‘ಮುನ್ಸಿಪಲ್ ಕಾಯ್ದೆಯಡಿ ಎಲ್ಲ ಬೀದಿಬದಿ ವ್ಯಾಪಾರಿಗಳ ಸಮೀಕ್ಷೆ ನಂತರ ಅವರಿಗೆ ಪ್ರಮಾಣ ಪತ್ರ ನೀಡಿ, ಮಾರಾಟ ವಲಯಗಳನ್ನು ರಚಿಸಿ, ಸ್ಥಳ ನೀಡಬೇಕು. ಈವರೆಗೆ ವೆಂಡಿಂಗ್ ಝೋನ್ ಮಾಡಲು ಕ್ರಮಕೈಗೊಂಡಿಲ್ಲ. ರಸ್ತೆಯಲ್ಲೇ ಗೂಡಂಗಡಿ ಹಾಕಿಕೊಂಡಿದ್ದೇವೆ. ರಸ್ತೆ ಅತಿಕ್ರಮಣ ಎಂದು ಹೇಳಿ ಅಧಿಕಾರಿಗಳು ಅಂಗಡಿ ತೆರವು ಮಾಡಿಸಿದ್ಧಾರೆ. ಹುಬ್ಬಳ್ಳಿಯ ಷಾ ಬಜಾರ್ ಸೇರಿದಂತೆ ವಿವಿಧೆಡೆ ಪಾರ್ಕಿಂಗ್ ಫಲಕ ಅಳವಡಿಸಿ, ವ್ಯಾಪಾರಿಗಳಿಗೆ ಕಿರುಕುಳ ನೀಡುತ್ತಿದ್ದಾರೆ’ ಎಂದು ಆಕ್ರೋಶ ವ್ಯಕ್ತಪಡಿಸಿದರು.