<p><strong>ಧಾರವಾಡ: ‘</strong>ಕಾವ್ಯ ರಚನಾಕಾರರಲ್ಲಿ ಮೊದಲು ಬದ್ದತೆ ಇರಬೇಕು. ಯುವ ಬರಹಗಾರರ ಅಭಿವ್ಯಕ್ತಿಗೆ ಮುಕ್ತ ಅವಕಾಶ ಸಿಗಬೇಕು. ಆಗ ಮಾತ್ರ ಕಾವ್ಯಕ್ಕೆ ಶಕ್ತಿ ತುಂಬಿದಂತಾಗುತ್ತದೆ’ ಎಂದು ಸಿಂಧನೂರಿನ ಪ್ರಾಧ್ಯಾಪಕ ಜಾಜಿ ದೇವೆಂದ್ರಪ್ಪ ಅಭಿಪ್ರಾಯಪಟ್ಟರು.</p>.<p>ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ದಿ. ಎಸ್.ಎಂ. ವೃಷಭೇಂದ್ರಸ್ವಾಮಿ ಸಂಸ್ಮರಣ ದತ್ತಿ ಅಂಗವಾಗಿ ಈಚೆಗೆ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಈ ಕಾಲದ ಕನ್ನಡ ಕಾವ್ಯದ ಆಶಯ ಅಭಿವ್ಯಕ್ತಿ’ ಕುರಿತು ಮಾತನಾಡಿದರು.</p>.<p>‘ಬೇಂದ್ರೆ, ಕುವೆಂಪು, ಗೋಕಾಕ, ಯಕ್ಕುಂಡಿ ಅವರಂತಹ ಕವಿಗಳಲ್ಲಿ ಅದ್ಭುತವಾದ ಕಾವ್ಯ ಶಕ್ತಿ ಇತ್ತು. ಈಗ ಉತ್ತಮ ಬರಹಗಾರರಿದ್ದರೂ, ಅವರ ಕಾವ್ಯ ಓದುವವರ ಸಂಖ್ಯೆ ಇಲ್ಲದಿರುವುದು ಆತಂಕಕಾರಿಯಾಗಿದೆ’ ಎಂದರು. </p>.<p>‘ಶರಣರು, ತತ್ವಪದಕಾರರು, ದಾರ್ಶನಿಕರು ಸಹ ಕಾವ್ಯ ಶಕ್ತಿ ಮೂಲಕ ಒಡೆದ ಮನಸ್ಸುಗಳನ್ನು ಬೆಸೆದು, ಒಂದಾಗಿ ಬಾಳುವುದ ಕಲಿಸಿದರು. ಇಂದಿನ ಬರಹಗಾರರು ಸಮಕಾಲೀನ ಸಾಮಾಜಿಕ ತಲ್ಲಣಗಳು, ಬಿಕ್ಕಟ್ಟು ಕುರಿತು ತಮ್ಮ ಬರಹದ ಮೂಲಕ ಸಮುದಾಯಕ್ಕೆ ತಿಳಿಸಬೇಕಿದೆ. ಕಾವ್ಯ ಪರಂಪರೆಯನ್ನು ಅರಿತು ಮುನ್ನಡೆಯಬೇಕಿದೆ’ ಎಂದು ಹೇಳಿದರು. </p>.<p>ಪ್ರಾಧ್ಯಾಪಕ ಶ್ರೀಪಾದ ಶೆಟ್ಟಿ ಮಾತನಾಡಿ, ‘ಎಸ್.ಎಂ. ವೇಷಭೇಂದ್ರಸ್ವಾಮಿ ಅವರದ್ದು ವರ್ಣರಂಜಿತ ವ್ಯಕ್ತಿತ್ವ. ಅಪಾರ ಜೀವನೋತ್ಸಾಹ ಅವರಲ್ಲಿತ್ತು. ಜೀವನವನ್ನು ಹಬ್ಬದಂತೆ ಕಂಡ ಅವರು ತೋರಿದ ಪ್ರೀತಿ ಅನನ್ಯವಾದುದು’ ಎಂದು ತಿಳಿಸಿದರು.</p>.<p>ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಂಜೀವ ಕುಲಕರ್ಣಿ, ದತ್ತಿದಾನಿ ಎಸ್.