<p><strong>ಹುಬ್ಬಳ್ಳಿ: </strong>ಪ್ರತಿಷ್ಠಿತ ಕಂಪನಿಯೊಂದರ ಪ್ರಾಂಚೈಸಿ ಎಂದು ನಗರದ ನಿವಾಸಿ ಡಾ.ಶೈಲಾ ಅವರಿಗೆ ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ, ಅವರಿಂದ ₹50 ಲಕ್ಷ ಪಡೆದು ವಂಚಿಸಿದ್ದಾನೆ.</p>.<p>ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಡಾ.ಶೈಲಾ ಅವರಿಗೆ ನಿವೃತ್ತಿ ನಂತರ ₹38 ಲಕ್ಷ ದೊರಕಿತ್ತು. ಅಂಗವಿಕಲ ಮಗನಿಗೆ ಹಾಗೂ ಇಳಿವಯಸ್ಸಲ್ಲಿ ತಮಗೆ ಸಹಾಯವಾಗಬಹುದೆಂದು ಪರಿಚಯಯದ ಮಣಿಕಂಠನ್ ಕುಟ್ಟುತ್ ಅವರು ಪ್ರಾಂಚೈಸಿ ಪಡೆದಿದ್ದ ಎನ್ನಲಾದ ಕಂಪನಿಯಲ್ಲಿ ಹೂಡಿಕೆ ಮಾಡಲು ₹50 ಲಕ್ಷ ನೀಡಿದ್ದರು. ಹಣ ಹೂಡಿಕೆ ಮಾಡಿರುವ ಬಗ್ಗೆ ಮಣಿಕಂಠನ್ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ನೀಡಿದ್ದನು. ಕಾಗದ ಪತ್ರಗಳನ್ನು ಪರಿಶೀಲಿಸಿದಾಗ ವಂಚನೆಗೊಳಗಾಗಿದ್ದು ತಿಳಿದು ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.</p>.<p><strong>₹4 ಲಕ್ಷ ಮೌಲ್ಯದ ಚಿನ್ನಾಭರಣ ಕಳವು:</strong> ಕೇಶ್ವಾಪುರ ಶಾಂತಿನಗರದ ಹನುಮಂತಪ್ಪ ಬುಲಗಣ್ಣವರ ಅವರ ಮನೆ ಬಾಗಿಲು ಮುರಿದು, ₹4.07 ಲಕ್ಷ ಮೌಲ್ಯದ ಬೆಳ್ಳಿ ಮತ್ತು ಚಿನ್ನಾಭರಣ ಕಳವು ಮಾಡಲಾಗಿದೆ. 135 ಗ್ರಾಂ ಚಿನ್ನಾಭರಣ ಹಾಗೂ 55 ಗ್ರಾಂ ಬೆಳ್ಳಿ ಸಾಮಗ್ರಿ ಕಳವು ಆಗಿದೆ ಎಂದು ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>₹82 ಸಾವಿರ ವಂಚನೆ:</strong> ಸಾಲ ಮಂಜೂರು ಆಗಿದೆ ಎಂದು ಗೋಪನಕೊಪ್ಪದ ಪ್ರವೀಣ ಕರೊಗಲ್ಲರ ಅವರಿಗೆ ಕರೆ ಮಾಡಿದ ವಂಚಕ, ಅವರಿಂದ ಬ್ಯಾಂಕ್ ಮಾಹಿತಿ ಪಡೆದು ₹82 ಸಾವಿರ ಆನ್ಲೈನ್ನಲ್ಲಿ ವರ್ಗಾಯಿಸಿಕೊಂಡಿದ್ದಾನೆ.</p>.<p>ಧನಿ ಲೋನ್ ಆ್ಯಪ್ನಲ್ಲಿ ಶೇ 2.5 ಬಡ್ಡಿ ದರದಲ್ಲಿ ₹3 ಲಕ್ಷ ಸಾಲ ಮಂಜೂರಾಗಿದೆ ಎಂದು ಕರೆ ಮಾಡಿ ನಂಬಿಸಿದ್ದಾರೆ. ಬಳಿಕ ವಿಮೆ, ಜಿಎಸ್ಟಿ ಹಾಗೂ ಇತ್ಯಾದಿ ಶುಲ್ಕ ಎಂದು ಹಣ ವರ್ಗಾಯಿಸಿಕೊಂಡಿದ್ದಾನೆ. ಹುಬ್ಬಳ್ಳಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ: </strong>ಪ್ರತಿಷ್ಠಿತ ಕಂಪನಿಯೊಂದರ ಪ್ರಾಂಚೈಸಿ ಎಂದು ನಗರದ ನಿವಾಸಿ ಡಾ.