾಗಿದೆ. ಇನ್ನೂ 44 ಕಿ.ಮೀ. ಕಂದಕ ನಿರ್ಮಾಣ ಅಗತ್ಯವಿದೆ. ಅಲ್ಲದೆ ಇಲಾಖೆಯ ಉಪಯೋಗಕ್ಕಾಗಿ ವಾಹನದ ಅವಶ್ಯಕತೆ ಇದೆ’ ಎಂದು ಅಧಿಕಾರಿಗಳು ಗಮನ ಸೆಳೆದರು.</p>.<div><blockquote> ಕೆರೆಗಳ ಮಾಲಿನ್ಯ ನಿಯಂತ್ರಿಸಲು ವಿಫಲವಾದರೆ ಪಾಲಿಕೆ ಆಯುಕ್ತರ ಮೇಲೆ ಪ್ರಕರಣ ದಾಖಲಿಸಿ. ಆಗಲಾದರೂ ಅವರು ಎಚ್ಚೆತ್ತುಕೊಂಡು ಕಾರ್ಯ ನಿರ್ವಹಿಸಬಹುದು </blockquote><span class="attribution">ಈಶ್ವರ ಖಂಡ್ರೆ ಅರಣ್ಯ ಸಚಿವ</span></div>. <p><strong>ಶ್ರೀಗಂಧದ ಎಣ್ಣೆ ಹರಾಜು</strong> </p><p>‘ಧಾರವಾಡ ಅರಣ್ಯ ವಿಭಾಗದ ವತಿಯಿಂದ 31 ಕ್ವಿಂಟಲ್ ಶ್ರೀಗಂಧದ ತುಂಡುಗಳನ್ನು ಹರಾಜು ಮಾಡಲಾಗಿದ್ದು ಇನ್ನೂ 66 ಕ್ವಿಂಟಲ್ ಉಳಿದಿದೆ. 91.13 ಕೆ.ಜಿ. ಶ್ರೀಗಂಧದ ಎಣ್ಣೆಯನ್ನು ಜಪ್ತಿ ಮಾಡಲಾಗಿದ್ದು ಸೆ.1ರಂದು ಅವುಗಳ ಹರಾಜು ಪ್ರಕ್ರಿಯೆ ನಡೆಯಲಿದೆ. ಇದರಿಂದ ಅಂದಾಜು ₹ 7 ಕೋಟಿ ಆದಾಯ ಸಿಗಲಿದೆ’ ಎಂದು ಡಿಸಿಎಫ್ ವಿವೇಕ ಕವರಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ</strong>: ‘ಅರಣ್ಯ ಭೂಮಿ ಒತ್ತುವರಿ ತೆರವು ಕಾರ್ಯಾಚರಣೆಗೆ ಚುರುಕು ನೀಡಬೇಕು. ಅತಿಕ್ರಮಣ ಮಾಡಿಕೊಂಡ ಭೂಮಿಯೇ ಜೀವನಕ್ಕೆ ಆಧಾರ ಎಂಬ ಪ್ರಕರಣ ಹೊರತುಪಡಿಸಿ, ಉಳಿದ ಪ್ರಕರಣಗಳಲ್ಲಿ ಕಡ್ಡಾಯವಾಗಿ ತೆರವು ಮಾಡಬೇಕು’ ಎಂದು ಅಧಿಕಾರಿಗಳಿಗೆ ಅರಣ್ಯ ಸಚಿವ ಈಶ್ವರ ಖಂಡ್ರೆ ಸೂಚಿಸಿದರು.</p>.<p>ನಗರದಲ್ಲಿ ಭಾನುವಾರ ಧಾರವಾಡ ಅರಣ್ಯ ವೃತ್ತದ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಅವರು, ‘ಅರಣ್ಯ ಒತ್ತುವರಿಯನ್ನು ಗಂಭೀರವಾಗಿ ಪರಿಗಣಿಸಬೇಕು. ಕಂದಾಯ ಇಲಾಖೆಯೊಂದಿಗೆ ಸಮನ್ವಯ ಸಾಧಿಸಿ, ತೆರವು ಮಾಡಿದ ವರದಿಯನ್ನು ಸಲ್ಲಿಸಬೇಕು’ ಎಂದರು.</p>.<p>‘ನಗರದ ವಿಮಾಣ ನಿಲ್ದಾಣದ ಬಳಿಯ 26 ಎಕರೆ ಪ್ರದೇಶದಲ್ಲಿ ಸಸ್ಯ ಉದ್ಯಾನ ನಿರ್ಮಾಣ ತ್ವರಿತಗತಿಯಲ್ಲಿ ಆಗಬೇಕು. ಗಡಿಯನ್ನು ಸರಿಯಾಗಿ ಗುರುತಿಸಿ ಬೇಲಿ ನಿರ್ಮಿಸಿ, ಡಿಸೆಂಬರ್ ಒಳಗಾಗಿ ಉದ್ಘಾಟನೆ ಮಾಡಬೇಕು’ ಎಂದರು.</p>.<p>‘ಹಾವೇರಿ ವ್ಯಾಪ್ತಿಯ ಅರಣ್ಯ ಭಾಗದಲ್ಲಿ ಕೃಷ್ಣಮೃಗಗಳು ಬೆಳೆ ಹಾನಿ ಮಾಡುತ್ತಿರುವ ಕುರಿತು ದೂರುಗಳು ಬರುತ್ತಿವೆ. ಕೃಷ್ಣ ಮೃಗಗಳ ಸಮೀಕ್ಷೆ ಮಾಡಿ, ಬೆಳೆ ಹಾನಿಗೆ ಪರಿಹಾರ ಒದಗಿಸಬೇಕು’ ಎಂದರು.