<p><strong>ಹುಬ್ಬಳ್ಳಿ</strong>: ಒಂದೇ ರೀತಿಯ ಕೃಷಿಯನ್ನು ಅವಲಂಬಿಸದೇ, ಸಮಗ್ರ ಕೃಷಿಯನ್ನು ಅಳವಡಿಸಿಕೊಂಡು ನೆಮ್ಮದಿಯ ಜೀವನ ಕಾಣುತ್ತಿರುವವರು ಅಣ್ಣಿಗೇರಿ ತಾಲ್ಲೂಕಿನ ಬಲ್ಲರವಾಡ ಗ್ರಾಮದ ರೈತ ಪ್ರವೀಣ ಶೆರವಾಡ.</p>.<p>20 ವರ್ಷಗಳಿಂದ ಕೃಷಿಯಲ್ಲೇ ಬದುಕು ಕಂಡುಕೊಂಡಿರುವ 40 ವರ್ಷದ ಪ್ರವೀಣ ಶೆರವಾಡ ಅವರು ಓದಿದ್ದು ಎಸ್ಎಸ್ಎಲ್ಸಿ. ತಮ್ಮ 7 ಎಕರೆ ಮಳೆಯಾಶ್ರಿತ ಮತ್ತು 8 ಎಕರೆ ನೀರಾವರಿ ಜಮೀನಿನಲ್ಲಿ ವಿವಿಧ ರೀತಿಯ ಬೇಸಾಯ ಮಾಡುತ್ತಿದ್ದರೂ ಇವರ ಕೈ ಹಿಡಿದಿದ್ದು ಮೇಕೆ ಸಾಕಾಣಿಕೆ.</p>.<p>ವಿವಿಧ ರೀತಿಯ ಧಾನ್ಯಗಳು, ಹಣ್ಣಿನ ಗಿಡಗಳ ಬೆಳೆಸಿದ್ದು, 4 ಎಕರೆಯಲ್ಲಿ ಬ್ಯಾಂಬೊ ಗಿಡಗಳನ್ನು ಹಾಗೂ 2 ಎಕರೆಯಲ್ಲಿ ನೇಪಿಯರ್ ಹುಲ್ಲು ಬೆಳೆಸಿದ್ದಾರೆ. </p>.<p>‘ಜರ್ಸಿ ತಳಿಯ 6 ಆಕಳು, ಅಂದಾಜು 200 ಆಡುಗಳಿವೆ. ಆಡುಗಳಿಗೆ (ಮೇಕೆ) ಕ್ರಾಸ್ ಬ್ರೀಡಿಂಗ್ ಸಹ ಮಾಡುತ್ತೇವೆ. ಆಕಳುಗಳಿಂದ ಪ್ರತಿದಿನ 40 ಲೀಟರ್ ಹಾಲು ಉತ್ಪಾದನೆ ಆಗುತ್ತದೆ. ದೊಡ್ಲ ಹಾಗೂ ಕೆಎಂಎಫ್ಗೆ ಅಂದಾಜು 35 ಲೀಟರ್ ಮಾರುತ್ತೇವೆ. ತಿಂಗಳಿಗೆ ₹30 ಸಾವಿರ ಆದಾಯ ಬರುತ್ತದೆ’ ಎಂದು ರೈತ ಪ್ರವೀಣ ಶೆರವಾಡ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ವರ್ಷಕ್ಕೆ ಅಂದಾಜು 100ರಿಂದ 150 ಆಡುಗಳನ್ನು ಸ್ಥಳೀಯ ಹಾಗೂ ಸುತ್ತಮುತ್ತಲಿನ ಮಾರುಕಟ್ಟೆ, ಸಂತೆಗಳಲ್ಲಿ ಮಾರುತ್ತೇವೆ. ಮರಿಗಳಿಗೆ ಅಗತ್ಯದಷ್ಟು ಪೋಷಕಾಂಶಯುಕ್ತ ಆಹಾರ ನೀಡಿದರೆ ಚನ್ನಾಗಿ ಬೆಳೆಯುತ್ತವೆ. ವರ್ಷಕ್ಕೆ ಅಂದಾಜು ಏಳೂವರೆ ಲಕ್ಷ ರೂಪಾಯಿ ಆದಾಯ ಪಡೆಯಬಹುದು’ ಎಂದೂ ಮಾಹಿತಿ ನೀಡಿದರು. </p>.