‘ನನ್ನ 35 ಎಕರೆ ಜಮೀನನಲ್ಲಿ ಉದ್ದು, ಹೆಸರು, ಸೋಯಾಬಿನ್, ಕಡಲೆ ಬೆಳೆಯುತ್ತೇನೆ.ಜೀವಾಮೃತ, ಅಮೈನೊ ಆಸಿಡ್, ಝಿಬ್ರಾಲಿಕ್, ಅಗ್ನಿಹೋತ್ರಾ ಬೂದಿ, ದಶಪರ್ಣಿ (ಕೀಟನಾಶಕ), ಪಂಚಗವ್ಯಮಾತ್ರಬೆಳೆಗಳಪೋಷಣೆಗೆಬಳಸುತ್ತೇನೆ. ಮನೆಯಲ್ಲೇ ಇವುಗಳನ್ನು ತಯಾರಿ ಮಾಡಿಕೊಳ್ಳಲಾಗುತ್ತದೆ. ಇದರಿಂದ ಭೂಮಿ ಸತ್ವ ಕಳೆದುಕೊಳ್ಳುವುದಿಲ್ಲ. ಅತಿವೃಷ್ಟಿ–ಅನಾವೃಷ್ಟಿ ಏನೇ ಆದರೂ ಬೆಳೆಗಳಿಗೆ ಹಾನಿಯಾಗುವುದು ಕಡಿಮೆ’ ಎಂದು ಹೇಳಿದರು.