ಅಮರಗೋಳ, ಗಾಮನಕಟ್ಟಿ, ರಾಯಾಪುರ ಹಾಗೂ ಹೆಬ್ಬಳ್ಳಿ ಸುತ್ತಲಿನ ಬಡಾವಣೆಗಳ ಜನರಿಗೆ ಇವರು ಚಿರಪರಿಚಿತ. ಅತಿಯಾದ ಸೆಖೆಗೆ ಹಾವುಗಳು ನೆಲದೊಡಲು ಬಿಟ್ಟು ಹೊರಗೆ ಬರುತ್ತವೆ. ಆಶ್ರಯ ಸಿಗದೆ ಇದ್ದಾಗ ಮನೆಗಳ ಹಿತ್ತಲು, ಕಾಂಪೌಂಡ್ ಮೂಲೆ, ಪಾದರಕ್ಷೆ ಬಿಡುವ ಸ್ಥಳ, ಟೈರ್ನೊಳಗೆ, ಕಲ್ಲುಗಳ ಸಂದಿಯಲ್ಲಿ ಅವಿತಿರುತ್ತವೆ. ಇವುಗಳನ್ನು ಕಂಡ ಮನೆಗಳ ಮಾಲೀಕರು ಸಹಜವಾಗಿಯೇ ಗಾಬರಿಗೊಂಡು ಕೊಲ್ಲಲು ಮುಂದಾಗುವದುಂಟು. ಆದರೆ, ಕೆಲವರಿಗೆ ‘ಸ್ನೇಕ್ ನಾಗರಾಜ’ ಅವರು ಥಟ್ ಅಂತಾ ನೆನಪಾಗುತ್ತಾರೆ.