<p><strong>ಕುಂದಗೋಳ:</strong> ತಾಲ್ಲೂಕಿನ ಮೆಣಸಿನಕಾಯಿ ಖಾರದ ರುಚಿಗೆ ಪ್ರಸಿದ್ಧಿ. ಈಚಿನ ವರ್ಷಗಳಲ್ಲಿ ಬೆಳೆ ಕಡಿಮೆಯಾಗಿತ್ತು. ಈ ವರ್ಷ ಬೆಲೆ ಹೆಚ್ಚಳದಿಂದ ಮೆಣಸಿನಕಾಯಿ ಬೆಳೆಯನ್ನು ರೈತರು ಕಾವಲು ಕಾಯುವಂತಾಗಿದೆ.</p>.<p>ತಾಲ್ಲಾಕಿನಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಮೆಣಸಿನಕಾಯಿ ಬೆಳೆಗೆ ಅತ್ರೋಕ್ಲೋಜ್ ರೋಗ ಹಾಗೂ ಅತಿಯಾದ ಮಳೆಯಿಂದ ಭರಪೂರ ಬಂದಿದ್ದ ಬೆಳೆ ಹಾಳಾಗಿದ್ದರಿಂದ ಮೆಣಸಿನಕಾಯಿ ಬೆಳೆಯುವ ರೈತರ ಸಂಖ್ಯೆ ಕಡಿಮೆಯಾಗಿತ್ತು. ಆದರೆ ನಂತರ ಅದು ಬದಲಾಯಿತು.</p>.<p>ತಾಲ್ಲೂಕಿನಲ್ಲಿ ಈ ವರ್ಷ 1620.9 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯನ್ನು ರೈತರು ಬೆಳೆದಿದ್ದಾರೆ. ಕುಬಿಹಾಳ, ಇಂಗಳಗಿ, ಯಲಿವಾಳ, ಪಶುಪತಿಹಾಳ, ಗುಂಜಳ, ಕಳಸ, ಸುಲ್ತಾನಪೂರ ಯರೆಬೀದಿಹಾಳ ಕುಂದಗೋಳ, ದೇವನೂರ ಭಾಗಗಳಲ್ಲಿ ಹೆಚ್ಚಾಗಿ ಬೆಳೆ ಬೆಳೆದಿದ್ದಾರೆ.</p>.<p>ಈಗ ಪ್ರತಿ ಕ್ವಿಂಟಾಲ್ಗೆ ₹40 ಸಾವಿರದಿಂದ ದಿಂದ ₹65 ಸಾವಿರದವರೆಗೆ ದರ ಇದ್ದದರಿಂದ ಕಳ್ಳರು ಬೆಳೆ ಕದಿಯಬಹುದು ಎಂದು ಬೆಳೆ ರಕ್ಷಿಸಿಕೊಳ್ಳಲು ಹೊಲದಲ್ಲಿ ಗುಡಿಸಲು ಹಾಕಿ ನಿರಂತರವಾಗಿ ರೈತರು ಕಾವಲು ಮಾಡುತ್ತಿದ್ದಾರೆ.</p>.<p>ತಾಲ್ಲೂಕಿನಲ್ಲಿ ಕುಂದಗೋಳ, ಗುಡಗೇರಿ ಎರಡು ಪೊಲೀಸ್ ಠಾಣೆಗಳಿದ್ದು ಇದುವರೆಗೂ ಯಾವುದೇ ಮೆಣಸಿನಕಾಯಿ ಕಳುವಿನ ಪ್ರಕರಣ ದಾಖಲಾಗಿಲ್ಲ. ಮೊದಲೇ ಮುಂಗಾರು ಬೆಳೆ ಹಾಳಾಗಿದ್ದು ಕಷ್ಟದಲ್ಲಿರುವ ರೈತರಿಗೆ ಮೆಣಸಿನಕಾಯಿಗೆ ಉತ್ತಮ ದರ ಲಬಿಸುವ ಆಶಾಭಾವನೆಯಲ್ಲಿ ಕಾವಲು ಮಾಡುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕುಂದಗೋಳ:</strong> ತಾಲ್ಲೂಕಿನ ಮೆಣಸಿನಕಾಯಿ ಖಾರದ ರುಚಿಗೆ ಪ್ರಸಿದ್ಧಿ. ಈಚಿನ ವರ್ಷಗಳಲ್ಲಿ ಬೆಳೆ ಕಡಿಮೆಯಾಗಿತ್ತು. ಈ ವರ್ಷ ಬೆಲೆ ಹೆಚ್ಚಳದಿಂದ ಮೆಣಸಿನಕಾಯಿ ಬೆಳೆಯನ್ನು ರೈತರು ಕಾವಲು ಕಾಯುವಂತಾಗಿದೆ.</p>.<p>ತಾಲ್ಲಾಕಿನಲ್ಲಿ ಕಳೆದ ಮೂರು ವರ್ಷಗಳ ಹಿಂದೆ ಮೆಣಸಿನಕಾಯಿ ಬೆಳೆಗೆ ಅತ್ರೋಕ್ಲೋಜ್ ರೋಗ ಹಾಗೂ ಅತಿಯಾದ ಮಳೆಯಿಂದ ಭರಪೂರ ಬಂದಿದ್ದ ಬೆಳೆ ಹಾಳಾಗಿದ್ದರಿಂದ ಮೆಣಸಿನಕಾಯಿ ಬೆಳೆಯುವ ರೈತರ ಸಂಖ್ಯೆ ಕಡಿಮೆಯಾಗಿತ್ತು. ಆದರೆ ನಂತರ ಅದು ಬದಲಾಯಿತು.</p>.<p>ತಾಲ್ಲೂಕಿನಲ್ಲಿ ಈ ವರ್ಷ 1620.9 ಹೆಕ್ಟೇರ್ ಪ್ರದೇಶದಲ್ಲಿ ಮೆಣಸಿನಕಾಯಿ ಬೆಳೆಯನ್ನು ರೈತರು ಬೆಳೆದಿದ್ದಾರೆ. ಕುಬಿಹಾಳ, ಇಂಗಳಗಿ, ಯಲಿವಾಳ, ಪಶುಪತಿಹಾಳ, ಗುಂಜಳ, ಕಳಸ, ಸುಲ್ತಾನಪೂರ ಯರೆಬೀದಿಹಾಳ ಕುಂದಗೋಳ, ದೇವನೂರ ಭಾಗಗಳಲ್ಲಿ ಹೆಚ್ಚಾಗಿ ಬೆಳೆ ಬೆಳೆದಿದ್ದಾರೆ.</p>.<p>ಈಗ ಪ್ರತಿ ಕ್ವಿಂಟಾಲ್ಗೆ ₹40 ಸಾವಿರದಿಂದ ದಿಂದ ₹65 ಸಾವಿರದವರೆಗೆ ದರ ಇದ್ದದರಿಂದ ಕಳ್ಳರು ಬೆಳೆ ಕದಿಯಬಹುದು ಎಂದು ಬೆಳೆ ರಕ್ಷಿಸಿಕೊಳ್ಳಲು ಹೊಲದಲ್ಲಿ ಗುಡಿಸಲು ಹಾಕಿ ನಿರಂತರವಾಗಿ ರೈತರು ಕಾವಲು ಮಾಡುತ್ತಿದ್ದಾರೆ.</p>.<p>ತಾಲ್ಲೂಕಿನಲ್ಲಿ ಕುಂದಗೋಳ, ಗುಡಗೇರಿ ಎರಡು ಪೊಲೀಸ್ ಠಾಣೆಗಳಿದ್ದು ಇದುವರೆಗೂ ಯಾವುದೇ ಮೆಣಸಿನಕಾಯಿ ಕಳುವಿನ ಪ್ರಕರಣ ದಾಖಲಾಗಿಲ್ಲ. ಮೊದಲೇ ಮುಂಗಾರು ಬೆಳೆ ಹಾಳಾಗಿದ್ದು ಕಷ್ಟದಲ್ಲಿರುವ ರೈತರಿಗೆ ಮೆಣಸಿನಕಾಯಿಗೆ ಉತ್ತಮ ದರ ಲಬಿಸುವ ಆಶಾಭಾವನೆಯಲ್ಲಿ ಕಾವಲು ಮಾಡುತ್ತಿದ್ದಾರೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>