ಹುಬ್ಬಳ್ಳಿ: ಆನಂದನಗರ ಮುಖ್ಯರಸ್ತೆ, ಮಯೂರ ನಗರ ಹಾಗೂ ಅರುಣನಗರ ಕಾಲೊನಿಯಲ್ಲಿ ಕೈಗೊಂಡಿರುವ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಶಾಸಕ ಅರವಿಂದ ಬೆಲ್ಲದ ಹಾಗೂ ಪಾಲಿಕೆ ಸದಸ್ಯ ಇಮ್ರಾನ್ ಎಲಿಗಾರ ಶನಿವಾರ ಚಾಲನೆ ನೀಡಿದರು.
ಮಹಾನಗರ ಪಾಲಿಕೆ ಹಾಗೂ ಶಾಸಕರ ಅನುದಾನದಲ್ಲಿ ₹1.7 ಕೋಟಿ ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ಕೈಗೆತ್ತಿಕೈಗೊಳ್ಳಲಾಗಿದೆ.
ಪಾಲಿಕೆ ಸದಸ್ಯ ಸತೀಶ ಹಾನಗಲ್ಲ, ಮುಖಂಡರಾದ ಮುರಗೆಪ್ಪ ಹೊರಡಿ, ಮಹೇಶ ಚಂದರಗಿ, ಮಹೇಶ ಘಾಟಗೆ, ನಿಜಲಿಂಗಪ್ಪ ಪತ್ತಾರ, ಸಯ್ಯದ ಅಹ್ಮದ, ಪರಶುರಾಮ ಸುಣಗಾರ, ರಫಿಕ ಚವ್ಹಾಣ, ಕೆ.ಡಿ. ನಾಯಕ್, ಇಮಾಮ್ ನೆಗಳೂರ, ಸುರೇಶ ಉಳ್ಳಿಕಾಶಿ ಹಾಗೂ ಬಸಲಿಂಗಪ್ಪ ಕೌಡಿಮಠ ಇದ್ದರು.