ಈ ಘಟನೆ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಸಿಡಿಪಿಒ ಶಾರದಾ ನಾಡಗೌಡ್ರ, ‘ಪ್ರತಿ ತಿಂಗಳ ಆಹಾರ ಪದಾರ್ಥಗಳು ಕೇಂದ್ರಕ್ಕೆ ವಿತರಣೆ ಮಾಡುವಾಗ ಬಾಲ ವಿಕಾಸ ಸಮಿತಿ ಹಾಗೂ ಓಣಿಯ ಮುಖಂಡ ಕರೆದು ಪರಿಶೀಲನೆ ಮಾಡಿದ ನಂತರ ಕೇಂದ್ರದ ಒಳಗೆ ತೆಗೆದುಕೊಳ್ಳುವಂತೆ ಅಂಗನವಾಡಿ ಕಾರ್ಯಕರ್ತರಿಗೆ ಸೂಚಿಸಿದ್ದೇನೆ. ಇನ್ನು ಮುಂದೆ ಹೀಗೆ ಆಗದಂತೆ ನಾವು ಸಹ ಭೇಟಿ ನೀಡಿ ಪರಿಶೀಲನೆ ಮಾಡುತ್ತೇನೆ. ಆಹಾರ ವಿತರಣೆ ಮಾಡುವ ಕೇಂದ್ರಕ್ಕೆ ಹಾಗೂ ಇಲ್ಲಿನ ಅಂಗನವಾಡಿ ಕಾರ್ಯಕರ್ತರಿಗೆ ನೋಟಿಸ್ ಜಾರಿಗೆ ಮಾಡಿದ್ದೇನೆ. ಇನ್ನು ಮುಂದೆ ಇಂತಹ ಘಟನೆಗಳು ಮರುಕಳಿಸದಂತೆ ನಿಗಾ ವಹಿಸಲಾಗುವುದು’ ಎಂದು ಹೇಳಿದರು.