<p><strong>ಹುಬ್ಬಳ್ಳಿ: </strong>ಕುಸುಗಲ್ ರಸ್ತೆಯಲ್ಲಿರುವಸ್ಪೋರ್ಟ್ಸ್ ಪಾರ್ಕ್ನಲ್ಲಿ ಫೆ. 26ರಂದು ನಗರದ ಟ್ವಿನ್ ಸಿಟಿ ಸ್ಪೋರ್ಟ್ಸ್ ಸಂಸ್ಥೆ ವತಿಯಿಂದ ಬಾಕ್ಸ್ ಕ್ರಿಕೆಟ್ ಸರಣಿ ಆಯೋಜಿಸಲಾಗಿದೆ.</p>.<p>ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆ ಅಧ್ಯಕ್ಷ ಇಮ್ರಾನ್ ಖಾನ್ ‘ಸೌಹಾರ್ದತೆಗಾಗಿ ಕ್ರಿಕೆಟ್ ಆಯೋಜಿಸಲಾಗಿದೆ. ಸರಣಿಯಲ್ಲಿ ಅವಳಿ ನಗರದ 24 ತಂಡಗಳು ಪೈಪೋಟಿ ನಡೆಸಲಿದ್ದು, ಲೋ ಟೆನಿಸ್ ಚೆಂಡಿನಲ್ಲಿ ಪಂದ್ಯಗಳು ಜರುಗಲಿವೆ. ಪ್ರತಿ ಪಂದ್ಯ ತಲಾ ಆರು ಓವರ್ ಒಳಗೊಂಡಿರುತ್ತದೆ. ಸರಣಿ ಚಾಂಪಿಯನ್ನರಿಗೆ ₹50 ಸಾವಿರ ಮತ್ತು ರನ್ನರ್ಸ್ ಅಪ್ ಸ್ಥಾನ ಪಡೆದ ತಂಡಕ್ಕೆ ₹20 ಸಾವಿರ ಬಹುಮಾನ ಹಾಗೂ ಟ್ರೋಫಿ ನಿಗದಿ ಮಾಡಲಾಗಿದೆ’ ಎಂದು ತಿಳಿಸಿದರು. ಸರಣಿ ಶ್ರೇಷ್ಠ ಗೌರವ ₹10 ಸಾವಿರ ನಗದು ಒಳಗೊಂಡಿದೆ.</p>.<p>ಬೆಳಿಗ್ಗೆ 8 ಗಂಟೆಗೆ ಸಕ್ಕರೆ ಖಾತೆ ಸಚಿವ ಶಂಕರಪಾಟೀಲ ಮುನೇನಕೊಪ್ಪ ಹಾಗೂ ಮಹಾವೀರ ಲಿಂಬ್ ಕೇಂದ್ರದ ಮುಖ್ಯಸ್ಥ ಮಹೇಂದ್ರ ಸಿಂಘಿ ಸರಣಿಗೆ ಚಾಲನೆ ನೀಡುವರು.</p>.<p>ಸಂಸ್ಥೆ ಪದಾಧಿಕಾರಿಗಳಾದ ಉಜ್ವಲ್ ಸಿಂಘಿ, ಅವಂತ್ ಮಹಾಜನ್, ಕಿರಣ ಮೆಣಸಗಿ, ಚೇತನ ಹಬೀಬ್ ಹಾಗೂ ಅಮಿತ್ ಮಹಾಜನ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>ಕುಸುಗಲ್ ರಸ್ತೆಯಲ್ಲಿರುವಸ್ಪೋರ್ಟ್ಸ್ ಪಾರ್ಕ್ನಲ್ಲಿ ಫೆ. 26ರಂದು ನಗರದ ಟ್ವಿನ್ ಸಿಟಿ ಸ್ಪೋರ್ಟ್ಸ್ ಸಂಸ್ಥೆ ವತಿಯಿಂದ ಬಾಕ್ಸ್ ಕ್ರಿಕೆಟ್ ಸರಣಿ ಆಯೋಜಿಸಲಾಗಿದೆ.</p>.<p>ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಸ್ಥೆ ಅಧ್ಯಕ್ಷ ಇಮ್ರಾನ್ ಖಾನ್ ‘ಸೌಹಾರ್ದತೆಗಾಗಿ ಕ್ರಿಕೆಟ್ ಆಯೋಜಿಸಲಾಗಿದೆ. ಸರಣಿಯಲ್ಲಿ ಅವಳಿ ನಗರದ 24 ತಂಡಗಳು ಪೈಪೋಟಿ ನಡೆಸಲಿದ್ದು, ಲೋ ಟೆನಿಸ್ ಚೆಂಡಿನಲ್ಲಿ ಪಂದ್ಯಗಳು ಜರುಗಲಿವೆ. ಪ್ರತಿ ಪಂದ್ಯ ತಲಾ ಆರು ಓವರ್ ಒಳಗೊಂಡಿರುತ್ತದೆ. ಸರಣಿ ಚಾಂಪಿಯನ್ನರಿಗೆ ₹50 ಸಾವಿರ ಮತ್ತು ರನ್ನರ್ಸ್ ಅಪ್ ಸ್ಥಾನ ಪಡೆದ ತಂಡಕ್ಕೆ ₹20 ಸಾವಿರ ಬಹುಮಾನ ಹಾಗೂ ಟ್ರೋಫಿ ನಿಗದಿ ಮಾಡಲಾಗಿದೆ’ ಎಂದು ತಿಳಿಸಿದರು. ಸರಣಿ ಶ್ರೇಷ್ಠ ಗೌರವ ₹10 ಸಾವಿರ ನಗದು ಒಳಗೊಂಡಿದೆ.</p>.<p>ಬೆಳಿಗ್ಗೆ 8 ಗಂಟೆಗೆ ಸಕ್ಕರೆ ಖಾತೆ ಸಚಿವ ಶಂಕರಪಾಟೀಲ ಮುನೇನಕೊಪ್ಪ ಹಾಗೂ ಮಹಾವೀರ ಲಿಂಬ್ ಕೇಂದ್ರದ ಮುಖ್ಯಸ್ಥ ಮಹೇಂದ್ರ ಸಿಂಘಿ ಸರಣಿಗೆ ಚಾಲನೆ ನೀಡುವರು.</p>.<p>ಸಂಸ್ಥೆ ಪದಾಧಿಕಾರಿಗಳಾದ ಉಜ್ವಲ್ ಸಿಂಘಿ, ಅವಂತ್ ಮಹಾಜನ್, ಕಿರಣ ಮೆಣಸಗಿ, ಚೇತನ ಹಬೀಬ್ ಹಾಗೂ ಅಮಿತ್ ಮಹಾಜನ್ ಪಾಲ್ಗೊಂಡಿದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>