ಈ ಕುರಿತು ಪ್ರಜಾವಾಣಿಗೆ ಪ್ರತಿಕ್ರಿಯಿಸಿದ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಕುಲಪತಿ ಡಾ. ಅಶೋಕ ಶೆಟ್ಟರ್ ‘ಕೆಎಲ್ಇ ಸಂಸ್ಥೆ ಯಾವಾಗಲೂ ಅನ್ವೇಷಣೆಗಳಿಗೆ ಒತ್ತು ಕೊಡುತ್ತಲೇ ಬಂದಿದೆ. ಅನ್ವೇಷಣೆ, ವಿಶ್ವವಿದ್ಯಾಲಯದ ಶೈಕ್ಷಣಿಕ ಸಾಧನೆ, ಹೊಂದಿರುವ ಸೌಲಭ್ಯ, ಸಂಶೋಧನೆಗಳ ವಿಷಯದಲ್ಲಿ ಮಾಡಿದ ಸಾಧನೆ ಪರಿಗಣಿಸಿ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಈ ಸ್ಥಾನಗಳನ್ನು ನೀಡುತ್ತದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಹೊಸ ಅನ್ವೇಷಣೆಗಳನ್ನು ಮಾಡಲು ಈಗಿನ ಗೌರವ ಪ್ರೇರಣೆಯಾಗಿದೆ’ ಎಂದರು.