‘ಚುನಾವಣೆ ಬಂದಾಗ ಲಿಂಗಾಯತ ಮಠ, ಸ್ವಾಮೀಜಿಗಳು, ಸಮಾಜ ಬೇಕು. ಗೆದ್ದ ಬಳಿಕ ಯಾವ ಮಠಕ್ಕೂ ಭೇಟಿ ನೀಡಿಲ್ಲ. ಯಾವ ಸ್ವಾಮೀಜಿಯನ್ನೂ ಸನ್ಮಾನಿಸಿಲ್ಲ. 20 ವರ್ಷ ಕ್ಷೇತ್ರದಲ್ಲಿ ಏನು ಕೆಲಸ ಮಾಡಿದ್ದಾರೆ? ಎಷ್ಟು ಅನುದಾನ ತಂದಿದ್ದಾರೆ ಎಂಬುದನ್ನು ಬಹಿರಂಗಪಡಿಸಲಿ. 15 ವರ್ಷಗಳಿಂದ ಒಂದು ಮಠಕ್ಕೂ ಅನುದಾನ ಕೊಟ್ಟಿಲ್ಲ. ಅವರಿಗೆ ಮಾನ ಮರ್ಯಾದೆ ಇದೆಯೇ’ ಎಂದು ಪ್ರಶ್ನಿಸಿದರು.