‘ಕೋವಿಡ್ 19ನಿಂದ ಆರ್ಥಿಕ ರಂಗಕ್ಕೆ ಚೇತರಿಕೆ ನೀಡಲು ಘೋಷಿಸಿದ ₹20 ಲಕ್ಷ ಕೋಟಿ ನೆರವಿನಿಂದ ದೇಶದ ಜಿಡಿಪಿ ಶೇ 10ಕ್ಕೆ ಹೆಚ್ಚಳವಾಗುತ್ತದೆ ಎಂದು ಮೋದಿ ಹೇಳಿದ್ದು, ಈಗ ಶೇ 0.83ರಷ್ಟು ಮಾತ್ರ ಇದೆ. ಉದ್ಯೋಗ ಸೃಷ್ಟಿ, ಕಪ್ಪುಹಣ ವಾಪಸ್ ಎಲ್ಲವೂ ಕೇವಲ ಮಾತಿಗಷ್ಟೇ ಸೀಮಿತವಾಗಿವೆ. ರೈತರು, ಕಾರ್ಮಿಕರು, ನಿರುದ್ಯೋಗಿ ಯುವಜನತೆ ಮತ್ತು ವಲಸೆ ಕಾರ್ಮಿಕರ ಸಮಸ್ಯೆಗೆ ಸ್ಪಂದಿಸದೇ ಇರುವುದೇ ಈ ಸರ್ಕಾರದ ಸಾಧನೆ’ ಎಂದು ಟೀಕಿಸಿದರು.