</p>.<p>ಪ್ಲಾಸ್ಟಿಕ್ ತಡೆ– ಕಾರ್ಯಾಚರಣೆಗೆ ಅತೃಪ್ತಿ: ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್ ಬಳಕೆ ಮಾಡುವವರ ಮೇಲೆ 252 ದಾಳಿಗಳನ್ನು ನಡೆಸಿದ್ದು, ₹3.80 ಲಕ್ಷ ದಂಡ ಸಂಗ್ರಹಿಸಲಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.</p>.<p>ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವ, ‘ಕನಿಷ್ಠ ಸಾವಿರ ದಾಳಿಗಳನ್ನು ನಡೆಸಬೇಕಿತ್ತು. ಕಾರ್ಯಾಚರಣೆ ತೃಪ್ತಿದಾಯಕವಾಗಿಲ್ಲ. ಮಾರುಕಟ್ಟೆಗೆ ಬರುವ ಪ್ಲಾಸ್ಟಿಕ್ ಮೂಲವನ್ನು ಪತ್ತೆಹಚ್ಚಿ, ನಿಯಂತ್ರಿಸಬೇಕು’ ಎಂದು ಎಚ್ಚರಿಸಿದರು.</p>.<p>‘ಪ್ಲಾಸ್ಟಿಕ್ ಕುರಿತು ಶಾಲೆಗಳು, ಬಡಾವಣೆಗಳಲ್ಲಿ ಜಾಗೃತಿ ಮೂಡಿಸಬೇಕು. ಪಾಲಿಕೆ ಸದಸ್ಯರೊಂದಿಗೆ ಸಂವಹನ ನಡೆಸಬೇಕು. ಮಹಿಳಾ ಸಂಘಗಳ ನೆರವು ಪಡೆಯಬಹುದು’ ಎಂದರು.</p>.<p>‘ಕಲಘಟಗಿ ತಾಲ್ಲೂಕಿನಲ್ಲಿ 19 ಸಾವಿರ ಹೆಕ್ಟೇರ್ ಅರಣ್ಯ ಪ್ರದೇಶವಿದೆ. ಈ ಭಾಗದಲ್ಲಿ ಆನೆಗಳ ಓಡಾಟವಿರುವ ಕಾರಣ ಈಗಾಗಲೇ 47 ಕಿ.ಮೀ. ಆನೆ ತಡೆ ಕಂದಕ ನಿರ್ಮಿಸಲಾಗಿದೆ. ಇನ್ನೂ 44 ಕಿ.ಮೀ. ಕಂದಕ ನಿರ್ಮಾಣ ಅಗತ್ಯವಿದೆ. ಅಲ್ಲದೆ ಇಲಾಖೆಯ ಉಪಯೋಗಕ್ಕಾಗಿ ವಾಹನದ ಅವಶ್ಯಕತೆ ಇದೆ’ ಎಂದು ಅಧಿಕಾರಿಗಳು ಗಮನ ಸೆಳೆದರು.</p>.<div><blockquote> ಕೆರೆಗಳ ಮಾಲಿನ್ಯ ನಿಯಂತ್ರಿಸಲು ವಿಫಲವಾದರೆ ಪಾಲಿಕೆ ಆಯುಕ್ತರ ಮೇಲೆ ಪ್ರಕರಣ ದಾಖಲಿಸಿ. ಆಗಲಾದರೂ ಅವರು ಎಚ್ಚೆತ್ತುಕೊಂಡು ಕಾರ್ಯ ನಿರ್ವಹಿಸಬಹುದು </blockquote><span class="attribution">ಈಶ್ವರ ಖಂಡ್ರೆ ಅರಣ್ಯ ಸಚಿವ</span></div>. <p><strong>ಶ್ರೀಗಂಧದ ಎಣ್ಣೆ ಹರಾಜು</strong> </p><p>‘ಧಾರವಾಡ ಅರಣ್ಯ ವಿಭಾಗದ ವತಿಯಿಂದ 31 ಕ್ವಿಂಟಲ್ ಶ್ರೀಗಂಧದ ತುಂಡುಗಳನ್ನು ಹರಾಜು ಮಾಡಲಾಗಿದ್ದು ಇನ್ನೂ 66 ಕ್ವಿಂಟಲ್ ಉಳಿದಿದೆ. 91.13 ಕೆ.ಜಿ. ಶ್ರೀಗಂಧದ ಎಣ್ಣೆಯನ್ನು ಜಪ್ತಿ ಮಾಡಲಾಗಿದ್ದು ಸೆ.1ರಂದು ಅವುಗಳ ಹರಾಜು ಪ್ರಕ್ರಿಯೆ ನಡೆಯಲಿದೆ. ಇದರಿಂದ ಅಂದಾಜು ₹ 7 ಕೋಟಿ ಆದಾಯ ಸಿಗಲಿದೆ’ ಎಂದು ಡಿಸಿಎಫ್ ವಿವೇಕ ಕವರಿ ತಿಳಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>