‘ರಾಷ್ಟ್ರಪ್ರೇಮ ಇರುವ ಪ್ರತಿಯೊಬ್ಬರೂ ಮನೆಯಲ್ಲಿ ತ್ರಿವರ್ಣ ಧ್ವಜ ಹಾರಿಸುತ್ತಾರೆ. ಆದರೆ, ಬೀಟ್ ವ್ಯಾಪ್ತಿಯಲ್ಲಿ ಧ್ವಜಾರೋಹಣ ನಡೆಸಬೇಕೆಂದು ಸೂಚನೆ ನೀಡುವ ಅಗತ್ಯವೇನಿದೆ? ಯಾವೆಲ್ಲ ಪೂರ್ವ ಸಿದ್ಧತೆ ಮಾಡಲಾಗುತ್ತಿದೆ ಎನ್ನುವ ಮಾಹಿತಿಯನ್ನು ಪ್ರತಿದಿನವೂ ಎಎಸ್ಐ, ಪಿಎಸ್ಐ ಅವರಿಗೆ ತಲುಪಿಸಬೇಕು. ರಾಷ್ಟ್ರಧ್ವಜ, ಕಂಬ, ಅದರ ಗುಂಡಿ ತೆಗೆಯಲು ಹಾಗೂ ಧ್ವಜಾರೋಹಣಕ್ಕೆ ಬಂದವರಿಗೆ ಸಿಹಿ ವಿತರಿಸಲು ಕನಿಷ್ಠ ₹2 ಸಾವಿರವಾದರೂ ವೆಚ್ಚವಾಗುತ್ತದೆ. ಅದನ್ನು ಬೀಟ್ ಪೊಲೀಸರೇ ಭರಿಸಬೇಕು. ಸಿಬ್ಬಂದಿಗೆ ಒತ್ತಡ ಹೇರುತ್ತ ಕಿರಿಕಿರಿ ನೀಡಲಾಗುತ್ತಿದೆ’ ಎಂದು ಹೆಸರು ಹೇಳಲಿಚ್ಛಿಸದ ಸಿಬ್ಬಂದಿಯೊಬ್ಬರು ತಿಳಿಸಿದರು.