<p><strong>ಅಣ್ಣಿಗೇರಿ: </strong>ಇಂಚಗೇರಿ ಆಧ್ಯಾತ್ಮ ಸಂಪ್ರದಾಯದ ಸದ್ಗುರುಗಳಾದ ಸ.ಸ. ಭಾವೂಸಾಹೇಬ ಮಹಾರಾಜರ ಜ್ಞಾನಯಜ್ಞ ಸಪ್ತಾಹ ಶುಕ್ರವಾರ ಆರಂಭವಾಯಿತು. ಡಾ. ಎ.ಸಿ. ವಾಲಿ ಮಹಾರಾಜರು ವೀಣೆ ಪೂಜೆ ಮಾಡುವ ಮೂಲಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.</p>.<p>ಇಂಚಗೇರಿ ಆಧ್ಯಾತ್ಮ ಸಾಂಪ್ರದಾಯವು ಜಗತ್ತಿನ ಶ್ರೇಷ್ಠ ಸಾಂಪ್ರದಾಯದಲ್ಲಿ ಒಂದಾಗಿದ್ದು, ಜಾತಿ-ಮತ-ಪಂಥ ಮೀರಿದ ಸರ್ವ ಶ್ರೇಷ್ಠ ಸಮಾನತೆಯ ಸಂಪ್ರದಾಯವಾಗಿದೆ. ಬಸವಾದಿ ಶಿವಶರಣರ ತತ್ವ ಸಿದ್ಧಾಂತಗಳನ್ನು ಆಚರಣೆಗೆ ತಂದಿದೆ. ಇಂಚಗೇರಿ ಆಧ್ಯಾತ್ಮ ಸಾಂಪ್ರದಾಯದ ಮೂಲ ಪುರುಷ ಜಗದ್ಗುರು ರೇವಣಸಿದ್ಧರಾಗಿದ್ದಾರೆ. ಸಿದ್ಧಗಿರಿಯ ಕಾಡಸಿದ್ಧರು, ಗುರುಲಿಂಗಜಂಗಮ ಮಹಾರಾಜರು, ಭಾವೂಸಾಹೇಬ ಮಹಾರಾಜರಿಂದ ಗುರು ಪರಂಪರೆ ಬೆಳೆದು ಬಂದಿದೆ ಎಂದರು.</p>.<p>ದೇಶದಾದ್ಯಂತ 1,700 ಮಠಗಳನ್ನು ಹೊಂದಿದೆ. ಜಾತಿ ಜಂಜಡ ದೂರ ತಳ್ಳಿ ಗುರುವಿನ ತತ್ವಸಿದ್ಧಾಂತವನ್ನು ಪಾಲಿಸುತ್ತಾ ಬಂದ ಶ್ರೇಷ್ಠ ಪರಂಪರೆ ಇದಾಗಿದೆ ಎಂದರು.</p>.<p>ಚಂಬಣ್ಣ ಸುರಕೋಡ, ಈಶ್ವರಪ್ಪನವರು ಉಳ್ಳಾಗಡ್ಡಿ, ಮಂಜುಳಾ ಹೂಗಾರ ಮಾತನಾಡಿದರು. ದಾಸಬೋಧ ಪಠಣವನ್ನು ಕೃಷ್ಣ ಜಿಂಗಾಡೆ ನಡೆಸಿಕೊಟ್ಟರು. ಶರಣಬಸಪ್ಪ ದೇಶಮುಖ, ಸುಭಾಷ ವಿಠೋಜಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಅಣ್ಣಿಗೇರಿ: </strong>ಇಂಚಗೇರಿ ಆಧ್ಯಾತ್ಮ ಸಂಪ್ರದಾಯದ ಸದ್ಗುರುಗಳಾದ ಸ.ಸ. ಭಾವೂಸಾಹೇಬ ಮಹಾರಾಜರ ಜ್ಞಾನಯಜ್ಞ ಸಪ್ತಾಹ ಶುಕ್ರವಾರ ಆರಂಭವಾಯಿತು. ಡಾ. ಎ.ಸಿ. ವಾಲಿ ಮಹಾರಾಜರು ವೀಣೆ ಪೂಜೆ ಮಾಡುವ ಮೂಲಕ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.</p>.<p>ಇಂಚಗೇರಿ ಆಧ್ಯಾತ್ಮ ಸಾಂಪ್ರದಾಯವು ಜಗತ್ತಿನ ಶ್ರೇಷ್ಠ ಸಾಂಪ್ರದಾಯದಲ್ಲಿ ಒಂದಾಗಿದ್ದು, ಜಾತಿ-ಮತ-ಪಂಥ ಮೀರಿದ ಸರ್ವ ಶ್ರೇಷ್ಠ ಸಮಾನತೆಯ ಸಂಪ್ರದಾಯವಾಗಿದೆ. ಬಸವಾದಿ ಶಿವಶರಣರ ತತ್ವ ಸಿದ್ಧಾಂತಗಳನ್ನು ಆಚರಣೆಗೆ ತಂದಿದೆ. ಇಂಚಗೇರಿ ಆಧ್ಯಾತ್ಮ ಸಾಂಪ್ರದಾಯದ ಮೂಲ ಪುರುಷ ಜಗದ್ಗುರು ರೇವಣಸಿದ್ಧರಾಗಿದ್ದಾರೆ. ಸಿದ್ಧಗಿರಿಯ ಕಾಡಸಿದ್ಧರು, ಗುರುಲಿಂಗಜಂಗಮ ಮಹಾರಾಜರು, ಭಾವೂಸಾಹೇಬ ಮಹಾರಾಜರಿಂದ ಗುರು ಪರಂಪರೆ ಬೆಳೆದು ಬಂದಿದೆ ಎಂದರು.</p>.<p>ದೇಶದಾದ್ಯಂತ 1,700 ಮಠಗಳನ್ನು ಹೊಂದಿದೆ. ಜಾತಿ ಜಂಜಡ ದೂರ ತಳ್ಳಿ ಗುರುವಿನ ತತ್ವಸಿದ್ಧಾಂತವನ್ನು ಪಾಲಿಸುತ್ತಾ ಬಂದ ಶ್ರೇಷ್ಠ ಪರಂಪರೆ ಇದಾಗಿದೆ ಎಂದರು.</p>.<p>ಚಂಬಣ್ಣ ಸುರಕೋಡ, ಈಶ್ವರಪ್ಪನವರು ಉಳ್ಳಾಗಡ್ಡಿ, ಮಂಜುಳಾ ಹೂಗಾರ ಮಾತನಾಡಿದರು. ದಾಸಬೋಧ ಪಠಣವನ್ನು ಕೃಷ್ಣ ಜಿಂಗಾಡೆ ನಡೆಸಿಕೊಟ್ಟರು. ಶರಣಬಸಪ್ಪ ದೇಶಮುಖ, ಸುಭಾಷ ವಿಠೋಜಿ ಇದ್ದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>