<p><strong>ಹುಬ್ಬಳ್ಳಿ:</strong> ಶಿವರಾತ್ರಿ ಮತ್ತು ಜಾತ್ರಾ ಮಹೋತ್ಸವ ಅಂಗವಾಗಿ ಸಿದ್ಧಾರೂಢ ಮಠದಲ್ಲಿ ಶುಕ್ರವಾರ ರಾತ್ರಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಯುವ ಪ್ರತಿಭೆಗಳು ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು. </p>.<p>ನಿನಾದ ಆರ್ಟ್ ಆಂಡ್ ಕಲ್ಚರಲ್ ಅಕಾಡೆಮಿಯ ತಬಲಾ ವಿದ್ಯಾರ್ಥಿಗಳು ಗುರು ವೀರೇಶ್ ಅಕ್ಕಿ ನೇತೃತ್ವದಲ್ಲಿ ಸಾಮೂಹಿಕ ತಬಲಾ ವಾದನ ನುಡಿಸಿದರು. ಮೂವರು ಯುವ ಗಾಯಕಿಯರು ಸಂಗೀತ ಕಾರ್ಯಕ್ರಮ. ಸಂಜೆ ಧಾರವಾಡದ ಶ್ರೀಧರ ಕುಲಕರ್ಣಿ ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. </p>.<p><strong>ಜಯದೇವಿ ಜಂಗಮಶೆಟ್ಟಿ ಗಾಯನ ಇಂದು:</strong> ಶಿವರಾತ್ರಿ ಜಾಗರಣೆ ದಿನ ಸಿದ್ಧಾರೂಢ ಮಠದಲ್ಲಿ ಫೆ.15ರಂದು ರಾತ್ರಿ 8 ಗಂಟೆಗೆ ಗಾಯಕಿ ಜಯದೇವಿ ಜಂಗಮಶೆಟ್ಟಿ ಅವರ ಗಾಯನ, ಉಸ್ತಾದ ಮಹಮದ್ ಶಫಿ ಖಾನ್ ಅವರ ಸಿತಾರ ವಾದನ, ಉಮೇಶ ಪಾಚಂಗೆ ಅವರ ಗೋಂಧಳಿ ಕಾರ್ಯಕ್ರಮ ನಡೆಯಲಿದೆ. ಇದೇ ವೇಳೆ ಅನಗೋಳದ ರಾಮಲಿಂಗೇಶ್ವರ ನಾಟ್ಯ ಸಂಘದವರ ‘ಮನ್ನಿಜಗುಣ ಶಿವಯೋಗಿಗಳ’ ನಾಟಕ ಪ್ರದರ್ಶನ ನಡೆಯಲಿದೆ. </p>.<p>ಗುರುದೇವ ಮಾದನ್ನವರ (ಸಂಗೀತ) ವಿದುಷಿ ನೇತ್ರಾವತಿ ಹಿರೇಮಠ (ಭರತನಾಟ್ಯ) ಹಾಗೂ ಹರ್ಲಾಪುರ ಜಾನಪದ ತಂಡದಿಂದ ಗಾಯನ ಕಾರ್ಯಕ್ರಮ ನಡೆಯಲಿದೆ.</p>
<p><strong>ಹುಬ್ಬಳ್ಳಿ:</strong> ಶಿವರಾತ್ರಿ ಮತ್ತು ಜಾತ್ರಾ ಮಹೋತ್ಸವ ಅಂಗವಾಗಿ ಸಿದ್ಧಾರೂಢ ಮಠದಲ್ಲಿ ಶುಕ್ರವಾರ ರಾತ್ರಿ ನಡೆದ ಸಂಗೀತ ಕಾರ್ಯಕ್ರಮದಲ್ಲಿ ಯುವ ಪ್ರತಿಭೆಗಳು ಭಕ್ತಿಗೀತೆಗಳನ್ನು ಪ್ರಸ್ತುತಪಡಿಸಿದರು. </p>.<p>ನಿನಾದ ಆರ್ಟ್ ಆಂಡ್ ಕಲ್ಚರಲ್ ಅಕಾಡೆಮಿಯ ತಬಲಾ ವಿದ್ಯಾರ್ಥಿಗಳು ಗುರು ವೀರೇಶ್ ಅಕ್ಕಿ ನೇತೃತ್ವದಲ್ಲಿ ಸಾಮೂಹಿಕ ತಬಲಾ ವಾದನ ನುಡಿಸಿದರು. ಮೂವರು ಯುವ ಗಾಯಕಿಯರು ಸಂಗೀತ ಕಾರ್ಯಕ್ರಮ. ಸಂಜೆ ಧಾರವಾಡದ ಶ್ರೀಧರ ಕುಲಕರ್ಣಿ ತಂಡದವರು ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು. </p>.<p><strong>ಜಯದೇವಿ ಜಂಗಮಶೆಟ್ಟಿ ಗಾಯನ ಇಂದು:</strong> ಶಿವರಾತ್ರಿ ಜಾಗರಣೆ ದಿನ ಸಿದ್ಧಾರೂಢ ಮಠದಲ್ಲಿ ಫೆ.15ರಂದು ರಾತ್ರಿ 8 ಗಂಟೆಗೆ ಗಾಯಕಿ ಜಯದೇವಿ ಜಂಗಮಶೆಟ್ಟಿ ಅವರ ಗಾಯನ, ಉಸ್ತಾದ ಮಹಮದ್ ಶಫಿ ಖಾನ್ ಅವರ ಸಿತಾರ ವಾದನ, ಉಮೇಶ ಪಾಚಂಗೆ ಅವರ ಗೋಂಧಳಿ ಕಾರ್ಯಕ್ರಮ ನಡೆಯಲಿದೆ. ಇದೇ ವೇಳೆ ಅನಗೋಳದ ರಾಮಲಿಂಗೇಶ್ವರ ನಾಟ್ಯ ಸಂಘದವರ ‘ಮನ್ನಿಜಗುಣ ಶಿವಯೋಗಿಗಳ’ ನಾಟಕ ಪ್ರದರ್ಶನ ನಡೆಯಲಿದೆ. </p>.<p>ಗುರುದೇವ ಮಾದನ್ನವರ (ಸಂಗೀತ) ವಿದುಷಿ ನೇತ್ರಾವತಿ ಹಿರೇಮಠ (ಭರತನಾಟ್ಯ) ಹಾಗೂ ಹರ್ಲಾಪುರ ಜಾನಪದ ತಂಡದಿಂದ ಗಾಯನ ಕಾರ್ಯಕ್ರಮ ನಡೆಯಲಿದೆ.</p>