<p>ಅಳ್ನಾವರ: ಪರಿಸರ ಸಂರಕ್ಷಣೆ ನಮ್ಮೆಲ್ಲರ ಗುರುತರ ಜವಾಬ್ದಾರಿ. ಶಾಲಾ ಹಂತದಲ್ಲಿಯೇ ಪರಿಸರ ಉಳಿಯುವಿಕೆ ಹಾಗೂ ಮಹತ್ವ ಕುರಿತು ಅರಿತುಕೊಳ್ಳಬೇಕು. ಪ್ರತಿಯೊಬ್ಬರು<br /> ಒಂದೂಂದು ಸಸಿ ನೆಟ್ಟು ಪಾಲನೆ, ಪೋಷಣೆ ಮಾಡಬೇಕು ಎಂದು ವಲಯ ಅರಣ್ಯಾಧಿಕಾರಿ ಪ್ರಸನ್ನ ಸುಬೇದಾರ ಹೇಳಿದರು.</p>.<p>ಇಲ್ಲಿನ ಸೇಂಟ್ ತೆರೇಸಾ ಹಿರಿಯ ಪ್ರಾಥಮಿಕ ಶಾಲೆಯ ಅರಣ್ಯ ಇಲಾಖೆ ಸಹಯೋಗದಲ್ಲಿ ಗ್ರಾಮದೇವಿ ಪಾದಗಟ್ಟೆ ಆವರಣದಲ್ಲಿ ಬುಧವಾರ ಹಮ್ಮಿಕೊಂಡ ವಿಶ್ವ ಪರಿಸರ<br /> ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>ದಿನದಿಂದ ದಿನಕ್ಕೆ ಭೂಮಿಯ ತಾಪಮಾನ ಹೆಚ್ಚಳದಿಂದ ಆನೇಕ ಅವಘಡಗಳು ನಡೆಯುತ್ತಿವೆ. ಪರಿಸರ ಉಳಿದರೆ ಮಾತ್ರ ಮಾನವ ಕುಲ ಬದುಕಲು ಸಾಧ್ಯ ಎಂದರು.</p>.<p>ಅಂತರ ಜಲ ಕುಸಿತ, ಅತಿವೃಷ್ಟಿ, ಅನಾವೃಷ್ಟಿಯಂತಹ ಅನಾಹುತಗಳು ಮಾನವನ ಬದುಕನ್ನು ದುಸ್ತರ ಮಾಡಿವೆ. ಈ ಭಾಗದಿಂದ ಪಶ್ಚಿಮ ಘಟ್ಟ ಆರಂಭವಾಗುತ್ತದೆ. ಇಲ್ಲಯೇ 42 ಡಿಗ್ರಿ ಉಷ್ಠಾಂಶ ವರದಿಯಾಗುತ್ತಿದೆ. ದೆಹಲಿಯಲ್ಲಿ 52 ಡಿಗ್ರಿ ತಲುಪಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಈ ಕುರಿತು ಮುನ್ನೆಚ್ಚರಿಕೆ ವಹಿಸಬೇಕು. ಪರಿಸರ ಸಮತೋಲನ ಕಾಪಾಡಲು ಮುಂದಾಗಬೇಕು ಎಂದರು.</p>.<p>ಹಸಿರು ಮಣಿ ಪರಿಣಾಮ ಭೂಮಿಯ ಒಡಲು ಸುಡುತ್ತಿದೆ. ಕೃಷಿ ಭೂಮಿಯಲ್ಲಿ ಹೆಚ್ಚು ಗಿಡ ಬೆಳೆಸಬೇಕು. ಅಗ್ರೋ ಫಾರೆಸ್ಟ್ ಯೋಜನೆಯಡಿ ಸಸಿ ದೊರೆಯುತ್ತವೆ. ಅದನ್ನು <br /> ಪಡೆದುಕೊಂಡು ಹೊಲದ ಬದುವಿನ ಮೇಲೆ ನೆಡಬೇಕು. ಬಾಲ್ಯದಲ್ಲಿಯೇ ಪರಿಸರ ಮಹತ್ವ ಅರಿತುಕೊಳ್ಳಬೇಕು ಎಂದರು.