ಸುದ್ದಿಗೋಷ್ಠಿ ನಡೆದ ಅರ್ಧಗಂಟೆಯಲ್ಲಿ ಕುಲಪತಿಯವರ ಕೊಠಡಿಗೆ ಬಂದ ಎಬಿವಿಪಿ ಸದಸ್ಯರು, ಚೇತನ ಅವರನ್ನು ಆಹ್ವಾನಿಸಬಾರದೆಂದು ಮನವಿ ಮಾಡಿದರು. ದೇಶದ ನ್ಯಾಯಾಂಗ ವ್ಯವಸ್ಥೆಯ ಬಗ್ಗೆ ನಂಬಿಕೆ ಇಲ್ಲದ, ನ್ಯಾಯಾಧೀಶರ ಬಗ್ಗೆ ಟೀಕೆ ಮಾಡಿದ ಹಾಗೂ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಜಾಮೀನಿನ ಮೇಲಿರುವ ಅವರನ್ನು ಉದ್ಘಾಟನೆಗೆ ಆಹ್ವಾನಿಸಿರುವುದು ಖಂಡನೀಯ. ಕೂಡಲೇ ಅವರನ್ನು ಬದಲಾಯಿಸದಿದ್ದರೆ ಕಾರ್ಯಕ್ರಮದ ವೇಳೆ ಪ್ರತಿಭಟನೆ ನಡೆಸುತ್ತೇವೆ ಎಂದು ಎಚ್ಚರಿಕೆ ನೀಡಿದರು.