ಶನಿವಾರ ಘಟನಾ ಸ್ಥಳ ಪರಿಶೀಲಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ, ‘ನಿಲ್ದಾಣದಲ್ಲಿ ಚಹಾ ಮಾರುವ ವ್ಯಕ್ತಿಯಿಂದ ಸ್ಫೋಟಕಗಳಿದ್ದ ಬಕೆಟ್ ಎತ್ತಿಸಿದ ಕಾರಣಕ್ಕೆ ನಿಲ್ದಾಣದ ವ್ಯವಸ್ಥಾಪಕ ವರುಣಕುಮಾರ ದಾಸ್ ಹಾಗೂ ಆರ್ಪಿಎಫ್ ಎಎಸ್ಐ ಮಂಜುನಾಥ ದೇಸಾಯಿ ಅವರನ್ನು ಅಮಾನತು ಮಾಡಲಾಗಿದೆ. ಪ್ರಕರಣದ ಕುರಿತು ಮೂರು ದಿನಗಳಲ್ಲಿ ವರದಿ ನೀಡುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ‘ ಎಂದು ತಿಳಿಸಿದರು.