</p>.<p>ಮುಖ್ಯ ಶಿಕ್ಷಕಿ ಸಿಸ್ಟರ್ಜೀನಾ ಪಾಯ್ಸ್ ಮಾತನಾಡಿ, ಉತ್ತಮ ಆರೋಗ್ಯ, ಗಾಳಿ, ಶುದ್ಧ ಹವೆ ಬೇಕಾದಲ್ಲಿ ಹಸಿರು ವಾತಾವರಣ ಸೃಷ್ಟಿಸಬೇಕು. ಹಸಿರು ಪರಿಸರ ಮನಸ್ಸಿಗೆ ಮುದ ನೀಡುವುದರ ಜೊತೆಗೆ ಪ್ರಕೃತಿ ಸೊಬಗನ್ನು ಇಮ್ಮಡಿಕೊಳಿಸುತ್ತದೆ. ಎಲ್ಲರೂ ಸಸಿ ನೆಡಬೇಕು ಎಂದರು.</p>.<p>ಅರಣ್ಯಾಧಿಕಾರಿ ಪ್ರಕಾಶ ಕಮ್ಮಾರ, ಹಿರಿಯರಾದ ಸತ್ತಾರ ಬಾತಖಂಡಿ, ನಾರಾಯಣ ಪಟೇಲ್, ಕಿರಣ ಗಡಕರ, ಸತೀಶ ನಾಯಕ, ಮುಕ್ತಾ ಕಾತರಕಿ, ಪುಂಡಲಿಕ ಪಾರ್ದಿ, ಮಂಜುಳಾ ನಾಯ್ಕ , <br /> ರಮೇಶ ಪಟ್ಟೇಕರ ಇದ್ದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p>ಅಳ್ನಾವರ: ಪರಿಸರ ಸಂರಕ್ಷಣೆ ನಮ್ಮೆಲ್ಲರ ಗುರುತರ ಜವಾಬ್ದಾರಿ. ಶಾಲಾ ಹಂತದಲ್ಲಿಯೇ ಪರಿಸರ ಉಳಿಯುವಿಕೆ ಹಾಗೂ ಮಹತ್ವ ಕುರಿತು ಅರಿತುಕೊಳ್ಳಬೇಕು. ಪ್ರತಿಯೊಬ್ಬರು<br /> ಒಂದೂಂದು ಸಸಿ ನೆಟ್ಟು ಪಾಲನೆ, ಪೋಷಣೆ ಮಾಡಬೇಕು ಎಂದು ವಲಯ ಅರಣ್ಯಾಧಿಕಾರಿ ಪ್ರಸನ್ನ ಸುಬೇದಾರ ಹೇಳಿದರು.</p>.<p>ಇಲ್ಲಿನ ಸೇಂಟ್ ತೆರೇಸಾ ಹಿರಿಯ ಪ್ರಾಥಮಿಕ ಶಾಲೆಯ ಅರಣ್ಯ ಇಲಾಖೆ ಸಹಯೋಗದಲ್ಲಿ ಗ್ರಾಮದೇವಿ ಪಾದಗಟ್ಟೆ ಆವರಣದಲ್ಲಿ ಬುಧವಾರ ಹಮ್ಮಿಕೊಂಡ ವಿಶ್ವ ಪರಿಸರ<br /> ದಿನಾಚರಣೆ ಕಾರ್ಯಕ್ರಮದಲ್ಲಿ ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.</p>.<p>ದಿನದಿಂದ ದಿನಕ್ಕೆ ಭೂಮಿಯ ತಾಪಮಾನ ಹೆಚ್ಚಳದಿಂದ ಆನೇಕ ಅವಘಡಗಳು ನಡೆಯುತ್ತಿವೆ. ಪರಿಸರ ಉಳಿದರೆ ಮಾತ್ರ ಮಾನವ ಕುಲ ಬದುಕಲು ಸಾಧ್ಯ ಎಂದರು.