ಹುಬ್ಬಳ್ಳಿ: ಗುಂತಕಲ್ ವಿಭಾಗದಲ್ಲಿ ಎರಡು ಬ್ರಿಡ್ಜ್ಗಳು ಮರುನಿರ್ಮಾಣ ಕಾರ್ಯ ನಡೆಯುತ್ತಿರುವ ಕಾರಣ ತಾತ್ಕಾಲಿಕವಾಗಿ ಹುಬ್ಬಳ್ಳಿ–ತಿರುಪತಿ ಪ್ಯಾಸೇಂಜರ್ ರೈಲು ಸಂಚಾರ ರದ್ದು ಮಾಡಲಾಗಿದೆ ಎಂದು ನೈರುತ್ಯ ರೈಲ್ವೆ ತಿಳಿಸಿದೆ.
ಹುಬ್ಬಳ್ಳಿ–ತಿರುಪತಿ ನಡುವೆ ಜುಲೈ 3, 4, 6 ಮತ್ತು 7ರಂದು, ತಿರುಪತಿ–ಹುಬ್ಬಳ್ಳಿ ನಡುವೆ ಜು. 3, 5 ಮತ್ತು 6ರಂದು ರೈಲು ಸಂಚರಿಸುವುದಿಲ್ಲ. ಜು. 3, 5 ಮತ್ತು 6ರಂದು ಗುಂತಕಲ್–ಹಿಂದುಪುರ ಹಾಗೂ 3, 4, 6 ಮತ್ತು 7ರಂದು ಹಿಂದುಪುರ–ಗುಂತಕಲ್ ನಡುವಣ ರೈಲು ಸಂಚಾರಿಸುವುದಿಲ್ಲ.