ಜಿತೇಂದ್ರ ಎರಡು ತಿಂಗಳ ಹಿಂದೆ ಆ ಮಹಿಳೆಗೆ ಕರೆ ಮಾಡಿ ಹಣ ನೀಡುವಂತೆ ಪೀಡಿಸಿದ್ದ. ಇದಕ್ಕೆ ಒಪ್ಪದಿದ್ದಾಗ, ‘ತನ್ನೊಂದಿಗೆ ಅನೈತಿಕ ಸಂಬಂಧವಿದೆ ಎಂದು ಪತಿ ಮತ್ತು ಸಂಬಂಧಿಕರಿಗೆ ಹೇಳಿ ಕೌಟುಂಬಿಕ ಸಂಬಂಧ ಹಾಳು ಮಾಡುವೆ. ನಿಮ್ಮ ಮಗಳ ಜೀವ ತೆಗೆಯುವೆ. ಇದನ್ನು ತಪ್ಪಿಸಲು ಹಣ ನೀಡಬೇಕು’ ಎಂದು ಬೇಡಿಕೆ ಇಟ್ಟಿದ್ದ ಎಂದು ದೂರಿನಲ್ಲಿ ತಿಳಿಸಲಾಗಿದೆ.