<p><strong>ಧಾರವಾಡ</strong>: ಕರ್ನಾಟಕ ವಿಶ್ವವಿದ್ಯಾಲಯವು ಹಣಕಾಸಿನ ಕೊರತೆಯಿಂದ ಮಾರ್ಚ್ ತಿಂಗಳ ಪಿಂಚಣಿ ಪಾವತಿಸಿಲ್ಲ. ಕೆಲವು ಪಿಂಚಣಿದಾರರಿಗೆ ನಿವೃತ್ತಿ ಉಪದಾನ (ಡಿಸಿಆರ್ಜಿ), ಗಳಿಕೆ ರಜೆ (ಇಎಲ್) ನಗದು ನೀಡುವುದು ಬಾಕಿ ಇದೆ.</p>.<p>75 ವರ್ಷಗಳ ಇತಿಹಾಸವುಳ್ಳ ಈ ವಿಶ್ವವಿದ್ಯಾಲಯದಲ್ಲಿ 1,748 ನಿವೃತ್ತ ನೌಕರರು ಇದ್ದಾರೆ. ಅವರಿಗೆ ಒಟ್ಟು ₹ 9 ಕೋಟಿ ಪಿಂಚಣಿ ಪಾವತಿಸಬೇಕು. ಕೆಲ ನಿವೃತ್ತ ನೌಕರರ ಡಿಸಿಆರ್ಜಿ, ಇಎಲ್ ಬಾಕಿ ಪಾವತಿಗೆ ₹ 12 ಕೋಟಿ ಪಾವತಿಸುವುದು ಬಾಕಿ ಇದೆ.</p>.<div><blockquote>ಅನುದಾನ ಇಲ್ಲದ ಕಾರಣ ಮಾರ್ಚ್ ಪಿಂಚಣಿ ನೀಡಿಲ್ಲ. ಉನ್ನತ ಶಿಕ್ಷಣ ಇಲಾಖೆಯು 6 ವಿಶ್ವವಿದ್ಯಾಲಯಗಳ ಹಣಕಾಸು ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದಿದ್ದಾರೆ. ಸರ್ಕಾರದ ಗಮನದಲ್ಲೂ ಇದೆ. </blockquote><span class="attribution">ಪ್ರೊ.ಕೃಷ್ಣಮೂರ್ತಿ, ಹಣಕಾಸು ಅಧಿಕಾರಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ</span></div>.<p>ಪಿಂಚಣಿಗಾಗಿ ವಿಶ್ವವಿದ್ಯಾಲಯಕ್ಕೆ ₹ 126 ಕೋಟಿ ಅನುದಾನ ಅಗತ್ಯ ಇದೆ. ಸರ್ಕಾರ ₹ 55 ಕೋಟಿ ಹಂಚಿಕೆ ಮಾಡಿದೆ. ಬಾಕಿ ಹಣವನ್ನು ವಿಶ್ವವಿದ್ಯಾಲಯ ಆಂತರಿಕ ಮೂಲಗಳಿಂದ ಹೊಂದಿಸುವಂತೆ ಸೂಚಿಸಿದೆ.</p>.<p>‘ವಿವಿಧ ಕೋರ್ಸ್ ದಾಖಲಾತಿ ಶುಲ್ಕ, ಗ್ರಂಥಾಲಯ, ಪ್ರಯೋಗಾಲಯ ಶುಲ್ಕ ಇತ್ಯಾದಿಯಿಂದ ₹ 24 ಕೋಟಿ ಸಂಗ್ರಹ ಆಗುತ್ತದೆ. ಆಂತರಿಕ ಮೂಲಗಳಿಂದ ಪಿಂಚಣಿ ಪಾವತಿ ಕಷ್ಟ. ಸರ್ಕಾರಿ ಪದವಿ ಕಾಲೇಜುಗಳ ನಿವೃತ್ತ ನೌಕರರಿಗೆ ನೀಡಲು ಸರ್ಕಾರ ಒಂದು ವ್ಯವಸ್ಥೆ ಕಲ್ಪಿಸಿದೆ. ವಿಶ್ವವಿದ್ಯಾಲಯದ ನಿವೃತ್ತ ನೌಕರರಿಗೂ ಅದನ್ನು ಅನ್ವಯಿಸಬೇಕು’ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಪ್ರೊ.