<p><strong>ಹುಬ್ಬಳ್ಳಿ</strong>: ‘ಹಿಂದೂ ಧರ್ಮದಲ್ಲಿ ಮುಕ್ತ ಅಭಿಪ್ರಾಯಕ್ಕೆ ಪ್ರಾಧಾನ್ಯ ಇದೆ. ಬೇರೆ ಯಾವ ಧರ್ಮದಲ್ಲೂ ಇಷ್ಟೊಂದು ಸ್ವಾತಂತ್ರ್ಯವಿಲ್ಲ’ ಎಂದು ಲೇಖಕ ಎನ್. ಜಗದೀಶ ಕೊಪ್ಪ ಅಭಿಪ್ರಾಯಪಟ್ಟರು.</p>.<p>ಇಲ್ಲಿಯ ಕೊಯಿನ್ ರಸ್ತೆಯ ಲಕ್ಷ್ಮೀ ಮಾಲ್ನಲ್ಲಿರುವ ಸಪ್ನ ಬುಕ್ ಹೌಸ್ನಲ್ಲಿ ತಮ್ಮ ರಚನೆಯ ‘ದಂಗೆಯ ದಿನಗಳು’ ಕೃತಿ ಕುರಿತ ಸಂವಾದದಲ್ಲಿ ಸೋಮವಾರ ಅವರು ಪಾಲ್ಗೊಂಡರು.</p>.<p>‘ಹಿಂದೂ ಧರ್ಮದಲ್ಲಿ ಮುಕ್ತ ಸ್ವಾತಂತ್ರ್ಯವಿದೆ. ನಕಾರಾತ್ಮಕ ವಿಶ್ಲೇಷಣೆಗಿಂತ ಸಕಾರಾತ್ಮಕ ಚಿಂತನೆಗೆ ಪಾಧಾನ್ಯ ನೀಡುವ ಅಗತ್ಯವಿದೆ’ ಎಂದು ಹೇಳಿದರು.</p>.<p>‘ಪ್ರತಿ ಗ್ರಾಮ, ಜಿಲ್ಲೆಯಲ್ಲಿಯೂ ಪ್ರತಿರೋಧ ಮನೋಭಾವ ಇರುತ್ತದೆ. ಅಲ್ಲಿಯ ಸಾಮಾಜಿಕ ಅಸಮತೋಲನ, ಪದ್ಧತಿ ವಿರುದ್ಧ ಧ್ವನಿ ಎತ್ತಲಾಗುತ್ತದೆ. ಈ ರೀತಿಯ ಒಟ್ಟುಗೂಡಿದ ವಿಷಯವೇ ‘ದಂಗೆಯ ದಿನಗಳು’ ಎಂದು ತಿಳಿಸಿದರು.</p>.<p>‘ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಕರ್ನಾಟಕ, ಮಹಾರಾಷ್ಟ್ರ ಸೇರಿ ಇತರ ರಾಜ್ಯಗಳಲ್ಲಿ ಇಂಥ ದಂಗೆಗಳು ನಡೆದಿವೆ. ಭಕ್ತಿ ಪಂಥ, ಚಾರ್ವಾಕ ದರ್ಶನ ಹೀಗೆ ಹತ್ತು ಹಲವು ವಿಷಯಗಳು ಲೇಖನಗಳಾಗಿ ಪರಿವರ್ತನೆಗೊಂಡಿವೆ. ಪ್ರತಿಯೊಂದನ್ನೂ ದಾಖಲೆಯಾಗಿ ಇಟ್ಟುಕೊಂಡು ಸಂಶೋಧನಾತ್ಮಕ ರೀತಿಯಲ್ಲಿ ಅಕ್ಷರ ರೂಪಕ್ಕೆ ಇಳಿಸಲಾಗಿದೆ’ ಎಂದರು.</p>.<p>ಸಪ್ನ ಬುಕ್ ಹೌಸ್ ಹುಬ್ಬಳ್ಳಿ ಶಾಖೆ ಮುಖ್ಯಸ್ಥ ಎಂ.ವಿ. ರಘು ಮಾತನಾಡಿ, ‘ಈ ಕೃತಿಯು ಸಂಶೋಧನಾತ್ಮಕವಾಗಿ ಹೊರ ಬಂದಿದೆ. ಪಠ್ಯವಾಗಿಯೂ ವಿದ್ಯಾರ್ಥಿಗಳು ಅಭ್ಯಾಸ ಮಾಡುವಂತಾಗಬೇಕು’ ಎಂದು ಅಭಿಪ್ರಾಯಪಟ್ಟರು.</p>.