ಹುಬ್ಬಳ್ಳಿ:ಕುಂದಗೋಳ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯ ಕಾಂಗ್ರೆಸ್ ಟಿಕೆಟ್ ಅನ್ನು ಇತ್ತೀಚೆಗೆ ನಿಧನರಾದ ಸಿ.ಎಸ್.ಶಿವಳ್ಳಿ ಅವರ ಪತ್ನಿ ಕುಸುಮಾ ಶಿವಳ್ಳಿ ಅವರಿಗೆ ನೀಡಬೇಕು ಎಂದು ಶಿವಳ್ಳಿ ಬೆಂಬಲಿಗರು ಆಗ್ರಹಿಸಿದರು.
ಕಾರವಾರ ರಸ್ತೆಯಲ್ಲಿರುವ ಕಾಂಗ್ರೆಸ್ ಕಚೇರಿ ಎದುರು ಜಮಾಯಿಸಿದ ಶಿವಳ್ಳಿ ಅವರ ಬೆಂಬಲಿಗರು ಪಕ್ಷದ ವೀಕ್ಷಕರಾದ ವಿ.ಆರ್.ಸುದರ್ಶನ್ ಅವರಿಗೆ ಮನವಿ ಸಲ್ಲಿಸಿದರು.