<p><strong>ಹುಬ್ಬಳ್ಳಿ</strong>: ‘ವಿದೇಶದ ಪುಸ್ತಕ ಪ್ರಕಾಶನ ಕ್ಷೇತ್ರದಲ್ಲಿ ಇರುವಷ್ಟು ಪ್ರಾಮಾಣಿಕತೆ ಭಾರತದಲ್ಲಿ ಕಾಣಸಿಗದು. ಎಷ್ಟು ಮಂದಿ ಪ್ರಾಮಾಣಿಕರು ಇದ್ದಾರೆ ಎಂಬುದು ಹುಡುಕಬೇಕಿದೆ’ ಎಂದು ಕಾದಂಬರಿಕಾರ ಎಸ್.ಎಲ್. ಭೈರಪ್ಪ ತಿಳಿಸಿದರು.</p>.<p>ಸಾಹಿತ್ಯ ಭಂಡಾರದ ಮ.ಅನಂತಮೂರ್ತಿ ಅವರ ಪುಣ್ಯತಿಥಿ ಪ್ರಯುಕ್ತ ಡಾ. ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆ ಮತ್ತು ಸಾಹಿತ್ಯ ಪ್ರಕಾಶನ ಮಂಗಳವಾರ ಆಯೋಜಿಸಿದ್ದ ಪ್ರಕಾಶಕರಿಗೆ ಸನ್ಮಾನ, ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ನನ್ನ ಕೃತಿಗಳನ್ನು ಹಿಂದಿಗೆ ಅನುವಾದ ಮಾಡಿಸಿಕೊಟ್ಟರೂ, ಹಿಂದಿ ಪ್ರಕಾಶಕರು ಕೇವಲ ₹25 ಸಾವಿರ ನೀಡಿದರು. ನೇಪಾಳದ ವಿಶ್ವವಿದ್ಯಾಲಯದಲ್ಲೂ ಹಿಂದಿಯಲ್ಲಿ ಅನುವಾದಗೊಂಡ ನನ್ನ ಕೃತಿಗಳಿವೆ. ಇಷ್ಟೆಲ್ಲ ವ್ಯಾಪಾರವಾಗಿದ್ದರೂ, ಹೆಚ್ಚು ಹಣ ನೀಡುವುದಿಲ್ಲ’ ಎಂದರು.</p>.<p>‘ಬಹುತೇಕ ಪ್ರಕಾಶಕರು ಮರುಮುದ್ರಣದ ಮಾಹಿತಿ ನೀಡುವುದಿಲ್ಲ. ದುಪ್ಪಟ್ಟು ದರ ನಿಗದಿಪಡಿಸಿ, ಓದುಗರಿಗೆ ಭಯ ಹುಟ್ಟಿಸುತ್ತಾರೆ. ಕಳ್ಳ ಲೆಕ್ಕ ಕೊಡುವವರೂ ಇದ್ದಾರೆ. ಮಾರ್ವಾಡಿಗಳೇ ಹೀಗೆ. ಪ್ರಾಮಾಣಿಕ ಪ್ರಕಾಶಕರನ್ನು ಗೌರವಿಸಿದರೆ, ಇತರರಿಗೂ ಪ್ರೇರಣೆ ಆಗಬಹುದು. ಈ ವಿಷಯದಲ್ಲಿ ಕನ್ನಡದ ಪ್ರಕಾಶನ ಕ್ಷೇತ್ರ ದೇಶಕ್ಕೆ ಮಾದರಿಯಾಗಲಿ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಹುಬ್ಬಳ್ಳಿ</strong>: ‘ವಿದೇಶದ ಪುಸ್ತಕ ಪ್ರಕಾಶನ ಕ್ಷೇತ್ರದಲ್ಲಿ ಇರುವಷ್ಟು ಪ್ರಾಮಾಣಿಕತೆ ಭಾರತದಲ್ಲಿ ಕಾಣಸಿಗದು. ಎಷ್ಟು ಮಂದಿ ಪ್ರಾಮಾಣಿಕರು ಇದ್ದಾರೆ ಎಂಬುದು ಹುಡುಕಬೇಕಿದೆ’ ಎಂದು ಕಾದಂಬರಿಕಾರ ಎಸ್.ಎಲ್. ಭೈರಪ್ಪ ತಿಳಿಸಿದರು.</p>.<p>ಸಾಹಿತ್ಯ ಭಂಡಾರದ ಮ.ಅನಂತಮೂರ್ತಿ ಅವರ ಪುಣ್ಯತಿಥಿ ಪ್ರಯುಕ್ತ ಡಾ. ಡಿ.ಎಸ್. ಕರ್ಕಿ ಸಾಹಿತ್ಯ ವೇದಿಕೆ ಮತ್ತು ಸಾಹಿತ್ಯ ಪ್ರಕಾಶನ ಮಂಗಳವಾರ ಆಯೋಜಿಸಿದ್ದ ಪ್ರಕಾಶಕರಿಗೆ ಸನ್ಮಾನ, ಪುಸ್ತಕಗಳ ಬಿಡುಗಡೆ ಸಮಾರಂಭದಲ್ಲಿ ಅವರು ಮಾತನಾಡಿದರು.</p>.<p>‘ನನ್ನ ಕೃತಿಗಳನ್ನು ಹಿಂದಿಗೆ ಅನುವಾದ ಮಾಡಿಸಿಕೊಟ್ಟರೂ, ಹಿಂದಿ ಪ್ರಕಾಶಕರು ಕೇವಲ ₹25 ಸಾವಿರ ನೀಡಿದರು. ನೇಪಾಳದ ವಿಶ್ವವಿದ್ಯಾಲಯದಲ್ಲೂ ಹಿಂದಿಯಲ್ಲಿ ಅನುವಾದಗೊಂಡ ನನ್ನ ಕೃತಿಗಳಿವೆ. ಇಷ್ಟೆಲ್ಲ ವ್ಯಾಪಾರವಾಗಿದ್ದರೂ, ಹೆಚ್ಚು ಹಣ ನೀಡುವುದಿಲ್ಲ’ ಎಂದರು.</p>.<p>‘ಬಹುತೇಕ ಪ್ರಕಾಶಕರು ಮರುಮುದ್ರಣದ ಮಾಹಿತಿ ನೀಡುವುದಿಲ್ಲ. ದುಪ್ಪಟ್ಟು ದರ ನಿಗದಿಪಡಿಸಿ, ಓದುಗರಿಗೆ ಭಯ ಹುಟ್ಟಿಸುತ್ತಾರೆ. ಕಳ್ಳ ಲೆಕ್ಕ ಕೊಡುವವರೂ ಇದ್ದಾರೆ. ಮಾರ್ವಾಡಿಗಳೇ ಹೀಗೆ. ಪ್ರಾಮಾಣಿಕ ಪ್ರಕಾಶಕರನ್ನು ಗೌರವಿಸಿದರೆ, ಇತರರಿಗೂ ಪ್ರೇರಣೆ ಆಗಬಹುದು. ಈ ವಿಷಯದಲ್ಲಿ ಕನ್ನಡದ ಪ್ರಕಾಶನ ಕ್ಷೇತ್ರ ದೇಶಕ್ಕೆ ಮಾದರಿಯಾಗಲಿ’ ಎಂದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>