<p>ಓದುಗರಾದ ವೆಂಕಟೇಶ ಮಾಚಕನೂರ, ಲಕ್ಷ್ಮೀಕಾಂತ ಇಟ್ನಾಳ, ಶಿಲ್ಪಾ ಶೆಟ್ಟರ್, ಕೋಡಿ ಗೌಡ್ರ ಅಭಿಪ್ರಾಯ ಹಂಚಿಕೊಂಡರು. ಮೇಘನಾ ರಘು ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ</strong>: ‘ಹಿಂದೂ ಧರ್ಮದಲ್ಲಿ ಮುಕ್ತ ಅಭಿಪ್ರಾಯಕ್ಕೆ ಪ್ರಾಧಾನ್ಯ ಇದೆ. ಬೇರೆ ಯಾವ ಧರ್ಮದಲ್ಲೂ ಇಷ್ಟೊಂದು ಸ್ವಾತಂತ್ರ್ಯವಿಲ್ಲ’ ಎಂದು ಲೇಖಕ ಎನ್. ಜಗದೀಶ ಕೊಪ್ಪ ಅಭಿಪ್ರಾಯಪಟ್ಟರು.</p>.<p>ಇಲ್ಲಿಯ ಕೊಯಿನ್ ರಸ್ತೆಯ ಲಕ್ಷ್ಮೀ ಮಾಲ್ನಲ್ಲಿರುವ ಸಪ್ನ ಬುಕ್ ಹೌಸ್ನಲ್ಲಿ ತಮ್ಮ ರಚನೆಯ ‘ದಂಗೆಯ ದಿನಗಳು’ ಕೃತಿ ಕುರಿತ ಸಂವಾದದಲ್ಲಿ ಸೋಮವಾರ ಅವರು ಪಾಲ್ಗೊಂಡರು.</p>.<p>‘ಹಿಂದೂ ಧರ್ಮದಲ್ಲಿ ಮುಕ್ತ ಸ್ವಾತಂತ್ರ್ಯವಿದೆ. ನಕಾರಾತ್ಮಕ ವಿಶ್ಲೇಷಣೆಗಿಂತ ಸಕಾರಾತ್ಮಕ ಚಿಂತನೆಗೆ ಪಾಧಾನ್ಯ ನೀಡುವ ಅಗತ್ಯವಿದೆ’ ಎಂದು ಹೇಳಿದರು.</p>.<p>‘ಪ್ರತಿ ಗ್ರಾಮ, ಜಿಲ್ಲೆಯಲ್ಲಿಯೂ ಪ್ರತಿರೋಧ ಮನೋಭಾವ ಇರುತ್ತದೆ. ಅಲ್ಲಿಯ ಸಾಮಾಜಿಕ ಅಸಮತೋಲನ, ಪದ್ಧತಿ ವಿರುದ್ಧ ಧ್ವನಿ ಎತ್ತಲಾಗುತ್ತದೆ. ಈ ರೀತಿಯ ಒಟ್ಟುಗೂಡಿದ ವಿಷಯವೇ ‘ದಂಗೆಯ ದಿನಗಳು’ ಎಂದು ತಿಳಿಸಿದರು.</p>.<p>‘ಆಂಧ್ರಪ್ರದೇಶ, ಪಶ್ಚಿಮ ಬಂಗಾಳ, ಕರ್ನಾಟಕ, ಮಹಾರಾಷ್ಟ್ರ ಸೇರಿ ಇತರ ರಾಜ್ಯಗಳಲ್ಲಿ ಇಂಥ ದಂಗೆಗಳು ನಡೆದಿವೆ. ಭಕ್ತಿ ಪಂಥ, ಚಾರ್ವಾಕ ದರ್ಶನ ಹೀಗೆ ಹತ್ತು ಹಲವು ವಿಷಯಗಳು ಲೇಖನಗಳಾಗಿ ಪರಿವರ್ತನೆಗೊಂಡಿವೆ. ಪ್ರತಿಯೊಂದನ್ನೂ ದಾಖಲೆಯಾಗಿ ಇಟ್ಟುಕೊಂಡು ಸಂಶೋಧನಾತ್ಮಕ ರೀತಿಯಲ್ಲಿ ಅಕ್ಷರ ರೂಪಕ್ಕೆ ಇಳಿಸಲಾಗಿದೆ’ ಎಂದರು.</p>.<p>ಸಪ್ನ ಬುಕ್ ಹೌಸ್ ಹುಬ್ಬಳ್ಳಿ ಶಾಖೆ ಮುಖ್ಯಸ್ಥ ಎಂ.ವಿ. ರಘು ಮಾತನಾಡಿ, ‘ಈ ಕೃತಿಯು ಸಂಶೋಧನಾತ್ಮಕವಾಗಿ ಹೊರ ಬಂದಿದೆ. ಪಠ್ಯವಾಗಿಯೂ ವಿದ್ಯಾರ್ಥಿಗಳು ಅಭ್ಯಾಸ ಮಾಡುವಂತಾಗಬೇಕು’ ಎಂದು ಅಭಿಪ್ರಾಯಪಟ್ಟರು.</p>.<p>ಓದುಗರಾದ ವೆಂಕಟೇಶ ಮಾಚಕನೂರ, ಲಕ್ಷ್ಮೀಕಾಂತ ಇಟ್ನಾಳ, ಶಿಲ್ಪಾ ಶೆಟ್ಟರ್, ಕೋಡಿ ಗೌಡ್ರ ಅಭಿಪ್ರಾಯ ಹಂಚಿಕೊಂಡರು. ಮೇಘನಾ ರಘು ನಿರೂಪಿಸಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>