<p>‘ವಿಜಯಪುರ, ಉತ್ತರ ಕನ್ನಡ ಜಿಲ್ಲೆಗಳಿಂದ ಆಡಿನ ಗೊಬ್ಬರಕ್ಕೆ ಹೆಚ್ಚು ಬೇಡಿಕೆ ಇದೆ. ಕೃಷಿ ಭೂಮಿಗೆ ಈ ಗೊಬ್ಬರ ಬಳಸುವುದರಿಂದ ಫಲವತ್ತತೆ ಹೆಚ್ಚುತ್ತದೆ. ಒಂದು ಟ್ರ್ಯಾಕ್ಟರ್ ಟ್ರಾಲಿ ಆಡಿನ ಗೊಬ್ಬರಕ್ಕೆ ₹6 ಸಾವಿರ ದರವಿದೆ. ವರ್ಷಕ್ಕೆ ಮೂರರಿಂದ ನಾಲ್ಕು ಲಕ್ಷ ರೂಪಾಯಿ ಆದಾಯ ಸಿಗುತ್ತದೆ. ಅಲ್ಲದೇ, ರೈತ ಉತ್ಪಾದಕ ಕೇಂದ್ರ, ಅಗ್ರೋ ಏಜೆನ್ಸಿ ಇದ್ದು, ಕುಸುಬೆ, ಶೇಂಗಾ ಎಣ್ಣೆ, ಖಾರದಪುಡಿ ಸಹ ತಯಾರಿಸಿ, ಮಾರಾಟ ಮಾಡುತ್ತೇವೆ’ ಎಂದು ಹೇಳಿದರು.</p>.<p>ಕೃಷಿ ಇಲಾಖೆಯಿಂದ ನೆರವು: ‘ಕೃಷಿ ಇಲಾಖೆಯಿಂದ ಸ್ಪ್ರಿಂಕ್ಲರ್ ಪೈಪ್, ಬೆಳೆಗಳಿಗೆ ಎಣ್ಣೆ ಹೊಡೆಯುವ ಪಂಪ್ ಪಡೆದುಕೊಂಡಿದ್ದು, 100X 100 ಮತ್ತು 100X150 ಅಳತಯೆ ಕೃಷಿಹೊಂಡ ನಿರ್ಮಿಸಿಕೊಂಡಿದ್ದೇವೆ. ಬಿತ್ತನೆ ಬೀಜಗಳನ್ನು ಪಡೆದುಕೊಂಡಿದ್ದೇವೆ’ ಎಂದರು.</p>.<div><blockquote>ಕೇವಲ ಕೃಷಿಯನ್ನಷ್ಟೇ ಅವಲಂಬಿಸದೇ ಉಪ ಕಸುಬು ಮಾಡುವುದರಿಂದ ಹೆಚ್ಚಿನ ಆದಾಯ ಪಡೆಯಬಹುದು. ಶ್ರಮವಹಿಸಿ ಸ್ವತಃ ದುಡಿದಲ್ಲಿ ತಕ್ಕ ಪ್ರತಿಫಲ ಸಿಗುವುದು ನಿಶ್ಚಿತ ಪ್ರವೀಣ ಶೆರವಾಡ</blockquote><span class="attribution"> ರೈತ ಬಲ್ಲರವಾಡ ಗ್ರಾಮ ಅಣ್ಣಿಗೇರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ</strong>: