<p><strong>ಹುಬ್ಬಳ್ಳಿ:</strong> ‘ಅಂಬಿಗರು ಸಣ್ಣ ಸಮಾಜ ಎಂದು ಕೊರಗುವ ಬದಲು ಎಲ್ಲರೂ ಸೇರಿ ಸಮಾಜವನ್ನು ಒಗ್ಗೂಡಿಸಿದರೆ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಬೆಳೆಯಲು ಸಾಧ್ಯ’ ಎಂದು ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್ ಜೆ.ಬಿ. ಮಜ್ಜಗಿ ಹೇಳಿದರು.</p>.<p>ತಾಲ್ಲೂಕು ಆಡಳಿತ ಸೌಧದ ತಹಶೀಲ್ದಾರ್ ಕಚೇರಿಯ ಸಭಾಭವನದಲ್ಲಿ ಬುಧವಾರ ನಡೆದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಮುದಾಯದ ಮುಖಂಡರು, ಯುವಕರು ಮದುವೆ ಸಮಾರಂಭಗಳಿಗೆ ಮಾತ್ರ ಸೇರದೆ, ತಿಂಗಳಿಗೊಮ್ಮೆ ಚರ್ಚೆ ಮಾಡಿ ಸಂಘಟನೆ ಮಾಡಬೇಕು’ ಎಂದರು.</p>.<p>‘ಸಮಾಜಕ್ಕೆ ಸಭಾಭವನದ ಅವಶ್ಯಕತೆ ಇದೆ ಎಂಬುದು ಗಮನದಲ್ಲಿದೆ. ಮುಂದಿನ ವರ್ಷದ ಚೌಡಯ್ಯ ಜಯಂತಿಗೆ ಸಭಾಭವನ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು’ ಎಂದು ತಿಳಿಸಿದರು.</p>.<p>ಹುಬ್ಬಳ್ಳಿ ಶಹರ ತಹಶೀಲ್ದಾರ್ ಮಹೇಶ್ ಗಸ್ತೆ ಮಾತನಾಡಿ, ‘ಸಮಾಜದ ಜನರು ಶಿಕ್ಷಣದಿಂದ ವಂಚಿತರಾಗಬಾರದು. ಎಲ್ಲ ವರ್ಗದ ಜನರು ಪದವಿ, ಪಿಎಚ್.ಡಿ ಮಾಡಬೇಕು’ ಎಂದರು.</p>.<p>ಮಂಜುನಾಥ್ ಬೈರಣ್ಣವರ್ ಮಾತನಾಡಿ, ‘ನಮಗೆ ಊಟ ಇಲ್ಲದಿದ್ದರೂ ಸರಿ, ಮಕ್ಕಳಿಗೆ ಶಿಕ್ಷಣ ನೀಡಬೇಕು. ಚುನಾವಣೆಯಲ್ಲಿ ನಮ್ಮ ಸಮಾಜದ ಯಾರೇ ನಿಂತರೂ ಅವರನ್ನು ಗೆಲ್ಲಿಸುವ ಮನಸ್ಥಿತಿ ನಿರ್ಮಾಣವಾಗಬೇಕು’ ಎಂದು ಕರೆ ನೀಡಿದರು.</p>.<p>ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಉಪನ್ಯಾಸಕ ಮಯೂರ್ ನಾಟಿಕರ್, ಶಿವಾನಂದ ಅಂಬಿಗೇರ್, ವೆಂಕಟೇಶ್ ಅಂಬಿಗೇರ, ಹನುಮಂತ್ ಅಂಬಿಗೇರ್, ಸೈದಪ್ಪ ಅಂಬಿಗೇರ್, ಕರಿಯಪ್ಪ ಅಂಬಿಗೇರ್, ಮಂಜುನಾಥ್ ಬೆಡಸೂರ್, ಶ್ರೀಕಾಂತ್ ಪೂಜಾರ್, ಗುರುಸಿದ್ದಪ್ಪ ಮಾಳಾಪುರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ:</strong> ‘ಅಂಬಿಗರು ಸಣ್ಣ ಸಮಾಜ ಎಂದು ಕೊರಗುವ ಬದಲು ಎಲ್ಲರೂ ಸೇರಿ ಸಮಾಜವನ್ನು ಒಗ್ಗೂಡಿಸಿದರೆ ಆರ್ಥಿಕವಾಗಿ ಮತ್ತು ಶೈಕ್ಷಣಿಕವಾಗಿ ಬೆಳೆಯಲು ಸಾಧ್ಯ’ ಎಂದು ಹುಬ್ಬಳ್ಳಿ ಗ್ರಾಮೀಣ ತಹಶೀಲ್ದಾರ್ ಜೆ.ಬಿ. ಮಜ್ಜಗಿ ಹೇಳಿದರು.</p>.<p>ತಾಲ್ಲೂಕು ಆಡಳಿತ ಸೌಧದ ತಹಶೀಲ್ದಾರ್ ಕಚೇರಿಯ ಸಭಾಭವನದಲ್ಲಿ ಬುಧವಾರ ನಡೆದ ಅಂಬಿಗರ ಚೌಡಯ್ಯ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ಸಮುದಾಯದ ಮುಖಂಡರು, ಯುವಕರು ಮದುವೆ ಸಮಾರಂಭಗಳಿಗೆ ಮಾತ್ರ ಸೇರದೆ, ತಿಂಗಳಿಗೊಮ್ಮೆ ಚರ್ಚೆ ಮಾಡಿ ಸಂಘಟನೆ ಮಾಡಬೇಕು’ ಎಂದರು.</p>.<p>‘ಸಮಾಜಕ್ಕೆ ಸಭಾಭವನದ ಅವಶ್ಯಕತೆ ಇದೆ ಎಂಬುದು ಗಮನದಲ್ಲಿದೆ. ಮುಂದಿನ ವರ್ಷದ ಚೌಡಯ್ಯ ಜಯಂತಿಗೆ ಸಭಾಭವನ ನಿರ್ಮಾಣಕ್ಕೆ ಪ್ರಯತ್ನಿಸಲಾಗುವುದು’ ಎಂದು ತಿಳಿಸಿದರು.</p>.<p>ಹುಬ್ಬಳ್ಳಿ ಶಹರ ತಹಶೀಲ್ದಾರ್ ಮಹೇಶ್ ಗಸ್ತೆ ಮಾತನಾಡಿ, ‘ಸಮಾಜದ ಜನರು ಶಿಕ್ಷಣದಿಂದ ವಂಚಿತರಾಗಬಾರದು. ಎಲ್ಲ ವರ್ಗದ ಜನರು ಪದವಿ, ಪಿಎಚ್.ಡಿ ಮಾಡಬೇಕು’ ಎಂದರು.</p>.<p>ಮಂಜುನಾಥ್ ಬೈರಣ್ಣವರ್ ಮಾತನಾಡಿ, ‘ನಮಗೆ ಊಟ ಇಲ್ಲದಿದ್ದರೂ ಸರಿ, ಮಕ್ಕಳಿಗೆ ಶಿಕ್ಷಣ ನೀಡಬೇಕು. ಚುನಾವಣೆಯಲ್ಲಿ ನಮ್ಮ ಸಮಾಜದ ಯಾರೇ ನಿಂತರೂ ಅವರನ್ನು ಗೆಲ್ಲಿಸುವ ಮನಸ್ಥಿತಿ ನಿರ್ಮಾಣವಾಗಬೇಕು’ ಎಂದು ಕರೆ ನೀಡಿದರು.</p>.<p>ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಉಪನ್ಯಾಸಕ ಮಯೂರ್ ನಾಟಿಕರ್, ಶಿವಾನಂದ ಅಂಬಿಗೇರ್, ವೆಂಕಟೇಶ್ ಅಂಬಿಗೇರ, ಹನುಮಂತ್ ಅಂಬಿಗೇರ್, ಸೈದಪ್ಪ ಅಂಬಿಗೇರ್, ಕರಿಯಪ್ಪ ಅಂಬಿಗೇರ್, ಮಂಜುನಾಥ್ ಬೆಡಸೂರ್, ಶ್ರೀಕಾಂತ್ ಪೂಜಾರ್, ಗುರುಸಿದ್ದಪ್ಪ ಮಾಳಾಪುರ್ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>