<p><strong>ಹುಬ್ಬಳ್ಳಿ</strong>: ಪಂಚಮಸಾಲಿ ಸಮಾಜದ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷರಾಗಿ ಯುವ ಮುಖಂಡ ರಾಜಶೇಖರ ಮೆಣಸಿಕಾಯಿ ನೇಮಕವಾದ ಹಿನ್ನೆಲೆಯಲ್ಲಿ ಭಾನುವಾರ ಅವರನ್ನು ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಸನ್ಮಾನಿಸಿದರು.</p>.<p>ರಾಜಶೇಖರ ಮೆಣಸಿನಕಾಯಿ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿ ‘ರಾಜಶೇಖರ ನೇರ ನಡೆ ನುಡಿ ಹಾಗೂ ಪ್ರಾಮಾಣಿಕತೆಗೆ ಹೆಸರಾದವರು. ಅವರು ಒಂದು ಸಮಾಜದ ನೇತೃತ್ವ ವಹಿಸುವ ಜೊತೆಗೆ ಸರ್ವಧರ್ಮಗಳನ್ನು ಸಮನ್ವಯತೆಯಿಂದ ಕಾಪಾಡಿಕೊಂಡು ಹೋಗುತ್ತಾರೆ’ ಎಂದರು.</p>.<p>‘ಕಳೆದ 13 ವರ್ಷಗಳಿಂದ ಸಮಾಜದ ಸಂಘಟನೆ ಮಾಡಲು ಮೆಣಸಿನಕಾಯಿ ಸಾಕಷ್ಟು ಶ್ರಮಿಸಿದ್ದಾರೆ. ಇವರ ಮುಂದಾಳತ್ವದಲ್ಲಿ ಸಂಘಟನೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ’ ಎಂದು ಆಶಿಸಿದರು.</p>.<p>ಲಿಂಗಾಯತ ಸಮಾಜದ ಮುಖಂಡರಾದ ಶರಣಪ್ಪ ಕೊಟಗಿ, ಶಂಕರಣ್ಣ ನೇಗಿನಹಾಳ, ಸುರೇಶ ಸವಣೂರು, ಎಂ.ಪಿ. ಶಿವಕುಮಾರ್, ಪ್ರಶಾಂತ್ ಹಾವಣಗಿ, ಕಾಳು ಸಿಂಗ್ ಚವ್ಹಾಣ, ಗಿರೀಶ ಸುಂಕದ, ಸೂರ್ಯಕಾಂತ ಘೋಡಕೆ, ವೀರಣ್ಣ ನಿರಲಗಿ, ಗುರು ಕುಂದನಹಳ್ಳಿ , ರವಿ ಹೊಸೂರು, ಮಲ್ಲಿಕಾರ್ಜುನ ಹಿರೇಗೌಡರ, ಸಿ.ಎನ್.ಹಿರೇಮಠ, ಪ್ರಕಾಶ ಶೆಟ್ಟಿ, ಅಪ್ಪಣ್ಣ ಕಮ್ಮಾರ, ನಂದಕುಮಾರ ಪಾಟೀಲ, ಕುಮಾರ ಕುಂದನಹಳ್ಳಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ</strong>: ಪಂಚಮಸಾಲಿ ಸಮಾಜದ ರಾಷ್ಟ್ರೀಯ ಯುವ ಘಟಕದ ಅಧ್ಯಕ್ಷರಾಗಿ ಯುವ ಮುಖಂಡ ರಾಜಶೇಖರ ಮೆಣಸಿಕಾಯಿ ನೇಮಕವಾದ ಹಿನ್ನೆಲೆಯಲ್ಲಿ ಭಾನುವಾರ ಅವರನ್ನು ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗಿಂದ್ರ ಸ್ವಾಮೀಜಿ ಸನ್ಮಾನಿಸಿದರು.</p>.<p>ರಾಜಶೇಖರ ಮೆಣಸಿನಕಾಯಿ ಗೆಳೆಯರ ಬಳಗ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸ್ವಾಮೀಜಿ ‘ರಾಜಶೇಖರ ನೇರ ನಡೆ ನುಡಿ ಹಾಗೂ ಪ್ರಾಮಾಣಿಕತೆಗೆ ಹೆಸರಾದವರು. ಅವರು ಒಂದು ಸಮಾಜದ ನೇತೃತ್ವ ವಹಿಸುವ ಜೊತೆಗೆ ಸರ್ವಧರ್ಮಗಳನ್ನು ಸಮನ್ವಯತೆಯಿಂದ ಕಾಪಾಡಿಕೊಂಡು ಹೋಗುತ್ತಾರೆ’ ಎಂದರು.</p>.<p>‘ಕಳೆದ 13 ವರ್ಷಗಳಿಂದ ಸಮಾಜದ ಸಂಘಟನೆ ಮಾಡಲು ಮೆಣಸಿನಕಾಯಿ ಸಾಕಷ್ಟು ಶ್ರಮಿಸಿದ್ದಾರೆ. ಇವರ ಮುಂದಾಳತ್ವದಲ್ಲಿ ಸಂಘಟನೆ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ’ ಎಂದು ಆಶಿಸಿದರು.</p>.<p>ಲಿಂಗಾಯತ ಸಮಾಜದ ಮುಖಂಡರಾದ ಶರಣಪ್ಪ ಕೊಟಗಿ, ಶಂಕರಣ್ಣ ನೇಗಿನಹಾಳ, ಸುರೇಶ ಸವಣೂರು, ಎಂ.ಪಿ. ಶಿವಕುಮಾರ್, ಪ್ರಶಾಂತ್ ಹಾವಣಗಿ, ಕಾಳು ಸಿಂಗ್ ಚವ್ಹಾಣ, ಗಿರೀಶ ಸುಂಕದ, ಸೂರ್ಯಕಾಂತ ಘೋಡಕೆ, ವೀರಣ್ಣ ನಿರಲಗಿ, ಗುರು ಕುಂದನಹಳ್ಳಿ , ರವಿ ಹೊಸೂರು, ಮಲ್ಲಿಕಾರ್ಜುನ ಹಿರೇಗೌಡರ, ಸಿ.ಎನ್.ಹಿರೇಮಠ, ಪ್ರಕಾಶ ಶೆಟ್ಟಿ, ಅಪ್ಪಣ್ಣ ಕಮ್ಮಾರ, ನಂದಕುಮಾರ ಪಾಟೀಲ, ಕುಮಾರ ಕುಂದನಹಳ್ಳಿ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>