ಹುಬ್ಬಳ್ಳಿ: ನೈರುತ್ಯ ರೈಲ್ವೆಯು ಆ. 21ರಿಂದ ಪ್ರತಿ ಶನಿವಾರ ಹುಬ್ಬಳ್ಳಿ–ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವೆ ವಿಶೇಷ ಎಕ್ಸ್ಪ್ರೆಸ್ ರೈಲಿನ ಸಂಚಾರ ಆರಂಭಿಸಲಿದೆ. ಈ ರೈಲು 22ರಿಂದ ಪ್ರತಿ ವಾರ ಚೆನ್ನೈನಿಂದ ಸಂಚರಿಸಲಿದೆ.
ರಾಜ್ಯದಲ್ಲಿ ಹಾವೇರಿ, ರಾಣೆಬೆನ್ನೂರು, ಹರಿಹರ, ದಾವಣಗೆರೆ, ಬಿರೂರು, ಅರಸೀಕೆರೆ, ತಿಪಟೂರು, ತುಮಕೂರು, ಯಶವಂತಪುರ, ಬಾಣಸವಾಡಿ, ಕೃಷ್ಣರಾಜಪುರಂ, ಬಂಗಾರಪೇಟೆ ಹಾಗೂ ಜೊಲಾರಪೇಟೆ ನಿಲ್ದಾಣಗಳಲ್ಲಿ ನಿಲುಗಡೆಯಾಗಿದೆ.