ಎಂ. ಶಿವಪ್ರಸಾದ, ಮಹೇಶ ಹೊರಕೇರಿ, ಜಿನದತ್ತ ಹಡಗಲಿ, ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ: ‘</strong>ಕಾವ್ಯ ರಚನಾಕಾರರಲ್ಲಿ ಮೊದಲು ಬದ್ದತೆ ಇರಬೇಕು. ಯುವ ಬರಹಗಾರರ ಅಭಿವ್ಯಕ್ತಿಗೆ ಮುಕ್ತ ಅವಕಾಶ ಸಿಗಬೇಕು. ಆಗ ಮಾತ್ರ ಕಾವ್ಯಕ್ಕೆ ಶಕ್ತಿ ತುಂಬಿದಂತಾಗುತ್ತದೆ’ ಎಂದು ಸಿಂಧನೂರಿನ ಪ್ರಾಧ್ಯಾಪಕ ಜಾಜಿ ದೇವೆಂದ್ರಪ್ಪ ಅಭಿಪ್ರಾಯಪಟ್ಟರು.</p>.<p>ನಗರದ ಕರ್ನಾಟಕ ವಿದ್ಯಾವರ್ಧಕ ಸಂಘದ ರಾ.ಹ.ದೇಶಪಾಂಡೆ ಸಭಾಭವನದಲ್ಲಿ ದಿ. ಎಸ್.ಎಂ. ವೃಷಭೇಂದ್ರಸ್ವಾಮಿ ಸಂಸ್ಮರಣ ದತ್ತಿ ಅಂಗವಾಗಿ ಈಚೆಗೆ ಆಯೋಜಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ‘ಈ ಕಾಲದ ಕನ್ನಡ ಕಾವ್ಯದ ಆಶಯ ಅಭಿವ್ಯಕ್ತಿ’ ಕುರಿತು ಮಾತನಾಡಿದರು.</p>.<p>‘ಬೇಂದ್ರೆ, ಕುವೆಂಪು, ಗೋಕಾಕ, ಯಕ್ಕುಂಡಿ ಅವರಂತಹ ಕವಿಗಳಲ್ಲಿ ಅದ್ಭುತವಾದ ಕಾವ್ಯ ಶಕ್ತಿ ಇತ್ತು. ಈಗ ಉತ್ತಮ ಬರಹಗಾರರಿದ್ದರೂ, ಅವರ ಕಾವ್ಯ ಓದುವವರ ಸಂಖ್ಯೆ ಇಲ್ಲದಿರುವುದು ಆತಂಕಕಾರಿಯಾಗಿದೆ’ ಎಂದರು. </p>.<p>‘ಶರಣರು, ತತ್ವಪದಕಾರರು, ದಾರ್ಶನಿಕರು ಸಹ ಕಾವ್ಯ ಶಕ್ತಿ ಮೂಲಕ ಒಡೆದ ಮನಸ್ಸುಗಳನ್ನು ಬೆಸೆದು, ಒಂದಾಗಿ ಬಾಳುವುದ ಕಲಿಸಿದರು. ಇಂದಿನ ಬರಹಗಾರರು ಸಮಕಾಲೀನ ಸಾಮಾಜಿಕ ತಲ್ಲಣಗಳು, ಬಿಕ್ಕಟ್ಟು ಕುರಿತು ತಮ್ಮ ಬರಹದ ಮೂಲಕ ಸಮುದಾಯಕ್ಕೆ ತಿಳಿಸಬೇಕಿದೆ. ಕಾವ್ಯ ಪರಂಪರೆಯನ್ನು ಅರಿತು ಮುನ್ನಡೆಯಬೇಕಿದೆ’ ಎಂದು ಹೇಳಿದರು. </p>.<p>ಪ್ರಾಧ್ಯಾಪಕ ಶ್ರೀಪಾದ ಶೆಟ್ಟಿ ಮಾತನಾಡಿ, ‘ಎಸ್.ಎಂ. ವೇಷಭೇಂದ್ರಸ್ವಾಮಿ ಅವರದ್ದು ವರ್ಣರಂಜಿತ ವ್ಯಕ್ತಿತ್ವ. ಅಪಾರ ಜೀವನೋತ್ಸಾಹ ಅವರಲ್ಲಿತ್ತು. ಜೀವನವನ್ನು ಹಬ್ಬದಂತೆ ಕಂಡ ಅವರು ತೋರಿದ ಪ್ರೀತಿ ಅನನ್ಯವಾದುದು’ ಎಂದು ತಿಳಿಸಿದರು.</p>.<p>ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷ ಸಂಜೀವ ಕುಲಕರ್ಣಿ, ದತ್ತಿದಾನಿ ಎಸ್.ಎಂ. ಶಿವಪ್ರಸಾದ, ಮಹೇಶ ಹೊರಕೇರಿ, ಜಿನದತ್ತ ಹಡಗಲಿ, ಶಿವಾನಂದ ಭಾವಿಕಟ್ಟಿ, ವೀರಣ್ಣ ಒಡ್ಡೀನ ಇದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>