ಕೃಷ್ಣಮೂರ್ತಿ ತಿಳಿಸಿದರು.</p>.<p>ಈ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಐದು ಸಂಯೋಜಿತ ವಿದ್ಯಾಲಯಗಳು, ಎರಡು ಸ್ನಾತಕೋತ್ತರ ಕೇಂದ್ರಗಳು (ಗದಗ ಮತ್ತು ಕಾರವಾರ), ಒಂದು ಪ್ರೌಢಶಾಲೆ, ಒಂದು ಪ್ರಾಥಮಿಕ ಶಾಲೆ ಇವೆ.</p>.<p>‘ನಮಗೆ 80 ವರ್ಷ ವಯಸ್ಸಾಗಿದೆ. ಆಸ್ಪತ್ರೆ ಖರ್ಚು, ಔಷಧ ಇತ್ಯಾದಿಗೆ ಪಿಂಚಣಿಯನ್ನೇ ಅವಲಂಬಿಸಿದ್ದೇವೆ. ಪಿಂಚಣಿ ಪಾವತಿ ವಿಳಂಬ ಮಾಡಬಾರದು. ವಿಶ್ವವಿದ್ಯಾಲಯದ ಅಧಿಕಾರಿಗಳು ಸರ್ಕಾರದ ಜತೆ ಮಾತನಾಡಿ ಸಮಸ್ಯೆ ಪರಿಹರಿಸಬೇಕು’ ಎಂದು ನಿವೃತ್ತ ನೌಕರರೊಬ್ಬರು ಅಳಲು ತೋಡಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಧಾರವಾಡ</strong>: ಕರ್ನಾಟಕ ವಿಶ್ವವಿದ್ಯಾಲಯವು ಹಣಕಾಸಿನ ಕೊರತೆಯಿಂದ ಮಾರ್ಚ್ ತಿಂಗಳ ಪಿಂಚಣಿ ಪಾವತಿಸಿಲ್ಲ. ಕೆಲವು ಪಿಂಚಣಿದಾರರಿಗೆ ನಿವೃತ್ತಿ ಉಪದಾನ (ಡಿಸಿಆರ್ಜಿ), ಗಳಿಕೆ ರಜೆ (ಇಎಲ್) ನಗದು ನೀಡುವುದು ಬಾಕಿ ಇದೆ.</p>.<p>75 ವರ್ಷಗಳ ಇತಿಹಾಸವುಳ್ಳ ಈ ವಿಶ್ವವಿದ್ಯಾಲಯದಲ್ಲಿ 1,748 ನಿವೃತ್ತ ನೌಕರರು ಇದ್ದಾರೆ. ಅವರಿಗೆ ಒಟ್ಟು ₹ 9 ಕೋಟಿ ಪಿಂಚಣಿ ಪಾವತಿಸಬೇಕು. ಕೆಲ ನಿವೃತ್ತ ನೌಕರರ ಡಿಸಿಆರ್ಜಿ, ಇಎಲ್ ಬಾಕಿ ಪಾವತಿಗೆ ₹ 12 ಕೋಟಿ ಪಾವತಿಸುವುದು ಬಾಕಿ ಇದೆ.</p>.<div><blockquote>ಅನುದಾನ ಇಲ್ಲದ ಕಾರಣ ಮಾರ್ಚ್ ಪಿಂಚಣಿ ನೀಡಿಲ್ಲ. ಉನ್ನತ ಶಿಕ್ಷಣ ಇಲಾಖೆಯು 6 ವಿಶ್ವವಿದ್ಯಾಲಯಗಳ ಹಣಕಾಸು ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದಿದ್ದಾರೆ. ಸರ್ಕಾರದ ಗಮನದಲ್ಲೂ ಇದೆ. </blockquote><span class="attribution">ಪ್ರೊ.