ದೀಪಕ ಚಿಂಚೋರೆ, ಪಿ.ಎಚ್.ನೀರಲಕೇರಿ, ನಾಗರಾಜ ಗೌರಿ, ಬಸವರಾಜ ಮಲಕಾರಿ, ಆರ್.ಕೆ.ಪಾಟೀಲ ಹಾಗೂ ಮೋರೆ ಅವರ ಪುತ್ರಿ ಕೀರ್ತಿ ಮೋರೆ, ಪಾಲಿಕೆಯ ಯುವ ಸದಸ್ಯ ಹಾಗೂ ಡಾ. ಮಯೂರ ಮೋರೆ ಸೇರಿದಂತೆ ಹಲವರು ಈ ಬಾರಿ ಟಿಕೆಟ್ ಆಕಾಂಕ್ಷಿಗಳಾಗಿದ್ದಾರೆ. ಈಗಾಗಲೇ ಇವರೆಲ್ಲರೂ ಪಾದಯಾತ್ರೆ, ಮುಷ್ಕರಗಳಿಗೆ ಬೆಂಬಲ, ಆರೋಗ್ಯ ಶಿಬಿರ, ಬಡವರಿಗೆ ನೆರವು ಸೇರಿದಂತೆ ಹಲವು ಕಾರ್ಯಗಳ ಮೂಲಕ ಮತದಾರರ ಮನದ ಕದ ತಟ್ಟುವ ಕೆಲಸ ನಡೆಸಿದ್ದಾರೆ.