ಉದ್ಘಾಟನಾ ಕಾರ್ಯಕ್ರಮದಲ್ಲಿ ಬಿ. ಬಸಣ್ಣ, ಕೆ.ಎಸ್. ಚೌಟಾ, ಬ್ಯಾಡ್ಮಿಂಟನ್ ಆಟಗಾರರಾದ ವಿನಯ ಜವಳಿ, ಶ್ರೀನಿವಾಸ ದೇಸಾಯಿ ಮತ್ತು ವಿಶ್ವನಾಥ ಉಪ್ಪಿನ ಅವರನ್ನು ಸನ್ಮಾನಿಸಲಾಯಿತು. ಬಳಿಕ ಮಾತನಾಡಿದ ಪ್ರದೀಪ ಶೆಟ್ಟರ್ ’ಹಿರಿಯರ ಮಾರ್ಗದರ್ಶನದಿಂದ ಆಗಾಗ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿದೆ. ಎಲ್ಲರೂ ಒಂದೆಡೆ ಸೇರಿ ಆಡುವುದರಿಂದ ಪರಸ್ಪರ ಸಂಬಂಧ ಕೂಡ ವೃದ್ಧಿಯಾಗುತ್ತದೆ‘ ಎಂದರು.