ಒಂದೇ ರೀತಿಯ ಕೃಷಿಯನ್ನು ಅವಲಂಬಿಸದೇ, ಸಮಗ್ರ ಕೃಷಿಯನ್ನು ಅಳವಡಿಸಿಕೊಂಡು ನೆಮ್ಮದಿಯ ಜೀವನ ಕಾಣುತ್ತಿರುವವರು ಅಣ್ಣಿಗೇರಿ ತಾಲ್ಲೂಕಿನ ಬಲ್ಲರವಾಡ ಗ್ರಾಮದ ರೈತ ಪ್ರವೀಣ ಶೆರವಾಡ.</p>.<p>20 ವರ್ಷಗಳಿಂದ ಕೃಷಿಯಲ್ಲೇ ಬದುಕು ಕಂಡುಕೊಂಡಿರುವ 40 ವರ್ಷದ ಪ್ರವೀಣ ಶೆರವಾಡ ಅವರು ಓದಿದ್ದು ಎಸ್ಎಸ್ಎಲ್ಸಿ. ತಮ್ಮ 7 ಎಕರೆ ಮಳೆಯಾಶ್ರಿತ ಮತ್ತು 8 ಎಕರೆ ನೀರಾವರಿ ಜಮೀನಿನಲ್ಲಿ ವಿವಿಧ ರೀತಿಯ ಬೇಸಾಯ ಮಾಡುತ್ತಿದ್ದರೂ ಇವರ ಕೈ ಹಿಡಿದಿದ್ದು ಮೇಕೆ ಸಾಕಾಣಿಕೆ.</p>.<p>ವಿವಿಧ ರೀತಿಯ ಧಾನ್ಯಗಳು, ಹಣ್ಣಿನ ಗಿಡಗಳ ಬೆಳೆಸಿದ್ದು, 4 ಎಕರೆಯಲ್ಲಿ ಬ್ಯಾಂಬೊ ಗಿಡಗಳನ್ನು ಹಾಗೂ 2 ಎಕರೆಯಲ್ಲಿ ನೇಪಿಯರ್ ಹುಲ್ಲು ಬೆಳೆಸಿದ್ದಾರೆ. </p>.<p>‘ಜರ್ಸಿ ತಳಿಯ 6 ಆಕಳು, ಅಂದಾಜು 200 ಆಡುಗಳಿವೆ. ಆಡುಗಳಿಗೆ (ಮೇಕೆ) ಕ್ರಾಸ್ ಬ್ರೀಡಿಂಗ್ ಸಹ ಮಾಡುತ್ತೇವೆ. ಆಕಳುಗಳಿಂದ ಪ್ರತಿದಿನ 40 ಲೀಟರ್ ಹಾಲು ಉತ್ಪಾದನೆ ಆಗುತ್ತದೆ. ದೊಡ್ಲ ಹಾಗೂ ಕೆಎಂಎಫ್ಗೆ ಅಂದಾಜು 35 ಲೀಟರ್ ಮಾರುತ್ತೇವೆ. ತಿಂಗಳಿಗೆ ₹30 ಸಾವಿರ ಆದಾಯ ಬರುತ್ತದೆ’ ಎಂದು ರೈತ ಪ್ರವೀಣ ಶೆರವಾಡ ‘ಪ್ರಜಾವಾಣಿ’ಗೆ ತಿಳಿಸಿದರು.</p>.<p>‘ವರ್ಷಕ್ಕೆ ಅಂದಾಜು 100ರಿಂದ 150 ಆಡುಗಳನ್ನು ಸ್ಥಳೀಯ ಹಾಗೂ ಸುತ್ತಮುತ್ತಲಿನ ಮಾರುಕಟ್ಟೆ, ಸಂತೆಗಳಲ್ಲಿ ಮಾರುತ್ತೇವೆ. ಮರಿಗಳಿಗೆ ಅಗತ್ಯದಷ್ಟು ಪೋಷಕಾಂಶಯುಕ್ತ ಆಹಾರ ನೀಡಿದರೆ ಚನ್ನಾಗಿ ಬೆಳೆಯುತ್ತವೆ. ವರ್ಷಕ್ಕೆ ಅಂದಾಜು ಏಳೂವರೆ ಲಕ್ಷ ರೂಪಾಯಿ ಆದಾಯ ಪಡೆಯಬಹುದು’ ಎಂದೂ ಮಾಹಿತಿ ನೀಡಿದರು. </p>.