</p>.<p>ಅಂತರ ಜಲ ಕುಸಿತ, ಅತಿವೃಷ್ಟಿ, ಅನಾವೃಷ್ಟಿಯಂತಹ ಅನಾಹುತಗಳು ಮಾನವನ ಬದುಕನ್ನು ದುಸ್ತರ ಮಾಡಿವೆ. ಈ ಭಾಗದಿಂದ ಪಶ್ಚಿಮ ಘಟ್ಟ ಆರಂಭವಾಗುತ್ತದೆ. ಇಲ್ಲಯೇ 42 ಡಿಗ್ರಿ ಉಷ್ಠಾಂಶ ವರದಿಯಾಗುತ್ತಿದೆ. ದೆಹಲಿಯಲ್ಲಿ 52 ಡಿಗ್ರಿ ತಲುಪಿದೆ. ಇದು ಅತ್ಯಂತ ಅಪಾಯಕಾರಿ ಬೆಳವಣಿಗೆ. ಈ ಕುರಿತು ಮುನ್ನೆಚ್ಚರಿಕೆ ವಹಿಸಬೇಕು. ಪರಿಸರ ಸಮತೋಲನ ಕಾಪಾಡಲು ಮುಂದಾಗಬೇಕು ಎಂದರು.</p>.<p>ಹಸಿರು ಮಣಿ ಪರಿಣಾಮ ಭೂಮಿಯ ಒಡಲು ಸುಡುತ್ತಿದೆ. ಕೃಷಿ ಭೂಮಿಯಲ್ಲಿ ಹೆಚ್ಚು ಗಿಡ ಬೆಳೆಸಬೇಕು. ಅಗ್ರೋ ಫಾರೆಸ್ಟ್ ಯೋಜನೆಯಡಿ ಸಸಿ ದೊರೆಯುತ್ತವೆ. ಅದನ್ನು <br /> ಪಡೆದುಕೊಂಡು ಹೊಲದ ಬದುವಿನ ಮೇಲೆ ನೆಡಬೇಕು. ಬಾಲ್ಯದಲ್ಲಿಯೇ ಪರಿಸರ ಮಹತ್ವ ಅರಿತುಕೊಳ್ಳಬೇಕು ಎಂದರು.</p>.<p>ಮುಖ್ಯ ಶಿಕ್ಷಕಿ ಸಿಸ್ಟರ್ಜೀನಾ ಪಾಯ್ಸ್ ಮಾತನಾಡಿ, ಉತ್ತಮ ಆರೋಗ್ಯ, ಗಾಳಿ, ಶುದ್ಧ ಹವೆ ಬೇಕಾದಲ್ಲಿ ಹಸಿರು ವಾತಾವರಣ ಸೃಷ್ಟಿಸಬೇಕು. ಹಸಿರು ಪರಿಸರ ಮನಸ್ಸಿಗೆ ಮುದ ನೀಡುವುದರ ಜೊತೆಗೆ ಪ್ರಕೃತಿ ಸೊಬಗನ್ನು ಇಮ್ಮಡಿಕೊಳಿಸುತ್ತದೆ. ಎಲ್ಲರೂ ಸಸಿ ನೆಡಬೇಕು ಎಂದರು.</p>.<p>ಅರಣ್ಯಾಧಿಕಾರಿ ಪ್ರಕಾಶ ಕಮ್ಮಾರ, ಹಿರಿಯರಾದ ಸತ್ತಾರ ಬಾತಖಂಡಿ, ನಾರಾಯಣ ಪಟೇಲ್, ಕಿರಣ ಗಡಕರ, ಸತೀಶ ನಾಯಕ, ಮುಕ್ತಾ ಕಾತರಕಿ, ಪುಂಡಲಿಕ ಪಾರ್ದಿ, ಮಂಜುಳಾ ನಾಯ್ಕ , <br /> ರಮೇಶ ಪಟ್ಟೇಕರ ಇದ್ದರು</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>