ಕೃಷ್ಣಮೂರ್ತಿ, ಹಣಕಾಸು ಅಧಿಕಾರಿ ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ</span></div>.<p>ಪಿಂಚಣಿಗಾಗಿ ವಿಶ್ವವಿದ್ಯಾಲಯಕ್ಕೆ ₹ 126 ಕೋಟಿ ಅನುದಾನ ಅಗತ್ಯ ಇದೆ. ಸರ್ಕಾರ ₹ 55 ಕೋಟಿ ಹಂಚಿಕೆ ಮಾಡಿದೆ. ಬಾಕಿ ಹಣವನ್ನು ವಿಶ್ವವಿದ್ಯಾಲಯ ಆಂತರಿಕ ಮೂಲಗಳಿಂದ ಹೊಂದಿಸುವಂತೆ ಸೂಚಿಸಿದೆ.</p>.<p>‘ವಿವಿಧ ಕೋರ್ಸ್ ದಾಖಲಾತಿ ಶುಲ್ಕ, ಗ್ರಂಥಾಲಯ, ಪ್ರಯೋಗಾಲಯ ಶುಲ್ಕ ಇತ್ಯಾದಿಯಿಂದ ₹ 24 ಕೋಟಿ ಸಂಗ್ರಹ ಆಗುತ್ತದೆ. ಆಂತರಿಕ ಮೂಲಗಳಿಂದ ಪಿಂಚಣಿ ಪಾವತಿ ಕಷ್ಟ. ಸರ್ಕಾರಿ ಪದವಿ ಕಾಲೇಜುಗಳ ನಿವೃತ್ತ ನೌಕರರಿಗೆ ನೀಡಲು ಸರ್ಕಾರ ಒಂದು ವ್ಯವಸ್ಥೆ ಕಲ್ಪಿಸಿದೆ. ವಿಶ್ವವಿದ್ಯಾಲಯದ ನಿವೃತ್ತ ನೌಕರರಿಗೂ ಅದನ್ನು ಅನ್ವಯಿಸಬೇಕು’ ಎಂದು ಕರ್ನಾಟಕ ವಿಶ್ವವಿದ್ಯಾಲಯದ ಹಣಕಾಸು ಅಧಿಕಾರಿ ಪ್ರೊ.ಕೃಷ್ಣಮೂರ್ತಿ ತಿಳಿಸಿದರು.</p>.<p>ಈ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಐದು ಸಂಯೋಜಿತ ವಿದ್ಯಾಲಯಗಳು, ಎರಡು ಸ್ನಾತಕೋತ್ತರ ಕೇಂದ್ರಗಳು (ಗದಗ ಮತ್ತು ಕಾರವಾರ), ಒಂದು ಪ್ರೌಢಶಾಲೆ, ಒಂದು ಪ್ರಾಥಮಿಕ ಶಾಲೆ ಇವೆ.</p>.<p>‘ನಮಗೆ 80 ವರ್ಷ ವಯಸ್ಸಾಗಿದೆ. ಆಸ್ಪತ್ರೆ ಖರ್ಚು, ಔಷಧ ಇತ್ಯಾದಿಗೆ ಪಿಂಚಣಿಯನ್ನೇ ಅವಲಂಬಿಸಿದ್ದೇವೆ. ಪಿಂಚಣಿ ಪಾವತಿ ವಿಳಂಬ ಮಾಡಬಾರದು. ವಿಶ್ವವಿದ್ಯಾಲಯದ ಅಧಿಕಾರಿಗಳು ಸರ್ಕಾರದ ಜತೆ ಮಾತನಾಡಿ ಸಮಸ್ಯೆ ಪರಿಹರಿಸಬೇಕು’ ಎಂದು ನಿವೃತ್ತ ನೌಕರರೊಬ್ಬರು ಅಳಲು ತೋಡಿಕೊಂಡರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>