ಶೈಲಾ ಅವರಿಗೆ ಪರಿಚಯಿಸಿಕೊಂಡ ವ್ಯಕ್ತಿಯೊಬ್ಬ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ, ಅವರಿಂದ ₹50 ಲಕ್ಷ ಪಡೆದು ವಂಚಿಸಿದ್ದಾನೆ.</p>.<p>ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾಗಿರುವ ಡಾ.ಶೈಲಾ ಅವರಿಗೆ ನಿವೃತ್ತಿ ನಂತರ ₹38 ಲಕ್ಷ ದೊರಕಿತ್ತು. ಅಂಗವಿಕಲ ಮಗನಿಗೆ ಹಾಗೂ ಇಳಿವಯಸ್ಸಲ್ಲಿ ತಮಗೆ ಸಹಾಯವಾಗಬಹುದೆಂದು ಪರಿಚಯಯದ ಮಣಿಕಂಠನ್ ಕುಟ್ಟುತ್ ಅವರು ಪ್ರಾಂಚೈಸಿ ಪಡೆದಿದ್ದ ಎನ್ನಲಾದ ಕಂಪನಿಯಲ್ಲಿ ಹೂಡಿಕೆ ಮಾಡಲು ₹50 ಲಕ್ಷ ನೀಡಿದ್ದರು. ಹಣ ಹೂಡಿಕೆ ಮಾಡಿರುವ ಬಗ್ಗೆ ಮಣಿಕಂಠನ್ ನಕಲಿ ದಾಖಲೆ ಪತ್ರಗಳನ್ನು ಸೃಷ್ಟಿಸಿ ನೀಡಿದ್ದನು. ಕಾಗದ ಪತ್ರಗಳನ್ನು ಪರಿಶೀಲಿಸಿದಾಗ ವಂಚನೆಗೊಳಗಾಗಿದ್ದು ತಿಳಿದು ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಪ್ರಕರಣ ಗೋಕುಲ ರಸ್ತೆ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.</p>.<p><strong>₹4 ಲಕ್ಷ ಮೌಲ್ಯದ ಚಿನ್ನಾಭರಣ ಕಳವು:</strong> ಕೇಶ್ವಾಪುರ ಶಾಂತಿನಗರದ ಹನುಮಂತಪ್ಪ ಬುಲಗಣ್ಣವರ ಅವರ ಮನೆ ಬಾಗಿಲು ಮುರಿದು, ₹4.07 ಲಕ್ಷ ಮೌಲ್ಯದ ಬೆಳ್ಳಿ ಮತ್ತು ಚಿನ್ನಾಭರಣ ಕಳವು ಮಾಡಲಾಗಿದೆ. 135 ಗ್ರಾಂ ಚಿನ್ನಾಭರಣ ಹಾಗೂ 55 ಗ್ರಾಂ ಬೆಳ್ಳಿ ಸಾಮಗ್ರಿ ಕಳವು ಆಗಿದೆ ಎಂದು ಕೇಶ್ವಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<p><strong>₹82 ಸಾವಿರ ವಂಚನೆ:</strong> ಸಾಲ ಮಂಜೂರು ಆಗಿದೆ ಎಂದು ಗೋಪನಕೊಪ್ಪದ ಪ್ರವೀಣ ಕರೊಗಲ್ಲರ ಅವರಿಗೆ ಕರೆ ಮಾಡಿದ ವಂಚಕ, ಅವರಿಂದ ಬ್ಯಾಂಕ್ ಮಾಹಿತಿ ಪಡೆದು ₹82 ಸಾವಿರ ಆನ್ಲೈನ್ನಲ್ಲಿ ವರ್ಗಾಯಿಸಿಕೊಂಡಿದ್ದಾನೆ.</p>.<p>ಧನಿ ಲೋನ್ ಆ್ಯಪ್ನಲ್ಲಿ ಶೇ 2.5 ಬಡ್ಡಿ ದರದಲ್ಲಿ ₹3 ಲಕ್ಷ ಸಾಲ ಮಂಜೂರಾಗಿದೆ ಎಂದು ಕರೆ ಮಾಡಿ ನಂಬಿಸಿದ್ದಾರೆ. ಬಳಿಕ ವಿಮೆ, ಜಿಎಸ್ಟಿ ಹಾಗೂ ಇತ್ಯಾದಿ ಶುಲ್ಕ ಎಂದು ಹಣ ವರ್ಗಾಯಿಸಿಕೊಂಡಿದ್ದಾನೆ. ಹುಬ್ಬಳ್ಳಿ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>