<p>‘ವಿಜಯಪುರ, ಉತ್ತರ ಕನ್ನಡ ಜಿಲ್ಲೆಗಳಿಂದ ಆಡಿನ ಗೊಬ್ಬರಕ್ಕೆ ಹೆಚ್ಚು ಬೇಡಿಕೆ ಇದೆ. ಕೃಷಿ ಭೂಮಿಗೆ ಈ ಗೊಬ್ಬರ ಬಳಸುವುದರಿಂದ ಫಲವತ್ತತೆ ಹೆಚ್ಚುತ್ತದೆ. ಒಂದು ಟ್ರ್ಯಾಕ್ಟರ್ ಟ್ರಾಲಿ ಆಡಿನ ಗೊಬ್ಬರಕ್ಕೆ ₹6 ಸಾವಿರ ದರವಿದೆ. ವರ್ಷಕ್ಕೆ ಮೂರರಿಂದ ನಾಲ್ಕು ಲಕ್ಷ ರೂಪಾಯಿ ಆದಾಯ ಸಿಗುತ್ತದೆ. ಅಲ್ಲದೇ, ರೈತ ಉತ್ಪಾದಕ ಕೇಂದ್ರ, ಅಗ್ರೋ ಏಜೆನ್ಸಿ ಇದ್ದು, ಕುಸುಬೆ, ಶೇಂಗಾ ಎಣ್ಣೆ, ಖಾರದಪುಡಿ ಸಹ ತಯಾರಿಸಿ, ಮಾರಾಟ ಮಾಡುತ್ತೇವೆ’ ಎಂದು ಹೇಳಿದರು.</p>.<p>ಕೃಷಿ ಇಲಾಖೆಯಿಂದ ನೆರವು: ‘ಕೃಷಿ ಇಲಾಖೆಯಿಂದ ಸ್ಪ್ರಿಂಕ್ಲರ್ ಪೈಪ್, ಬೆಳೆಗಳಿಗೆ ಎಣ್ಣೆ ಹೊಡೆಯುವ ಪಂಪ್ ಪಡೆದುಕೊಂಡಿದ್ದು, 100X 100 ಮತ್ತು 100X150 ಅಳತಯೆ ಕೃಷಿಹೊಂಡ ನಿರ್ಮಿಸಿಕೊಂಡಿದ್ದೇವೆ. ಬಿತ್ತನೆ ಬೀಜಗಳನ್ನು ಪಡೆದುಕೊಂಡಿದ್ದೇವೆ’ ಎಂದರು.</p>.<div><blockquote>ಕೇವಲ ಕೃಷಿಯನ್ನಷ್ಟೇ ಅವಲಂಬಿಸದೇ ಉಪ ಕಸುಬು ಮಾಡುವುದರಿಂದ ಹೆಚ್ಚಿನ ಆದಾಯ ಪಡೆಯಬಹುದು. ಶ್ರಮವಹಿಸಿ ಸ್ವತಃ ದುಡಿದಲ್ಲಿ ತಕ್ಕ ಪ್ರತಿಫಲ ಸಿಗುವುದು ನಿಶ್ಚಿತ ಪ್ರವೀಣ ಶೆರವಾಡ</blockquote><span class="attribution"> ರೈತ ಬಲ್ಲರವಾಡ ಗ್ರಾಮ ಅಣ್ಣಿಗೇರಿ</span></div>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>